ಬೈಲಹೊಂಗಲ: ಭಾರತದ ಮೇಲೆ ಸದಾ ಕಾಲಕರೆದು ಜಗಳಕ್ಕೆ ಬರುವ ಪಾಕಿಸ್ತಾನಕ್ಕೆ ಈ ಬಾರಿ ಬುದ್ದಿ ಕಲಿಸುವದರೊಂದಿಗೆ ಅದರ ಹುಟ್ಟು ಅಡಗಿಸಿರುವ ಭಾರತೀಯ ಸೈನಿಕರಿಗೆ ಸೃಷ್ಟಿಕರ್ತ ಪರಮಾತ್ಮ ಸರ್ವಶಕ್ತಿಯನ್ನು ನೀಡಿ ಅವರಿಗೆ ಯಾವುದೆ ತೊಂದರೆಯಾಗದಂತೆ ಭಗವಂತ ನೋಡಿಕೊಳ್ಳವಂತೆ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮನ ವೃತ್ತದಿಂದ ಐತಿಹಾಸಿಕ ಕರಿಗುಡಿಯ ರಾಮಲಿಂಗಶ್ವರ ದೇವಸ್ಥಾನದ ವರೆಗೆ ತಿರಂಗಾ ಬೈಕ್ ಜಾಥಾ ನಡೆಸಿ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಹಾಗೂ ರಾಮಲಿಂಗೇಶ್ವರರಿಗೆ ವಿಶೇಷ ಪೂಜೆ ನಡೆಸಿ ಸೈನಿಕರಿಗೆ ಹಾಗೂ ಅವರ ಕುಟುಂಬಕ್ಕೆ ಸರ್ವ ಶಕ್ತಿ ದಯಪಾಲಿಸುವಂತೆ ಮಾಜಿ ಸೈನಿಕರ ಸಮನ್ವಯ ಸಮಿತಿ ಸದಸ್ಯರು ಪ್ರಾರ್ಥಿಸಿದರು.
ಪೂಜೆಯ ನಂತರ ಸಂಘದ ಅಧ್ಯಕ್ಷ ಮಾಜಿ ಸೈನಿಕ ಬಿ.ಬಿ.ಬೋಗೂರ ಮಾತನಾಡಿ, ಭಾರತೀಯ ರಕ್ಷಣಾ ವ್ಯವಸ್ಥೆ ಈ ಹಿಂದಿನ ಕಾಲಕ್ಕಿಂತ ಹೆಚ್ಚು ಬಲಾಡ್ಯವಾಗಿದೆ. ಎಲ್ಲ ವಿಧದಲ್ಲಿ ಜಗತ್ತಿನ ಎಂತಹ ಶಕ್ತಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ. ಪಾಕಿಸ್ತಾನ ತನ್ನಲ್ಲಿರುವ ಉಗ್ರಗಾಮಿಗಳನ್ನು ಭಾರತಕ್ಕೆ ಒಪ್ಪಿಸಿ ಭಾರತದ ಅವಿಭಾಜ್ಯ ಅಂಗ ಜಮ್ಮು ಕಾಶ್ಮೀರದ ಕೆಲ ಆಕ್ರಮೀತ ಭಾಗವನ್ನು ಭಾರತಕ್ಕೆ ಮರಳಿಸಿ ಭವಿಷ್ಯತ್ತಿನಲ್ಲಿ ಭಾರತದ ವಿರುದ್ದ ಎಂದು ಕೆಡನ್ನು ಬಯಸಲಾರದ ಒಪ್ಪಂದ ಮಾಡಿದರೆ ಮಾತ್ರ ಭಾರತ ಒಪ್ಪಬೇಕು. ಇಲ್ಲದಿದ್ದರೆ ಪಾಕಿಸ್ತಾನದ ಸರ್ವ ರೀತಿಯಾಗಿ ನಿರ್ಣಾಮ ಮಾಡುವ ನಿರ್ಣಯ ಭಾರತೀಯ ರಕ್ಷಣಾ ಪಡೆಗಳಿಗಿದ್ದು ಅವರ ಸಾಹಯಕ್ಕೆ ಮಾಜಿ ಸೈನಿಕರು ಸಿದ್ದರಿದ್ದೆವೆ ಯುದ್ದಕ್ಕೆ ಕರೆ ಬಂದರೆ ಕ್ಷಣಾರ್ಧದಲ್ಲಿ ನಾವು ಹೊರಡಲು ತುದಿಗಾಲದ ಮೇಲೆ ನಿಂತಿದ್ದೆವೆ ಎಂದರು
ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಪಾಕಿಸ್ತಾನದ ಉಪಟಳ 1947 ರಿಂದ ಅಹಿಸುತ್ತಾ ಬಂದಿದ್ದೆವೆ. ಇದು ಇನ್ನು ಮುಂದುವರೆಯದೆ ಶಾಶ್ವತವಾಗಿ ಅಂತ್ಯವಾಗಬೇಕು. ಇದಕ್ಕೆ ಪಾಕಿಸ್ತಾನ ಭೂಪಟದಿಂದ ಕಣ್ಮರೆಯಾದರೆ ಮಾತ್ರ ಸಾಧ್ಯ ಎಮ್ನುವ ಸ್ಥಿತಿ ಇದ್ದು ಇದಕ್ಕೆ ನಮ್ಮ ಸೈನಿಕ ಬಲ ತುದಿಗಾಲದ ಮೇಲೆ ನಿಂತಿದೆ. ಭಾರತದ ಪರಾಕ್ರಮ ನಾಲ್ಕೆ ದಿನದಲ್ಲಿ ಜಗಜ್ಜಾಹಿರವಾಗಿದ್ದು ಚೀನಾದಂತ ದೇಶಗಳು ಬಾಯಿಮುಚ್ಚಿಕೊಂಡಿವೆ. ಶಾಂತಿಮಂತ್ರ ಜಪಿಸುತ್ತಿವೆ. ಪಾಕಿಸ್ತಾನ ಕಪಟ ನೀತಿಯಿಂದ ಕದನ ವಿರಾಮಕ್ಕೆ ಮೊಂಡಿ ಉರಿದರೆ ಇನ್ನುಂದು ಕಡೆ ದೇಶದ ಬಗ್ಗೆ ಅಪಪ್ರಚಾರ ಹಾಗೂ ಡ್ರೋಣ ದಾಳಿಮಾಡಿತನ್ನ ಕಪಟತನ ಪ್ರದರ್ಶಿಸಿದೆ. ಇಸ್ಲಾಮಾಬಾದ ವರೆಗೆ ಅಡಗಿದ್ದ ಉಗ್ರರ ಸಂಹಾರ ನಮ್ಮ ಮೇಲೆ ಕಣ್ಣಣಾಹಾಕಿದ್ದ ಪಾಕಿಸ್ತಾನದ ರಕ್ಷಣಾ ನೆಲೆಗಳು ಮಣ್ಣು ಮುಕ್ಕಿವೆ. ಭಾರತ ಎಲ್ಲ ರೀತಿಯಿಂದ ಬಲಾಡ್ಯವಿದ್ದು ಭವಿಷ್ಯತ್ತಿನಲ್ಲಿ ಪಾಕಿಸ್ತಾನ ಇಲ್ಲದಂತೆ ಮಾಡುವ ಎಲ್ಲ ಅವಕಾಶವಿದ್ದು ಪ್ರಧಾನಿಗಳು ಮತ್ತು ನಮ್ಮ ಸೈನಿಕ ಬಲ ತಗೆದುಕೊಳ್ಳುವ ನಿರ್ಧಾರ ಭಾರತ ಜಗದ್ಗುರು ಸ್ಥಾನಕ್ಕೆರಲಿದೆ ಎಂದರು.
ಮಾಜಿ ಸೈನಿಕರು ಪಾಟಕಿ ಸಿಡಿಸಿ ಪಾಕಿಸ್ತಾನದ ಮೇಲಿನದಾಳಿಯನ್ನು ವಿಜೃಂಬಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಚಂದ್ರಶೇಖರ ನೇಸರಗಿ, ಮಾಜಿ ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಶೇಖರ ನವಲಗಟ್ಟಿ, ದೇಮಪ್ಪ ಶಿರಗಾಂವಿ, ರಾಜಕುಮಾರ ಸವಟಗಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಗಡದವರ, ಮಂಜುನಾಥ ಬಾಗೆವಾಡಿ, ಶಂಕರ ಬೇವಿನ, ಸುರೇಶ ಕಂಬಾರ, ಚಂದ್ರಗೌಡ ಪಾಟೀಲ, ಶಿವಾನಂದ ಹಡಪದ, ಎಸ್.ಎಮ್. ಪಾಟೀಲ, ಸೋಮಶೇಖರ ಹೊಸಮನಿ, ಎಮ್.ಜಿ. ಗೋಧಿ, ಬಸವರಾಜ ಹೊಳೆಪ್ಪನವರ, ಚಂದ್ರಗೌಡ ಗೌಡರ, ಮಹಾಂತೇಶ ಕುಸಲಾಪೂರ, ಬಾಬು ವಾಲಿಕಾರ, ನಾಗಪ್ಪ ಮಡಿವಾಳರ, ನಜೀರ ಕಿಲ್ಲೆದಾರ, ಗೀತಾ ಗರಗದ, ಮಲ್ಲಿಕಾರ್ಜುನ ಗಡದವರ, ಶಿವಾ ಕರಜನ್ನವರ, ಬಸವರಾಜ ಹೊಂಗಲ, ಮಾಲಾ ಸಂಗಣ್ಣವರ ಸೇರಿದಂತೆ ನೂರಾರು ಮಾಜಿ ಸೈನಿಕರು ಇದ್ದರು.