ಬೆಳಗಾವಿ :ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನಕ್ಕೆ ಉತ್ತರ ಕೊಡಲು ಭಾರತೀಯ ಸೇನೆ ಸಜ್ಜಾಗಿದೆ ರಜೆ ಮೇಲೆ ಬಂದಿದ್ದ ಯೋಧರಿಗೆ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳಿಂದ ಬುಲಾವ್ ಬಂದಿದೆ. ವಾರದ ಹಿಂದಷ್ಟೇ ಮದುವೆ, ನಿಶ್ಚಿತಾರ್ಥ ಆಗಿದ್ದ ಯೋಧರು ಕರ್ತವ್ಯಕ್ಕೆ ಹಾಜರಾಗಲು ಸಜ್ಜು ಆಗಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದ ನಾಲ್ವರು ಯೋಧರು ರಜೆ ಮೊಟಕುಗೊಳಿಸಿ ಕಳೆದ ವಾರವಷ್ಟೇ ವಿವಾಹವಾಗಿದ್ದ ಸೇನೆಯಲ್ಲಿರುವ ಸಹೋದರರು ಉಮೇಶ ಧ್ಯಾಮಣ್ಣವರ, ಸಂಘಮೇಶ ಧ್ಯಾಮಣ್ಣವರ ಸಹೋದರಿಂದ ದೇಶಸೇವೆ ಸೇನೆ ಬುಲಾವ್ ಹಿನ್ನಲೆಯಲ್ಲಿ ನಿನ್ನೆಯೇ ಜಮ್ಮುಗೆ ತೆರಳಿರುವ ಉಮೇಶ ಧ್ಯಾಮಣ್ಣವರ ಇಂದು ಮತ್ತೋರ್ವ ಸಹೋದರ ಸಂಘಮೇಶ ಕೂಡ ಜಮ್ಮುಗೆ ಹೋಗಲು ಸಿದ್ಧತೆ ಮಾಡಿದ್ದಾರೆ.
ಕಳೆದ ಐದಾರು ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಧ್ಯಾಮಣ್ಣವರ ಸಹೋದರರು.ಮಕ್ಕಳು ದೇಶಸೇವೆ ಮಾಡ್ತಿದ್ದಾರೆ, ಹೋಗಿ ಯುದ್ಧದಲ್ಲಿ ಗೆಲುವು ಸಾಧಿಸಲಿ ಎಂದ ಧ್ಯಾಮಣ್ಣವರ ತಾಯಿ ಸಂಘಮೇಶ ಪತ್ನಿ ಕೂಡ ದೇಶ ಮೊದಲು ಪತಿಯನ್ನು ಯುದ್ಧಭೂಮಿಗೆ ಹೆಮ್ಮೆಯಿಂದ ಕಳುಹಿಸುವೆ ಎಂದರು.
ಕಳೆದ ವಾರ ಮದುವೆ ಆಗಿದ್ದ ಯೋಧ ಶಿವರಾಕ್ ಚಿಕ್ಕನ್ನವರ ಕೂಡ ಸೇನೆಯಿಂದ ಬುಲಾವ್ ಈ ಯೋಧ ಕೂಡ ದೇಶ ಸೇವೆಗೆಂದು ಅಸ್ಸಾಂಗೆ ಹೋಗಲು ಸಿದ್ಧ ಶಿವರಾಜ್ ಕಾರ್ಯಕ್ಕೆ ಅವರ ಪತ್ನಿ, ತಾಯಿ ಕೂಡ ಹೆಮ್ಮೆಯ ಮಾತು ಆಗಿತ್ತು.