Wednesday, June 18, 2025
Google search engine
Homeರಾಷ್ಟ್ರೀಯಯುದ್ಧಕ್ಕೆ ಹೋಗಲು ಸಿದ್ದ ಎಂದ ಮಾಜಿ ಸುಭೇದಾರ್‌
spot_img

ಯುದ್ಧಕ್ಕೆ ಹೋಗಲು ಸಿದ್ದ ಎಂದ ಮಾಜಿ ಸುಭೇದಾರ್‌

ಬೆಳಗಾವಿ : 30 ವರ್ಷ ಸೈನ್ಯದಲ್ಲಿ ಸೇವೆ ಮಾಡಿ ಎರಡು ತಿಂಗಳ ಹಿಂದಷ್ಟೆ ನಿವೃತ್ತಿ ಹೊಂದಿರುವೆ ಇವಾಗಲು ಸೈನ್ಯ  ಕರೆದರೆ ಯುದ್ಧಕ್ಕೆ   ಹೋಗಲು ಸಿದ್ದ ಎಂದು ಮಾಜಿ ಸುಭೇದಾರ್‌ ಅಶೋಕ್ ಕುಂದರಗಿ  ಹೇಳಿದರು.

ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ವೀರ ಯೋಧ  ಮಾಜಿ ಸುಭೇದಾರ್ ಅಶೋಕ್ ಕುಂದರಗಿ  ಅವರು ಮಾದ್ಯಮ ಜೋತೆ ಮಾತನಾಡಿದ ಅವರು ಭಾರತದ  ಸೈನ್ಯ ಯವುದೇ  ಗಂಭೀರ ಸ್ಥಿತಿಯಲ್ಲಿಲ್ಲ ಎಲ್ಲವನ್ನು ಪೇಸ್ ಮಾಡುವಂತ ಸಾಮರ್ಥ್ಯ ಹೊಂದಿದೇನೆ . ನಾನು ಕೂಡಾ ಅದೇ ಸೈನ್ಯದಲ್ಲಿ 30 ವರ್ಷ ಸರ್ವಿಸ್ ಮುಗಿಸಿ ಈಗ ಎರಡು ತಿಂಗಳ ಹಿಂದೆ ನಿವೃತ್ತಿ ಹೊಂದಿದ್ಧೆನೆ ಎಂದರು.

ಸೈನಿಕರನ್ನು ತಯಾರು ಮಾಡುವುದು ಮತ್ತು ಸೈನಿಕರಿಗೆ ತರಭೇತಿ ಕೊಡುವುದೇ ನಮ್ಮ ಕೆಲಸ ಮರಾಠಾ ಲೈಟ್ ಇನ್ಪ್ಯಾಂಟ್ರಿಯಲ್ಲಿ ಆರು ವರ್ಷ ಕೆಲಸ ಮಾಡಿದ್ದೆನೆ. ಅಟಲ್ ರೆಜಿಮೆಂಟ್ ಸೆಂಟರ್,ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲೂ ಸಹ  ಕೊಡುವ ಕೆಲಸ ಮಾಡಿದ್ದೆನೆ. ಹಾಗಾಗಿ ನಮ್ಮನ್ನೂ ಕರೆಸುಕೊಳ್ಳುವ ಸಾಧ್ಯತೆ ಇದೆ ಎಂದರು.

ರಜೆಯ ಮೇಲೆ ಇದ್ದವರು ಈಗಾಗಲೇ ಮರಳಿ ಸೈನ್ಯಕ್ಕೆ ಹೋಗಿದ್ದಾರೆ. ನಮ್ಮನ್ನು ಕರೆದರೆ ನಾವೂ ಸಹ ಮರಳಿ ಸೈನ್ಯಕ್ಕೆ ಹೋಗುತ್ತೇನೆ ಎಂದು ಸುಭೇದಾರ್ ಅಶೋಕ್ ಕುಂದರಗಿ ತಿಳಿಸಿದರು.

RELATED ARTICLES
- Advertisment -spot_img

Most Popular

error: Content is protected !!