Wednesday, June 18, 2025
Google search engine
Homeರಾಷ್ಟ್ರೀಯಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು
spot_img

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು

ಬೆಳಗಾವಿ: ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆಗಮನ ಹಿನ್ನೆಲೆಯಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಧಾರವಾಡದ ರಾಷ್ಟ್ರೋತ್ಥಾನ ಕೇಂದ್ರದಲ್ಲಿ ನಡೆಯಲಿರುವ ಆರ್ ಎಸ್ ಎಸ್ ಕ್ಯಾಂಪ್‌ ನಲ್ಲಿ ಭಾಗವಹಿಸಲು ಮೋಹನ್ ಭಾಗವತ್ ಆಗಮಿಸಿದ್ದರು. ಇಂದು ಸಾಯಂಕಾಲ ಬೆಳಗಾವಿ ಸಾಂಬ್ರಾ ವಿಮಾನಕ್ಕೆ ಭಾಗವತ್ ಬಂದರು. ಈ ವೇಳೆ ಸಿಐಎಸ್ ಎಫ್ ಯೋಧರು ಹಾಗೂ ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು.

ಮೋಹನ್ ಭಾಗವತ್ ಬರುತ್ತಿದ್ದಂತೆ ಆಪರೇಷನ್ ಸಿಂಧೂರ ಕುರಿತು ಮಾಧ್ಯಮಗಳು ಪ್ರಶ್ನೆ ಕೇಳುತ್ತಿದ್ದಂತೆ ಈ ಸಮಯದಲ್ಲಿ ನಾವು ನೀವು ಎಲ್ಲರೂ ಒಂದಾಗಿರೋಣ ಅಂತಾ ಅಷ್ಟೇ ಹೇಳಿ ಅಲ್ಲಿ ಅವರು ಹೊರಟು ಹೋದರು.

ಬಳಿಕ ಬೆಳಗಾವಿಯಿಂದ ರಸ್ತೆ ಮಾರ್ಗದ ಮೂಲಕ ಧಾರವಾಡದ ರಾಷ್ಟ್ರೋತ್ಥಾನ ಕೇಂದ್ರಕ್ಕೆ ಮೋಹನ್ ‌ಭಾಗವತ್ ಪ್ರಯಾಣ ಬೆಳೆಸಿದರು.

 

RELATED ARTICLES
- Advertisment -spot_img

Most Popular

error: Content is protected !!