ಬೆಳಗಾವಿ: ಆರ್ ಸಿಬಿ, ಸ್ಟೇಡಿಯಂನರವರು ಸರ್ಕಾರದ ಅನುಮತಿ ಪಡೆದು ಕಾರ್ಯಕ್ರಮ ಮಾಡಬೇಕಿತು. ಒಂದೇ ಕಾರ್ಯಕ್ರಮ ಸಾಕಾಗಿತು, ಎರಡನೇ ಕಾರ್ಯಕ್ರಮ ಅವಶ್ಯಕತೆ ಇರಲಿಲ್ಲ ಆದರೂ ಸ್ಟೇಡಿಯಂನರು ಕಾರ್ಯಕ್ರಮ ಮಾಡಿದ್ದಾರೆ ಆರ್ ಸಿಬಿ ಟೀಮ ನಡೆಸುವವರು ಹಾಗೂ ಸ್ಟೇಡಿಯಂನವರೇ ಇದಕ್ಕೆ ನೇರ ಹೊಣೆಗಾರರು ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಇಂದು ಮಾದ್ಯಮ ಜೋತೆ ಮಾತನಾಡಿದ ಅವರು ಪೊಲೀಸರ ಅನುಮತಿ ಇಲ್ದೆ ಕಾರ್ಯಕ್ರಮ ಮಾಡಿದ್ದಾರೆ, ಇದೊಂದು ದುರ್ದೈವದ ಸಂಗತಿ ಎಂದು ಹೇಳಿದರು .
ಸಚಿವ ಸಂಪುಟದಲ್ಲಿ ಚರ್ಚಿಸಿದ ಬಳಿಕವೇ ಅಮಾನತು ನಿರ್ಧಾರ ಕೈಗೊಳ್ಳಲಾಗಿದೆ 35 ಸಾವಿರ ಸಾಮರ್ಥ್ಯ ಇರೋ ಮೈದಾನದಲ್ಲಿ 3 ಲಕ್ಷ ಜನರು ಯಾಕೆ ಬೇಕು. ಫ್ರಾಂಚೈಸಿನವರು ಉಚಿತ ಪ್ರವೇಶ ಅಂತಾ ಯಾಕೆ ಆ ರೀತಿ ಮಾಡಿದರು ನೇರವಾಗಿ ಅವರದ್ದೇ ಹೊಣೆಗಾರಿಕೆ. ಆದರೂ ರಾಜ್ಯ ಇಂಟಲಿಜೆನ್ಸ್ ಇಲಾಖೆಯಲ್ಲಿ ಲೋಪ ಆಗಿರೋದನ್ನ ನಾನು ಒಪ್ಪುತ್ತೇನೆ ಎಂದರು .