
algolist: 0;
multi-frame: 1;
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 38;
ಬೆಳಗಾವಿ: ನಿನ್ನೆ ನಡೆದ ಘಟನೆ ಅತ್ಯಂತ ಖಂಡನೀಯ ಮತ್ತು ದುರದೃಷ್ಟಕರ. ಕುಂಭಮೇಳದಲ್ಲಿ ನಡೆದ ಘಟನೆಗೂ ಇದಕ್ಕೂ ಕಂಪೇರ್ ಮಾಡಬಾರದು.ಕುಂಭಮೇಳದಲ್ಲಿ ಸತ್ತಿದ್ದಾರೆ ಇಲ್ಲೂ ಸಾಯಲಿ ಅಂತಾನಾ ಸಿದ್ದರಾಮಯ್ಯನವರ ಅನಿಸಿಕೆ? ಎಂದು ಪ್ರಮೋದ ಮುತಾಲಿಕ ಪ್ರಶ್ನಿಸಿದರು.
ಇಂದು ನಗರದಲ್ಲಿ ಮಾಧ್ಯಮ ಜೋತೆ ಮಾತನಾಡಿದ ಅವರು ಬಿಜೆಪಿ ಮತ್ತು ಕಾಂಗ್ರೇಸ್ ಎರಡೂ ಪಕ್ಷಗಳು ಭ್ರಷ್ಟಾಚಾರದಲ್ಲಿ ತೊಡಗಿವೆ. ರಸ್ತೆಯಲ್ಲಿ ಗುಂಡಿಗಳು ಬಿದ್ದರೆ ನಿಮ್ಮ ಕಾಲದಲ್ಲಿ ಬಿದ್ದಿರಲಿಲ್ವಾ? ಎಂದು ಪ್ರಶ್ನೆ ಮಾಡ್ತಾರೆ. ಸಿದ್ದರಾಮ್ಯನವರೇ ಕೆಸರೇರಚಾಟ ನಿಮಗೆ ಶೋಭೆ ತರುವ ವಿಚಾರವಲ್ಲ. ಆಗಿರುವ ತಪ್ಪನ್ನು ಒಪ್ಪಿಕೊಂಡು ಜನರ ಕ್ಷಮೆ ಕೇಳಿ ಅಲ್ಲಿ ಸತ್ತಿದ್ದಾರೆ ಇಲ್ಲಿ ಸತ್ತರೇ ಎನು ದೊಡ್ಡ ಮಹಾನ್ ಎಂಬ ಮನೋಭಾವ ಸರಿಯಲ್ಲ ಎಂದರು.
ಎರಡೂ ಪಕ್ಷದವರು ಬಾಯ್ ಮುಚ್ಕೊಂಡು ಇರಬೇಕು ಅಷ್ಟೆ. ಘಟನೆಯಾದ ಸಂದರ್ಭದಲ್ಲಿಯೇ ವಿಜಯೋತ್ಸ ನಡೆದಿದೆ.ತಕ್ಷಣ ವಿಜಯೋತ್ಸವವನ್ನುನಿಲ್ಲಿಸಬೇಕಿತ್ತು. ಕ್ರಿಕೇಟ್ ಪ್ಲೇಯರ್ಸ್ ಹಾಗೂ ಅದಕ್ಕೆ ಸಂಬಂಧಿಸಿದ ಕಮೀಟಿಗಳು ಕೋಟಿ ಗಟ್ಟಲೇ ಗಳಿಸ್ತಿರಿ.ಘಟನೆಯಲ್ಲಿ ಸತ್ತವರೆಲ್ಲರೂ ಸಹ ಯುವಕರೇ ಇದ್ದಾರೆ.
ಒಂದು ಕೋಟಿ ರೂ ಕ್ರಿಕೇಟ್ ಕಮೀಟಿಯವರೇ ಕೊಡಬೇಕು. ಅಭಿಮಾನಿಗಳಿಂದಲೇ ಕೋಟಿ ಗಳಿಸುವ ನೀವು ಅಭಿಮಾನಿಗಳಿಗೆ ಕೋಟಿ ಕೊಡಿ ಎಂದ ಮುತಾಲಿಕ ಹೇಳಿದರು.
ಕ್ರಿಕೇಟ್ ಆಟಗಾರರ ಜೊತೆ ನಿಂತು ಮೇರಿಬೇಕು. ರಾಜ್ಯದಲ್ಲಿರುವ ವಾತಾವರಣವನ್ನು ಕ್ಯಾಚ್ ಮಾಡಬೇಕು ಎಂಬ ಉದ್ದೇಶ ಸರ್ಕಾರಕ್ಕಿತ್ತು. ಆಗಿರುವ ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಕಾಂಗ್ರೇಸ್ ಸರ್ಕಾರ ತೆಗೆದುಕೊಳ್ಳಬೇಕು ಎಂದರು.
ಮಂಗಳೂರಿನಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಗಡಿಪಾರು ವಿಚಾರ. 25 ಹಿಂದೂ ಸಂಘಟನೆಗಳ ಒಕ್ಕೂಟದಿಂದ ಸಭೆ ಮಾಡಲಿದ್ದೆವೆ. ಇಂದು ಅಥವಾ ನಾಳೆ ಮೀಟಿಂಗ್ ನಡೆಯಲಿದೆ.ನಾಡಿದ್ದು ಡಿಸಿ ಹಾಗೂ ಕಮಿಷನರ್ ಗೆ ಮೊಮೊರಂಡಮ್ ನೀಡಲಿದ್ದೆವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸೇರಿದಂತೆ ಎಲ್ಲಾ ವೈಫಲ್ಯಗಳ ಕುರಿತು ಚರ್ಚೆ ನಡೆಸಿ ಮೊಮೊರಂಡಮ್ ನೀಡಲಿದ್ದೆವೆ.