ಬೆಳಗಾವಿ : ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರಗಳನ್ನ ಮುಚ್ಚಿರುವುದನ್ನ ಖಂಡಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ನೇತೃತ್ವದಲ್ಲಿ ಶುಕ್ರವಾರ ಬೆಳಗಾವಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಪ್ರತಿಭಟಿಸಿದರು .
ನಗರದ ಜಿಲ್ಲಾ ಆಸ್ಪತ್ರೆ ಮುಂಬಾಗದಲ್ಲಿ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿರುದ್ದ ಘೋಷಣೆ ಕೂಗಿ ಆಕ್ರೋಶ
ದಿನೇಶ್ ಗುಂಡೂರಾವ್ ವಿರುದ್ದ ಹರಿಹಾಯ್ದ ಮಾಜಿ ಶಾಸಕ ಪಿ.ರಾಜೀವ್ ಡ್ರಗ್ ಕಂಟ್ರೋಲರ್ ಕಡೆ ಕಿಕ್ ಬ್ಯಾಕ್ ಪಡೆದು ಜನೌಷಧಿ ಕೇಂದ್ರಗಳನ್ನ ಬಂದ್ ಮಾಡಿದ್ದಾರೆ.ಬಡವರಿಗೆ ಕಡಿಮೆ ದರದಲ್ಲಿ ಸಿಗುತ್ತಿರುವ ಔಷಧಿಗಳನ್ನ ಹೊರಗಡೆ ಜಾಸ್ತಿ ರೇಟ್ ಗಳಿಗೆ ತೆಗೆದುಕೊಳ್ಳುವ ಹಾಗೇ ಮಾಡಿದ್ದಾರೆ.ಕಿಕ್ ಬ್ಯಾಕ್ ಪಡೆದು ದಿನೇಶ್ ಗುಂಡೂರಾವ್ ಬಡವರಿಗೆ ದ್ರೋಹ ಮಾಡುತ್ತಿದ್ದಾರೆ ಆರೋಪಿಸಿದರು.
ಈಗಾಗಲೇ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿ ಸರಿಯಾಗಿ ಸಿಗುತ್ತಿಲ್ಲ. ಹೊರಗಡೆ ಔಷಧಿ ತೆಗೆಕೊಳ್ಳಿ ಅಂತ ಡಾಕ್ಟರ್ ಗಳು ಚೀಟಿಯನ್ನ ಬರೆದು ಕಳುಹಿಸುತ್ತಿದ್ದಾರೆ.ದಿನೇಶ್ ಗುಂಡೂರಾವ್ ಅವರೇ ತಾವು ಎರಡು ವರ್ಷದಲ್ಲಿ ಆಸ್ಪತ್ರೆಯಲ್ಲಿ ಔಷಧಿಗಳು ಸಮರ್ಪಕವಾಗಿ ಪೂರೈಕೆ ಆಗಿದೆ ಅಂತ ಹೇಳಿದ್ದಾರೆ ಎಂದರು.
ಸಮರ್ಪಕವಾಗಿ ಔಷಧಿ ಪೂರೈಕೆ ಆಗಿದ್ದರೆ ನಿಮಗೆ ನಾವು ಹಾಲಿನ ಅಭಿಷೇಕ ಮಾಡುತ್ತೇವೆ. ಇಲ್ಲವಾದರೆ ನಿಮಗೆ ಮುಖಕ್ಕೆ ಯಾವುದನ್ನು ಎರಚಬೇಕು ಅದನ್ನ ಹೇಳಿ. ಸುಳ್ಳು ಮಾಹಿತಿಯನ್ನ ನೀಡಿ ಜನರಿಗೆ ಮೋಸಮಾಡುವ ಕೆಲಸ ಬಿಡಬೇಕು ದಿನೇಶ್ ಗುಂಡೂರಾವ್ ವಿರುದ್ದ ಕಿಡಿ ಕಾರಿದ ಪಿ.ರಾಜೀವ್.