ತುಮಕೂರು: ಟಾಟಾ ಎಸ್ ವಾಹನದಲ್ಲಿ ಜೈ ಭೀಮ್ ಹಾಡು ಹಾಕಿದ್ದಕ್ಕೆ ರೈಲ್ವೆ ಪೊಲೀಸ್ ಹಾಗೂ ಇನ್ನೊಬ್ಬ ವ್ಯಕ್ತಿಯಿಂದ ವಾಹನ ಚಾಲಕ ಹಾಗೂ ವಾಹನದಲ್ಲಿದ್ದ 19 ವರ್ಷದ ಯುವಕನ ಮರ್ಮಾಂಗಕ್ಕೆ ಒದ್ದು ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗಿಡದಮುದ್ದಿನ ಹಳ್ಳಿ ಬಳಿ ನಡೆದಿದೆ. ರೈಲ್ವೆ ಪೊಲೀಸ್ ಚಂದ್ರಶೇಖರ್ ಹಾಗೂ ನರಸಿಂಹರಾಜು ಎಂಬುವವರಿಂದ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.
ಹಲ್ಲೆ ಕುರಿತು ಟಾಟಾ ಎಸ್ ನಲ್ಲಿ ಅಂಬೇಡ್ಕರ್ ಹಾಡು ಹಾಕಿ ಹೋಗುತ್ತಿದ್ದೆವು ಚಂದ್ರಶೇಖರ್ ನರಸಿಂಹರಾಜು ಬೈಕಿನಲ್ಲಿ ಬಂದಿದ್ದರು ನಮ್ಮ ವಾಹನ ಅಡ್ಡಗಟ್ಟಿ ಚಂದ್ರಶೇಖರ್ ಹಾಗೂ ನರಸಿಂಹರಾಜು ಗಲಾಟೆ ಮಾಡಿದ್ದಾರೆ ಯಾಕೆ ಅಂಬೇಡ್ಕರ್ ಹಾಡು ಹಾಕಿದ್ದೀರಾ ನಿಮ್ಮ ಜಾತಿ ಯಾವುದು? ಎಂದು ಪ್ರಶ್ನಿಸಿದ್ದಾರೆ ಜಾತಿ ಯಾವುದು ಎಂದು ಕೇಳಿ ಚಂದ್ರಶೇಖರ್ ಹಾಗೂ ನರಸಿಂಹರಾಜು ಪ್ರಶ್ನೆ ಮಾಡಿ ಹಲ್ಲೆ ಮಾಡಿದ್ದಾರೆ.
ಟಾಟಾ ಎಸ್ ವಾಹನದಿಂದ ಹೊರಗಡೆ ಎಳೆದು ಮನಸೋ ಇಚ್ಚೆ ಇಬ್ಬರಿಗೂ ಥಳಿಸಿದ್ದಾರೆ. 19 ವರ್ಷದ ದೀಪು ಮರ್ಮಾಂಗಕ್ಕೆ ಒದ್ದು ಗಾಯಗೊಳಿಸಿದ್ದಾರೆ ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಹಲ್ಲೆಯಿಂದ ಗಾಯಗೊಂಡಿರುವ ಟಾಟಾ ಎಸ್ ಚಾಲಕ ನರಸಿಂಹಮೂರ್ತಿ ಯುವಕರ ಮೇಲೆ ಹಲ್ಲೆ ಸಂಬಂಧ ಗುಬ್ಬಿ ಠಾಣೆಯಲ್ಲಿ ಇದೀಗ ಪ್ರಕರಣ ದಾಖಲಾಗಿದೆ.