Thursday, June 19, 2025
Google search engine
Homeರಾಜಕೀಯಬೆಳಗಾವಿಯಲ್ಲಿ ಕ್ಷಣಕ್ಷಣಕ್ಕೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ ಪ್ರತಿಮೆ ಅನಾವರಣ ವಿವಾದ
spot_img

ಬೆಳಗಾವಿಯಲ್ಲಿ ಕ್ಷಣಕ್ಷಣಕ್ಕೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ ಪ್ರತಿಮೆ ಅನಾವರಣ ವಿವಾದ

ಬೆಳಗಾವಿ: ಬೆಳಗಾವಿಯಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಅನುಮತಿ ಇನ್ನೂವರೆಗೂ ದೊರೆತಿಲ್ಲ ಎರಡು ಗುಂಪುಗಳ ನಡುವೆ ಜಟಾಪಟಿ ಮುಂದುವರಿದಿದೆ.

ಬೆಳಗಾವಿ ತಾಲೂಕಿನ ಅನುಗೋಳ ಗ್ರಾಮದ ಡಿವಿಎಸ್ ಚೌಕನಲ್ಲಿ ನಿರ್ಮಾಣವಾಗಿರುವ 21 ಅಡಿ ಎತ್ತರದ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದೆ ಜಿಲ್ಲಾಡಳಿತ ವಿರೋಧದ ನಡುವೆ ಮೂರ್ತಿ ಅನಾವರಣ ಮಾಡುವುದಾಗಿ ಶಾಸಕ ಘೋಷಣೆ ಮಾಡಿದ್ದಾರೆ.

ಮೂರ್ತಿ ಅನಾವರಣ ಘೋಷಣೆ ಹಿನ್ನೆಲೆ ಸ್ಥಳದಲ್ಲಿ ಕೊಂಡುಸ್ಕರ್ ಬೆಂಬಲಿಗರು ಬಿಡು ಬಿಟ್ಟಿದ್ದಾರೆ ಛತ್ರಪತಿ ಸಂಭಾಜಿ ಮೂರ್ತಿ ಭವನಕ್ಕೆ ಅಳವಡಿಸಲಾಗುತ್ತಿದ್ದ ಲೈಟಿಂಗ್, ಧ್ವಜವನ್ನು ಕೊಂಡುಸ್ಕರ್ ಬೆಂಬಲಿಗರು ತೆರವು ಮಾಡಿದ್ದಾರೆ ಈ ವೇಳೆ ಎರಡು ಗುಂಪುಗಳಾದ ಶಾಸಕ ಭೈ ಪಾಟೀಲ್ ಮತ್ತು ಕೊಂಡುಸ್ಕರ್ ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ.

ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಯುವಕರ ಗುಂಪು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಸ್ಥಳದಲ್ಲೇ 7 ಕೆ ಎಸ್ ಆರ್ ಪಿ ವಾಹನಗಳು ಎಸಿಪಿ ಮೂವರು ಸಿಪಿಐಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ

RELATED ARTICLES
- Advertisment -spot_img

Most Popular

error: Content is protected !!