
ಬೆಳಗಾವಿ: ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರಿನ ಪೈಪ್ ಲೈನ್ ಕಾಮಗಾರಿ ವಿರೋಧಿಸಿ ಕರವೇ ನಾರಾಯಣಗೌಡ ಬಣ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿಯ ಮೂಲಕ ರಾಜ್ಯ ಸರಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು ಜಲಸಂಪನ್ಮೂಲ ಇಲಾಖೆಯಿಂದ ಅಧಿಕೃತವಾದ ಆದೇಶವನ್ನು ತೆಗೆದುಕೊಂಡು ಕಾಮಗಾರಿಯನ್ನು ಪ್ರಾರಂಭಿಸಿದ್ದಾರೆ. ಜನರ ವಿರೋಧ ಇದ್ದರು ಕೂಡ ಕಾಮಗಾರಿಯನ್ನು ಪ್ರಾರಂಭ ಮಾಡಿದ್ದಾರೆ ಇದರಲ್ಲಿ ಯಾವ ಕಾನದ ಕೈಗಳು ಕೆಲಸ ಮಾಡುತ್ತಿದಾವೆ ಅನ್ನುವಂತಹ ಅನುಮಾನ ವ್ಯಕ್ತವಾಗುತ್ತಿದೆ ಎಂದರು .
ಕೆಲವು ದಿನಗಳಿಂದ ಹಿಡಕಲ್ ಜಲಾಶಯದಿಂದ ಅನಧಿಕೃತವಾಗಿ ಅನುಮತಿಯನ್ನು ಪಡೆಯದೆ ಕಾಮಗಾರಿಯನ್ನು ಪ್ರಾರಂಭ ಮಾಡಿ ಪೈಪ್ ಲೈನ್ ಗಳನ್ನು ಅಳವಡಿಸಿದ್ದರು. ಬೆಳಗಾವಿಯ ಎಲ್ಲಾ ಸಂಘ ಸಂಸ್ಥೆಗಳು ಒಗ್ಗಟ್ಟಿನಲ್ಲಿ ನಮ್ಮ ನೀರು ನಮ್ಮ ಹಕ್ಕು ಎಂಬ ವಾಕ್ಯದ ಅಡಿಯಲ್ಲಿ ಜಿಲ್ಲಾ ಅಧಿಕಾರಿಗಳ ಗಮನಕ್ಕೆ ತಂದು ಕೆಲಸ ಸ್ಥಗಿತ ಗೊಳಿಸುವಂತಹ ಕೆಲಸ ಮಾಡಿದರು ಮತ್ತು ಸರಕಾರ ಹಿಡಕಲ್ ಜಲಾಶಯದ ನೀರನ್ನು ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಕಾಮಗಾರಿಗೆ ಅನುಮೋದನೆ ನೀಡಿದ್ದು ದೊಡ್ಡ ದುರಂತ ಎಂದರು.
ಹಿಡಕಲ್ ಜಲಾಶಯದಿಂದ ಬಾಗಲಕೋಟೆಯ ಜನರಿಗೂ ಕುಡಿಯುವ ನೀರು ಹೋಗುತ್ತಿದೆ. ಅಲ್ಲಿನ ಜನರು ಸಹ ಹಿಡಕಲ್ ಜಲಾಶಯದ ನೀರು ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಕೊಂಡೊಯ್ಯುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಬೇಕು ಎಂದು ಕರೆ ನೀಡಿದರು.
ನಮ್ಮ ಜಿಲ್ಲೆಯ ಒಬ್ಬರೂ ಸಚಿವರನ್ನು ಮುಂದಾಳತ್ವ ವಹಿಸಿಕೊಂಡು ಬೆಳಗಾವಿ ಜನರ ನಿಯೋಗ ಕರೆದುಕೊಂಡು ಹೋಗಿ ಹಿಡಕಲ್ ಜಲಾಶಯದ ನೀರು ಉಳಿಸುವ ನಿಟ್ಟಿನಲ್ಲಿ ಸಚಿವರು ಕೆಲಸ ಮಾಡಬೇಕು ಎಂದರು.
ಸರಕಾರದಿಂದ ಅಧಿಕೃತವಾಗಿ ಹಿಡಕಲ್ ಜಲಾಶಯದಿಂದ ಧಾರವಾಡಕ್ಕೆ ಪೈಪ್ ಲೈನ್ ಕಾಮಗಾರಿಗೆ ವಿರೋಧದ ಜೊತೆಗೂ ಕಾನೂನು ಹೋರಾಟ ನಡೆಸುವ ಮೂಲಕ ಸರಕಾರಕ್ಕೆ ತಕ್ಕ ಹೋರಾಟ ನಡೆಸಲಾಗುವುದು ಎಂದು ದೀಪಕ ಗುಡಗನಟ್ಟಿ ತಿಳಿಸಿದರು.