Wednesday, June 18, 2025
Google search engine
Homeರಾಜ್ಯಕಮಲ್ ಹಾಸನ್ ಚಿತ್ರಗಳು ಕರ್ನಾಟಕದಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ: ದೀಪಕ್ ಗುಡಗನಟ್ಟಿ
spot_img

ಕಮಲ್ ಹಾಸನ್ ಚಿತ್ರಗಳು ಕರ್ನಾಟಕದಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ: ದೀಪಕ್ ಗುಡಗನಟ್ಟಿ

ಬೆಳಗಾವಿ: ತಮಿಳು ಭಾಷೆಯಿಂದ ಕನ್ನಡ ಭಾಷೆ ಹುಟ್ಟಿದೆ ಎಂದು ಹೇಳಿಕೆ ನೀಡಿದ ತಮಿಳು ನಟ ಕಮಲ ಹಾಸನ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ನಗರದ  ಐನಾಕ್ಸ್ ಚಿತ್ರ ಮಂದಿರದ ಎದುರಿಗೆ ತಮಿಳು ನಟ ಕಮಲ್ ಹಾಸನ್ ‌ವಿರುದ್ಧ  ಘೋಷಣೆ ಕೂಗಿ, ನಟ ಕಮಲ್ ಹಾಸನ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಕಮಲ್ ಹಾಸನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.

ಕಮಲ್ ಹಾಸನ್ ಕನ್ನಡಿಗರಿಗೆ ಕ್ಷಮೆ ಕೇಳುವವರೆಗೆ ಕರ್ನಾಟಕದಲ್ಲಿ ಅವರ ಚಿತ್ರಗಳು ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಎಚ್ಚರಿಕೆ ನೀಡಿದರು.

ಪ್ರತಿಭಟನೆ ವೇಳೆ  ಗಣೇಶ ರಾಠೋಡ ,ಮಂಜುನಾಥ ರಾಠೋಡ, ಅರ್ಜುನ ಕಾಂಬಳೆ, ಲೋಕೇಶ ರಾಠೋಡ, ಅಭಿಷೇಕ  ಅಗಸಿಗಿ, ಸತೀಶ್ ಗುಡ್ಡದವರ ಸೇರಿದಂತೆ ಇತರರು ಇದರು.

RELATED ARTICLES
- Advertisment -spot_img

Most Popular

error: Content is protected !!