Wednesday, June 18, 2025
Google search engine
Homeರಾಜ್ಯನಾಳೆಯಿಂದ ರಾಜ್ಯದಲ್ಲಿ ತಿರಂಗಾ ಯಾತ್ರೆ: ಈರಣ್ಣ ಕಡಾಡಿ
spot_img

ನಾಳೆಯಿಂದ ರಾಜ್ಯದಲ್ಲಿ ತಿರಂಗಾ ಯಾತ್ರೆ: ಈರಣ್ಣ ಕಡಾಡಿ

ಬೆಳಗಾವಿ: ಇಡೀ ದೇಶದಲ್ಲಿ ಸೈನಿಕರಿಗೆ ಧೈರ್ಯ, ನೈತಿಕ ಸ್ಥೈರ್ಯ ತುಂಬಲು ಇಡೀ ದೇಶಾದ್ಯಂತ ತಿರಂಗಾ ಯಾತ್ರೆ ಮಾಡುತ್ತಿದ್ದೇವೆ. ರಾಜ್ಯದಲ್ಲೂ ತಿರಂಗಾ ಯಾತ್ರೆ ನಡೆಯಲಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ತಿಳಿಸಿದರು.‌

ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೇ 15,16 ಹಾಗೂ 17ರಂದು ರಾಜ್ಯದಲ್ಲಿ ತಿರಂಗಾ ಯಾತ್ರೆ ನಡೆಯಲಿದೆ.‌ ಅದರಲ್ಲಿ ಒಂದು ದಿನ ಆಯಾ ಕೇಂದ್ರದಲ್ಲಿ ತಿರಂಗಾ ಯಾತ್ರೆ ನಡೆಯಲಿದೆ. ಮೇ 18, 19,20 ಮೂರು ದಿನಗಳ ಕಾಲ ತಾಲೂಕು ಮಟ್ಟದಲ್ಲಿ ಮಂಡಳ ಯಾತ್ರೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.‌

ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿ ನಡೆಯಿತು. ಇದಕ್ಕೆ ಉತ್ತರವಾಗಿ ಆಪರೇಷನ್ ಸಿಂದೂರ ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಿತು.ಭಾರತೀಯ ಸೇನೆ ಯುದ್ಧದಲ್ಲಿ ಆತ್ಮನಿರ್ಭರ ಆಗಿ ನಿಭಾಯಿಸಿದೆ. ಯುದ್ಧದಂತಹ ವಿಚಾರಗಳನ್ನ ವಿಶೇಷ ಸಂಸತ್ತಿನಲ್ಲಿ ಚರ್ಚೆ ಮಾಡುವ ಅಗತ್ಯವಿಲ್ಲ. ಯಾರೂ ಕೂಡಾ ಅಪಸ್ವರ ಎತ್ತರಬಾರದು. ಇದನ್ನೇ ಪಾಕಿಸ್ತಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಮಾಡುತ್ತದೆ.‌ ಪ್ರಧಾನಮಂತ್ರಿ ಮೋದಿ ಅವರೇ ಹೇಳಿದ್ದಾರೆ. ಆಪರೇಷನ್ ಸಿಂದೂರ ಮುಗಿದಿಲ್ಲ. ಮತ್ತೆ ಭಯೋತ್ಪಾದಕ ಕೃತ್ಯ ನಡೆದ್ರೆ ನುಗ್ಗಿ ಹೊಡಿತಿವಿ‌ ಅಂತಾ ಮೋದಿ ಹೇಳಿದ್ದಾರೆ. ಆಪರೇಷನ್ ಸಿಂದೂರ ಬಗ್ಗೆ ಯಾರೂ ಕೂಡಾ ಟೀಕೆ ಮಾಡಬೇಡಿ. ಆಪರೇಷನ್ ಸಿಂದೂರ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದರು‌

ಅಮೆರಿಕ ಒತ್ತಡದಿಂದ ಕದನ ವಿರಾಮ ಘೋಷಣೆ ಮಾಡಿದ್ದಾರೆ ಎಂಬ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ಅಮೆರಿಕ ಮಧ್ಯ ಪ್ರವೇಶ ಬಗ್ಗೆ ನಮ್ಮ ಸೇನಾ ಅಧಿಕಾರಿಗಳೇ ಸ್ಪಷ್ಟನೆ ಕೊಟ್ಟಿದ್ದಾರೆ ಇದರ ಬಗ್ಗೆ ಹೆಚ್ಚು ಚರ್ಚೆ ಕೊಡುವ ಅಗತ್ಯವಿಲ್ಲ ಎಂದರು.

RELATED ARTICLES
- Advertisment -spot_img

Most Popular

error: Content is protected !!