Wednesday, June 18, 2025
Google search engine
Homeಕ್ರೈಂಕೀಟನಾಶಕ ಮಾತ್ರೆ ನುಂಗಿ ಲಕ್ಷ್ಮೀ ಆತ್ಮಹತ್ಯೆ
spot_img

ಕೀಟನಾಶಕ ಮಾತ್ರೆ ನುಂಗಿ ಲಕ್ಷ್ಮೀ ಆತ್ಮಹತ್ಯೆ

ಬೆಳಗಾವಿ: ಇಂಚಲ ಗ್ರಾಮದಲ್ಲಿ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.‌ ಕೀಟನಾಶಕ ಮಾತ್ರೆಯನ್ನು ನುಂಗಿ ಲಕ್ಷ್ಮೀ ಮಂಜುನಾಥ ಹೂಗಾರ್ (22) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಡಿಸೆಂಬರ್ 7 2025 ರಂದು ಮಾವನ ಮಗ ಮಂಜುನಾಥಜೋತೆ  ಲಕ್ಷ್ಮೀಯನ್ನು ಮದುವೆ ಮಾಡಿ ಕೋಟಿದರು. ಮದುವೆಯಾಗಿ ಐದು ತಿಂಗಳಲ್ಲಿ ಒಳಗೆ  ಆತ್ಮಹತ್ಯೆಗೆ ಮಾಡಿಕೊಂಡಿರುವುದು  ಹಲವು ಅನುಮಾನಗಳಿಗೆ ಎಡೆ ಮಾಡಿದೆ.

ಕೀಟನಾಶಕ ಮಾತ್ರೆ ನುಂಗಿ ಅಸ್ವಸ್ಥಗೊಂಡಿದ್ದ ಲಕ್ಷ್ಮೀಯನ್ನು ಕುಟುಂಬಸ್ಥರು ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ನಂತರ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಆಕೆಯನ್ನು ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು.

ವೈದ್ಯರ ಸಲಹೆಯಂತೆ ಕೂಡಲೇ ಲಕ್ಷ್ಮೀಯನ್ನು ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಲಕ್ಷ್ಮೀ ಸಾವನ್ನಪ್ಪಿದ್ದಾಳೆ.

 ಲಕ್ಷ್ಮೀ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂಣದ ಮುಗಿಲು ಮುಟ್ಟಿದೆ. ಲಕ್ಷ್ಮೀಗೆ ಆಗಾಗ ಆರೋಗ್ಯ ಸಮಸ್ಯೆ ಆಗ್ತಿತ್ತು ಎಂದು ಕುಟುಂಬಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

 ಮಾಧ್ಯಮಗಳ ಜೊತೆಗೆ ಮಾತನಾಡಿದ ಲಕ್ಷ್ಮೀ ಪತಿ ಮಂಜುನಾಥ ಮದುವೆಯಾಗಿ ಕೇವಲ ನಾಲ್ಕು ತಿಂಗಳಾಗಿತ್ತು ನಾನು ಕಷ್ಟಪಟ್ಟು ಲಕ್ಷ್ಮೀಯನ್ನು‌ ಮದುವೆ ಮಾಡಿಕೊಂಡಿದ್ದೆ. ನಿನ್ನೆಯಷ್ಟೆ ಆಕೆಯನ್ನು ಆಸ್ಪತ್ರೆಗೆ ತೋರಿಸಿ ಇಂದು ನಾನು ಕೆಲಸಕ್ಕೆ ಹೋಗಿದ್ದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಪತ್ನಿ ಹೀಗೆ ಮಾಡಿಕೊಂಡಿದ್ದಾಳೆ ಎಂದು ಮಾಹಿತಿ ನೀಡಿದರು. ಸಧ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳಿಸಿದ್ದು  ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES
- Advertisment -spot_img

Most Popular

error: Content is protected !!