ಬೆಳಗಾವಿ: ರಾಮದುರ್ಗದ ಚನ್ನಾಪುರ ಡಿಎಲ್ಟಿ ಗ್ರಾಮದಲ್ಲಿ ವಕೀಲ ವಿನೋದ ಪಾಟೀಲ ಮತ್ತು ಅವರ ಕುಟುಂಬದ 8 ಜನರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ರಾಮದುರ್ಗ ಪೊಲೀಸ್ ಠಾಣೆಯಲ್ಲಿ 20 ಆರೋಪಿಗಳ ವಿರುದ್ಧ
ಎಫ್ ಐ ಆರ್ ದಾಖಲಾಗಿ ವಾರ ಕಳೆದರೂ ರಾಮದುರ್ಗ ಪೊಲೀಸ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಲು ಮುಂದಾಗುತ್ತಿಲ್ಲ ಎಂದು ನ್ಯಾಯವಾದಿ ಎನ್.ಆರ್. ಲಾತೂರ ದೂರಿದರು.
ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು ಪ್ರಕರಣ ದಾಖಲಾಗಿ ಇವತ್ತಿಗೆ 13 ದಿನ ಕಳೆದರು ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ. ಅದರ ಕುರಿತಾಗಿ ರಾಮದುರ್ಗ ಪೊಲೀಸ್ ಠಾಣೆಯ PSI, CPI, DYSP, SP, ಎಲ್ಲರ ಗಮನಕ್ಕೆ ತಂದರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹಲ್ಲೆಗೋಳಗಾದ ನ್ಯಾಯವಾದಿಗಳ ಕುಟುಂಬಕ್ಕೆ ಮತ್ತೇ ಜೀವ ಬೆದರಿಕೆಗಳು ಬರುತ್ತಿದ್ದು ಪೊಲೀಸ್ ವ್ಯವಸ್ಥೆ ನ್ಯಾಯ ದೊರಕಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಅದೂ ಅಲ್ಲದೇ ಏ.03 2025 ರ ಸಂಜೆ ಬೆಳಗಾವಿ ನ್ಯಾಯವಾದಿ ರಾಹುಲ ಥ್ಯಾನಗೆ ಮೇಲೆ ಹಲ್ಲೆ ಮಾಡಿದವರ ವಿರೋಧ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದಿದ್ದವೆ.ಅವರು ಈ ಬಗ್ಗೆ ಗಮನಹರಿಸುತ್ತಿಲ್ಲ. ಅಲ್ಲಿನ ಪೊಲೀಸ್ ಅಧಿಕಾರಿಗಳು ಇದುವರೆಗೂ ಒಬ್ಬ ಆರೋಪಿಯನ್ನು ಬಂಧಿಸಿಲ್ಲ.ಈ ಪ್ರಕರಣ ಮಾಸುವ ಮುಂಚಿತವಾಗಿಯೇ ಕಣಬರ್ಗಿಯಲ್ಲಿ ಮತ್ತೊಬ್ಬ ನ್ಯಾಯವಾದಿ ಮೇಲೆ ಇನ್ನೊಂದು ಗುಂಪು ಹಲ್ಲೆ ಮಾಡಿತು.ಅದರೆ ಪೊಲೀಸ್ ಇಲಾಖೆ ಅವರನ್ನು ಬಂಧಿಸಿಲ್ಲ. ಹೀಗಾಗಿ ಗೃಹ ಸಚಿವರಾದರೂ ಈ ಬಗ್ಗೆ ಗಮನಹರಿಸಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಈ ರೀತಿ ವಕೀಲರ ಮೇಲೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪೊಲೀಸ್ ಭದ್ರತೆ ಕೋರತೆ ಕಾನೂನು ಜಾಗೃತಿ ಕೋರತೆ, ಭ್ರಷ್ಟಾಚಾರ ಕರ್ತ್ಯವ್ಯ ಲೋಪ, ಅಧಿಕಾರ ನಿರ್ಲಕ್ಷ್ಯ, ಮೊದಲಾದ ಕಾರಣಗಳಿಂದ ಬೆಳಗಾವಿ ಜಿಲ್ಲಾ ಪೊಲೀಸ್ ವ್ಯವಸ್ಥೆ ವಿಫಲಗೊಂಡಿದ್ದುಆದಷ್ಟು ಬೇಗ ಕ್ರಮ ತೆಗೆದುಕೊಳ್ಳದಿದ್ದರೆ ರಾಜ್ಯಾದ್ಯಂತ ಧರಣಿ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪೊಲೀಸ್ ಇಲಾಖೆ ನಿರ್ಲಕ್ಷ, ಭ್ರಷ್ಟಾಚಾರ ಕರ್ತ್ಯವ್ಯ ಲೋಪ
ದಿಂದ ವಕೀಲರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿವೆ.ವಕೀಲರ ಮೇಲೆ ಹಲ್ಲೆ ನಡೆದ ತಕ್ಷಣ ಪೊಲೀಸರು ಆರೋಪಿಗಳನ್ನು ಬಂದಿಸುವ ಪ್ರಯತ್ನ ಮಾಡುತ್ತಿಲ್ಲ.ಆರೋಪಿಗಳಿಗೆ ಕಾನೂನಿನ ಬಗ್ಗೆ ಸಾಮಾನ್ಯ ಭಯವೂ ವಿಲ್ಲ. ಆರೋಪಿಗಳು ಕೊಡುವ ಆರ್ಥಿಕ ಲಾಭಕ್ಕಾಗಿ ಬೆಳಗಾವಿ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ಶೀಘ್ರ ಆರೋಪಿಗಳನ್ನು ಬಂದಿಸಬೇಕು ಎಂದು ಹೇಳಿದರು.
ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕಿದ್ದ ವಕೀಲರೇ ಬೀದಿಗಿಳಿದು ಪ್ರತಿಭಟಿಸುವ ಕಾಲ ನಿರ್ಮಾಣವಾಗುತ್ತಿದೆ.
ಇನ್ನೂ ಬಡವರು, ಮಧ್ಯಮ ವರ್ಗ, ಜನಸಾಮಾನ್ಯರ ಪರಿಸ್ಥಿತಿ ಏನು? ಅವರಿಗೆ ನ್ಯಾಯ ಸಿಗಬಹುದೇವ? ಎಂದು ಪ್ರಶ್ನಿಸಿದ ವಕೀಲರು ಹೀಗೆ ಪೊಲೀಸರ ನಡತೆ ಮುಂದುವರೆದರೆ ಕಾನೂನು ಸುವ್ಯವಸ್ಥೆ ವಿಫಲಗೊಂಡು ಅಪರಾಧಗಳು ಹೆಚ್ಚಾಗಲು ಪ್ರೇರಣೆ ನೀಡಿದಂತಾಗುತ್ತದೆ. ಈ ತಕ್ಷಣ ಸರ್ಕಾರ ವಕೀಲರ ಮೇಲಾಗುತ್ತಿರುವ ಹಲ್ಲೇ
ನಿಲ್ಲಿಸಬೇಕು. ಆರೋಪಿಗಳನ್ನು ಹೆಡೆಮುರಿ ಕಟ್ಟಬೇಕು ಎಂದರು.
ಮಾರ್ಚ.23 2025 ರಂದು ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚನ್ನಾಪೂರ ಡಿಎಲ್ ಟಿ ಗ್ರಾಮದಲ್ಲಿ ನ್ಯಾಯವಾದಿಗಳಾದ ವಿನೋದ ಪಾಟೀಲ ಮತ್ತು ಕುಟುಂಬದವರಾದ ಸೋಮಪ್ಪಾ,ವಾಸಪ್ಪಾ, ಪಾರ್ವತಿ, ಕಾವೇರಿ ಸೂರ್ಯದೇವ, ಶೈಲಾ, ಸೇರಿದಂತೆ 8 ಜನರ
ಮೇಲೆ ಮಾರಣಾಂತಿಕ ಹಲ್ಲೆಯಾಯಿತು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ವಿನೋದ ಪಾಟೀಲ, ನಿಂಗಪ್ಪ ಮಸ್ತಿ,ಸುರೇಶ್ ಕಾಂಬಳೆ, ತಾನಾಜಿ ವಂಟಮುರಿ,ಗಂಗಾಧರ ಶೇಗುಣಶೆ ವಿ. ಎಸ್. ಬಗನಾಳಕರ ಪ್ರಮೋದ ಭಾಗಿಯಾಗಿದ್ದರು.