Wednesday, June 18, 2025
Google search engine
Homeರಾಜಕೀಯಸಕ್ಕರೆ ಉದ್ಯಮದಲ್ಲಿ ಹೊಸ ಹೊಸ ತಂತ್ರಜ್ಞಾನ : ಶಿವಾನಂದ ಪಾಟೀಲ
spot_img

ಸಕ್ಕರೆ ಉದ್ಯಮದಲ್ಲಿ ಹೊಸ ಹೊಸ ತಂತ್ರಜ್ಞಾನ : ಶಿವಾನಂದ ಪಾಟೀಲ

ಬೆಳಗಾವಿ: ಎಸ್ ನಿಜಲಿಂಗಪ್ಪ ಶುಗರ್ ಕಚೇರಿಗೆ ದೇಶದ ಸಕ್ಕರೆ ತಂತ್ರಜ್ಞರು  ಸಕ್ಕರೆ ಉದ್ಯಮದಲ್ಲಿ ಹೊಸ ಹೊಸ ಆವಿಷ್ಕಾರ ಏನು ಮಾಡಿದ್ದಾರೆ ಎಂಬುವುದರ ಬಗ್ಗೆ ಇಂದು ಸಮೀನಾರ ನಡೆಯುತ್ತದೆ ಎಂದು ಬೆಳಗಾವಿ ಸಕ್ಕರೆ  ಸಚಿವ ಶಿವಾನಂದ ಪಾಟೀಲ  ಹೇಳಿದರು.

ನಗರದ ಪ್ರವಾಸೋದ್ಯಮ ದಲ್ಲಿ ಮಾಧ್ಯಮ ಜೊತೆ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ಸುಮಾರು 80 ಕಾರ್ಖಾನೆಗಳಿದ್ದು ಕೆಲವು ಕಾರ್ಖಾನೆ ಮುಚ್ಚಿದ್ದು ಅವುಗಳಿಗೆ ಹೊಸ ತಂತ್ರಜ್ಞಾನ ಅಳವಡಿಸಬೇಕಿದೆ ಎಂದರು.

ಸಕ್ಕರೆ ಉತ್ಪಾದನೆಯಲ್ಲಿ ಕರ್ನಾಟಕ ಮೂರನೇ ಅತೀ ದೊಡ್ಡ ರಾಜ್ಯ ವಾಗಿದೆ.  ಬರಗಾಲ ಇದ್ದಿದ್ದರಿಂದ ಹಿಂದಿನ ವರ್ಷಕ್ಕಿಂತ ಈ ವರ್ಷ ಕಬ್ಬಿನ ಬೆಳೆ ಇಳುವರಿ ಕಡಿಮೆ ಆಗಿದು, ಆದ ಕಾರಣ ಹೆಚ್ಚು ಇಳುವರಿ ಕೊಡುವಂತಹ ತಳಿ ಬೆಳೆಸಬೇಕು. ಈ ವರ್ಷ ಆರು ಲಕ್ಷ ಮ್ಯಾಟ್ರಿಕ್ ಟನ್ ಸಕ್ಕರೆ ಉತ್ಪಾದನೆ ಮಾಡುವ ಗುರಿ ಇಟ್ಟುಕ್ಕೊಂಡಿದ್ದೇವೆ  ಆ ವಿಚಾರವಾಗಿ ಚಿಂತನ ಮಂಥನ ಸಭೆ ಇದೆ ಎಂದು ಹೇಳಿದರು.

ರಾಜ್ಯದಲ್ಲಿ ಕಬ್ಬಿನ ಬಾಕಿ ಬಿಲ್ ವಿಚಾರವಾಗಿ ಮಧ್ಯಮ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ರಾಜ್ಯದಲ್ಲಿ ಕಬ್ಬಿನ ಬಿಲ್ ಹದಿನೆಂಟು ಸಾವಿರ ಕೋಟಿ ಯಲ್ಲಿ  ಅಸುಮಾರು ಏಳು ರಿಂದ ಎಂಟು ನೂರು ಕೋಟಿ ಮಾತ್ರ ಬಾಕಿ ಇರಬಹುದು ಎಂದರು.

ರೈತರು ಕಟ್ಟಿರುವ ಸಹಕಾರಿ ಸಕ್ಕರೆ ಕಾರ್ಖಾನೆ ನಷ್ಟದಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆ ಲಾಭದಾಯಕ ವಿಚಾರ. ಆಡಳಿತ ಮಂಡಳಿ ಅವರು ಒಳ್ಳೆಯ ರೀತಿಯಿಂದ ನಿರ್ವಹಣೆ ಮಾಡಿದರೆ  ಕಾರ್ಖಾನೆಗಳು ಒಳ್ಳೆ ರೀತಿಯಿಂದ ನಡೆಯುತ್ತೆ. ಹಾಗೂ ಕೆಲವು ಕಾರ್ಖಾನೆಗಳಲ್ಲಿ ಅವ್ಯವಹಾರ ಆಗಿರುವಂತದು

ಮೇಲ್ನೋಟಕ್ಕೆ ಸಾಬೀತಾಗಿದ್ದು ಅವರ ಮೇಲೆ ಕ್ರಮ  ಕೈಗೊಳ್ಳುವಂತದ್ದು, ಕೋರ್ಟಿಗೆ ಹೋಗಿ ಸ್ಟೇ ತರುವಂತ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಎಂದರು.

ಅನೇಕ ಸಹಕಾರಿ ಕಾರ್ಖಾನೆಗಳನ್ನ ಗುತ್ತಿಗೆ ಮೇಲೆ ಪಡೆದು ನಡೆಸುವ ಕೆಲಸ ಮಾಡಿದ್ದೇವೆ. ಅದೆ ರೀತಿಯಾಗಿ ಈಗಾಗಲೇ ಹದಿಮೂರು ಕಾರ್ಖಾನೆಗಳನ್ನ ಗುತ್ತಿಗೆ ಮೇಲೆ ಕೊಟ್ಟು ಪುನರ್ ಜನ್ಮ ಕೊಟ್ಟಿದ್ದೇವೆ. ನಾನು ಅಧಿಕಾರಕೆ  ಬಂದ ಮೇಲೆ ರನ್ನಾ ಶುಗರ್ ಕೂಡಾ ಕೊಟ್ಟಿದ್ದೇನೆ ಎಂದರು.

 ಎಂಕೆ ಹುಬ್ಬಳ್ಳಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ  77 ಕೋಟಿ ಸಕ್ಕರೆ ಕಳ್ಳತನ ಮಾಡಿರುವ ಕಳ್ಳರ ಮೇಲೆ ತನಿಖೆ ಆಗಿ ಅವರ ಮೇಲೆ ಜಾರ್ಜಶೀಟ್ ಹಾಕಿದರೆ ಅದು ಕೋರ್ಟ ಮಧ್ಯಂತರ ಬರುತ್ತೆ. ನಾವು ಕೂಡಾ ಅವರ ಮೇಲೆ ಕ್ರಮ ಕೈಗೊಳ್ಳುವ ಕೆಲಸ ಮಾಡುತ್ತೇವೆ ಎಂದು ಹೇಳಿದರು .

 ಸಚಿವೆ ಲಕ್ಷ್ಮೀ ಹೆಬ್ಬಾಳಕರ ನೂತನ ಮೃಣಾಲ ಸಕ್ಕರೆ ಕಾರ್ಖಾನೆಗೆ ಸ್ಥಳೀಯರ ವಿರೋಧ ವಿಚಾರವಾಗಿ ಬಗ್ಗೆ ತನಿಖೆ ಮಾಡುತ್ತೇನೆ  ಅದರ ಬಗ್ಗೆ ನನ್ನ ಕಡೆ ಯಾವುದೇ ವರದಿ ಬಂದಿರುವುದಿಲ್ಲ . ಕೋವಿಡ್ ಹಗರಣ ತನಿಖೆ  ಅದಕ್ಕೆ ನಾನು ಪ್ರತಿಕ್ರಿಯೆ ಮಾಡುವುದಕ್ಕೆ ಬರುವುದಿಲ್ಲ ಅದರ ಬಗ್ಗೆ ಆರೋಗ್ಯ ಸಚಿವರು ಮಾತನಾಡುತ್ತಾರೆ.

ಅಧಿವೇಶನ ವೇಳೆ ಪಂಚಮಸಾಲಿ ಮುಖಂಡರ ಮೇಲೆ ಲಾಠಿ ಚಾರ್ಜ್ ವಿಚಾರವಾಗಿ ತನಿಖೆ ಆಗಲಿ ಅದರ ಬಗ್ಗೆ ತನಿಖೆ ಆದ ಮೇಲೆ ಮಾತನಾಡುತ್ತೇನೆ. ಮಡಕೇರಿಯ ವಿನಯ ಪೊವಯ್ಯ ಆತ್ಮಹತ್ಯೆ ಪ್ರಕರಣ ವವಿಚಾರವಾಗಿ ಆರೋಪ ಮಾಡುವವರು ಮಾಡಲಿ ಅದು ತನಿಖೆ ಆಗಲಿ ಎಂದು ಬೆಳಗಾವಿ ಸಕ್ಕರೆ  ಸಚಿವ ಶಿವಾನಂದ ಪಾಟೀಲ  ಹೇಳಿದರು.

RELATED ARTICLES
- Advertisment -spot_img

Most Popular

error: Content is protected !!