Wednesday, June 18, 2025
Google search engine
Homeಸುದ್ದಿನರೇಗಾದಡಿ ಅರ್ಹ ವಿಶೇಷ ಚೇತನರ ನೋಂದಣಿಯಾಗಲ್ಲಿ :ಬಿ.ಡಿ ಕಡೇಮನಿ
spot_img

ನರೇಗಾದಡಿ ಅರ್ಹ ವಿಶೇಷ ಚೇತನರ ನೋಂದಣಿಯಾಗಲ್ಲಿ :ಬಿ.ಡಿ ಕಡೇಮನಿ

ಬೆಳಗಾವಿ : ತಾಲ್ಲೂಕಿನ  ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ ಅರ್ಹ ವಿಶೇಷ ಚೇತನರು ಉದ್ಯೋಗ ಚೀಟಿ ಪಡೆದುಕೊಂಡು, ಉದ್ಯೋಗ ಖಾತರಿ ಯೋಜನೆಯಡಿ ನೋದಣಿಯಾಗಲಿ ಎಂದು ಸಹಾಯಕ ನಿರ್ದೇಶಕರಾದ (ಗ್ರಾಉ), ಬಿ.ಡಿ ಕಡೇಮನಿ ಹೇಳಿದರು.

ತಾಲ್ಲೂಕಿನ ಕಂಗ್ರಾಳಿ ಕೆ.ಎಚ್ ಗ್ರಾಮ ಪಂಚಾಯತಿಗೆ ಶುಕ್ರವಾರ ಏಪ್ರೀಲ್ 4 ರಂದು  ವಿಶೇಷ ಚೇತನರಿಗೆ ಉದ್ಯೋಗ ಚೀಟಿ ವಿತರಿಸಿ ಮಾತನಾಡಿದ ಅವರು ಈಗಾಗಲೇ ಅನೇಕ ವಿಕಲಚೇತನರು ಕುಟುಂಬದ ಜಾಬ ಕಾರ್ಡ್ ಹೊಂದಿದ್ದು, ಅಂತಹವರು  ಏಪ್ರಿಲ್ ಮಾಹೆಯಿಂದ ವಿಶೇಷ ವರ್ಗದ ವಿಶೇಷ ಜಾಬ ಕಾರ್ಡ್ ಪಡೆಯುವ ಮೂಲಕ ವ್ಯಕ್ತಿಗತವಾಗಿ ಒಂದು ಆರ್ಥಿಕ ವರ್ಷದಲ್ಲಿ 100 ದಿನ ಕೆಲಸ ಪಡೆದುಕೊಳ್ಳಬಹುದಾಗಿದೆ ಎಂದರು.

ಕೆಲಸದ ಪ್ರಮಾಣದಲ್ಲಿ ಶೇ 50 ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದು. ವಿಕಲಚೇತನರಿಗೆ ಆರ್ಥಿಕ ಬಲ ನೀಡಬೇಕೆಂಬ ಉದ್ದೇಶದಿಂದ ವಿಶೇಷ ಚೇತನರ ನೋದಣಿ  ಅಭಿಯಾನ ಹಮ್ಮಿಕೊಳ್ಳಲಾಗಿದೆ ಹೇಳಿದರು.

ಈ ಸಂದರ್ಭದಲ್ಲಿ ಪಿಡಿಒ ಗೋಪಾಲ ನಾಯಕ, ತಾಂತ್ರಿಕ ಸಂಯೋಜಕ ಮುರುಗೇಶ ಯಕ್ಕಂಚ್ಚಿ, ತಾಐಇಸಿ ಸಂಯೋಜಕ ರಮೇಶ ಮಾದರ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಇದ್ದರು.

RELATED ARTICLES
- Advertisment -spot_img

Most Popular

error: Content is protected !!