Tuesday, April 29, 2025
Google search engine
Homeಕ್ರೈಂಪ್ರಚೋದನಕಾರಿ ಪೋಸ್ಟ್ ಪೋಸ್ಟ್ ಹಾಕಿದ್ದ ಬೆಳಗಾವಿಯ ಕಾಂಗ್ರೆಸ್ ಮುಖಂಡನ ವಿರುದ್ಧ ದೂರು ದಾಖಲು
spot_img

ಪ್ರಚೋದನಕಾರಿ ಪೋಸ್ಟ್ ಪೋಸ್ಟ್ ಹಾಕಿದ್ದ ಬೆಳಗಾವಿಯ ಕಾಂಗ್ರೆಸ್ ಮುಖಂಡನ ವಿರುದ್ಧ ದೂರು ದಾಖಲು

ಬೆಳಗಾವಿ: ಟಿಪ್ಪು ಸುಲ್ತಾನ್ ಹಾಗೂ ಔರಂಗಜೇಬ್ ಫೋಟೋ ಹಾಕಿ ಪ್ರಚೋದನಕಾರಿ ಪೋಸ್ಟ್ ಪೋಸ್ಟ್ ಹಾಕಿದ್ದ ಬೆಳಗಾವಿಯ ಕಾಂಗ್ರೆಸ್ ಮುಖಂಡನ ವಿರುದ್ಧ ನಗರದ ಮಾರ್ಕೇಟ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ.

ಯುತ್ ಕಾಂಗ್ರೆಸ್ ಮುಖಂಡ ಮುಜಮಿಲ್ ಅತ್ತಾರ(32) ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿ ಮುಜಮಿಲ್ ಬೆಳಗಾವಿಯ ಆಜಾದ್ ನಗರದ ನಿವಾಸಿಯಾಗಿದ್ದು, ಇತ ತನ್ನ ಇನ್ಸಟಾಗ್ರಾಮ್ ನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ. ಔರಂಗಜೇಬ, ಟಿಪ್ಪು,ಫೋಟೊ ಹಾಕಿ ‘ಬಾಪ್ ಹೈ ತುಮಾರೇ ಬೂಲ್ನಾಮತ್’ ಅಂತಾ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದ. ಈ ಫೋಟೊಗೆ ಹಿಂದಿ ಅಗ್ನಿ ಪತ್ ಚಿತ್ರದ ಜ್ವಾಲಾಸಿ ಚಲತಿ ಹೇ ಅನ್ನೋ ಹಾಡಿನ ತುಣುಕು ಹಾಕಿದ್ದ ಪ್ರಚೋದನಕಾರಿ ಪೋಸ್ಟ್ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರು ಕೇಸ್‌ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES
- Advertisment -spot_img

Most Popular

error: Content is protected !!