: ಬೆಳಗಾವಿ ಕಿಣಿಯೆ ಗ್ರಾಮದ ಪಿಡಿಒಗೆ ಮರಾಠಿ ಭಾಷೆ ಮಾತನಾಡುವಂತೆ ಅಂಜಿಕೆ ಹಾಕಿರುವ ಮರಾಠಿ ಹುಡುಗನಿಗೆ ಸನ್ಮಾನ ಮಾಡಿರುವ ಆರೋಪದ ಮೇಲೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಾಯಕ ಶುಭಂ ಶೆಲ್ಕೆ ಅವರನ್ನು ಬೆಳಗಾವಿ ಪೊಲೀಸರು ಬಂದಿಸಿದಾರೆ.
ಕರ್ನಾಟಕದಲ್ಲಿರುವ ಕನ್ನಡ ಸಂಘಟನೆಗಳು ನಾಲಾಯಕ್’ ಎಂದು ಶುಭಂ ಶೆಲ್ಕೆ ವಿವಾದಾತ್ಮಕವಾಗಿ ಹೇಳಿಕೆ ಕೊಟ್ಟು, ಕನ್ನಡಿಗರ ಮತ್ತು ಮರಾಠಿಗರ ನಡುವಿನ ಕೋಮು ಕದಡಲು ಯತ್ನಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಘಟನೆ ಬಳಿಕ ತಿಪ್ಪಣ್ಣ ಡೋಕ್ರೆನನ್ನು ಪೊಲೀಸರು ಬಂದಿಸಿ, ಶುಭಂ ಶೆಲ್ಕೆಗಾಗಿ ಹುಡುಕಾಟ ಆರಂಭಿಸಿದ್ದರು. ಇದರಂತೆ ಸೋಮವಾರ ಮೀರಜ್ನಲ್ಲಿ ಶೆಲ್ಕೆ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಕನ್ನಡ ವಿರೋಧಿ ಹಾಗೂ ಭಾಷಾ ಸಾಮರಸ್ಯ ಹೇಳಿಕೆ ಆರೋಪದಡಿ ಶುಭಂ ಶೆಲ್ಕೆ ಅವರನ್ನು ಪೊಲೀಸರು ಬಂದಿಸಿರುವುದಾಗಿ ತಿಳಿದೆ.