ಬೆಳಗಾವಿ : ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ವಿದ್ಯಾರ್ಥಿಗಳು ರೈತರು ಮಹಿಳೆಯರ ಹಿಂದುಗಳ ವಿರೋಧ ಬಜೆಟ್. ಪಾಕಿಸ್ತಾನ ಪರ ಇರುವಂತ ಬಜೆಟ್ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರಿಂದ ಮಂಗಳವಾರ ನಗರದಲ್ಲಿ ಪ್ರತಿಭಟಿಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇಲ್ಲಿನ ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಟ್ರ್ಯಾಕ್ಟರ್ ಚಕ್ಕಡಿ ಗಾಡಿ ಮೂಲಕ ಪ್ರತಿಭಟನೆಕಾರರು ಆಗಮಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೆ ವೇಳೆ ಮಾಧ್ಯಮ ಜೋತೆ ಮಾತನಾಡಿದ ಸಂಜೆಯ ಪಾಟೀಲ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಳ್ವಿಕೆಗೆ ಬಂದು ಎರಡರಿಂದ ಎರಡುವರೆ ವರ್ಷ ಆದರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಬ್ರಷ್ಟಾಚಾರದಲ್ಲಿ ಮುಳಗಿದೆ. ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತೆ ಆಗಿದೆ. ಗ್ಯಾರಂಟಿ ಯೋಜನೆಗಳಲ್ಲಿ ಜನರಿಗೆ ಮೋಸ ಮಾಡು ಅಂತ ಕೆಲಸ ಆಗುತ್ತಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ನೇರವಾಗಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವಂತ ಜನರ ಪರವಾಗಿ ಇರುವಂತ ಬಜೆಟ್ ಹಾಗೂ ಬಾಂಗ್ಲಾ ದೇಶ, ಟಿಪ್ಪು ಸುಲ್ತಾನ್, ಬಾಬರ್ ಪರ ಇರುವಂತ ಬಜೆಟ್ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ ,ಸಂದೀಪ ದೇಶಪಾಂಡೆ ,ಧನಶ್ರೀ ದೇಸಾಯಿ, ಮುಖಂಡರಾದ ಮುರುಗೇಂದ್ರಗೌಡ ಪಾಟೀಲ, ಸೋನಾಲಿ ಸರ್ನೋಬತ್, ಕಲ್ಲಪ್ಪ ಶಹಾಪೂರಕರ, ಈರಣ್ಣ ವಾರದ,ಪ್ರಮೋದ ಕೋಚೇರಿ, ಬಸನಗೌಡ ಕೊಳದೂರ, ಮಾರುತಿ ಕೊಪ್ಪದ, ಸಚಿನ್ ಕಡಿ, ಸಂತೋಷ್ ದೇಶನೂರ, ಮಹಾಂತೇಶ ಚಿನ್ನಪ್ಪಗೌಡ್ರ, ವಿಠ್ಠಲ ಸಾಯಣ್ಣವರ, ಮನೋಜ್ ಪಾಟೀಲ, ವೀರಭದ್ರ ಪೂಜಾರಿ ಹಾಗೂ ಪ್ರಮುಖ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು