Tuesday, April 29, 2025
Google search engine
Homeರಾಜಕೀಯಶಾಸಕ ಅಭಯ ಪಾಟೀಲ ವಿರುದ್ಧ ಜಿಎಸ್ ಸಿ (N C non-cognizable) ಪ್ರಕರಣ ದಾಖಲು
spot_img

ಶಾಸಕ ಅಭಯ ಪಾಟೀಲ ವಿರುದ್ಧ ಜಿಎಸ್ ಸಿ (N C non-cognizable) ಪ್ರಕರಣ ದಾಖಲು

ಬೆಳಗಾವಿ : ನಗರದ ಅನಗೋಳದಲ್ಲಿ ಭಾನುವಾರ ಲೋಕಾರ್ಪಣೆಗೊಂಡ ಧರ್ಮವೀರ ಸಂಭಾಜಿ ಮಹಾರಾಜರ ಪ್ರತಿಮೆ ವಿವಾದ ಸಧ್ಯ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಸೇರಿದಂತೆ ಕೆಲಸವರ ವಿರುದ್ಧ ಪ್ರಕರಣ ದಾಖಲಾಗಿದೆ.

ಧರ್ಮವೀರ ಶ್ರೀ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮದ ಸಂದರ್ಭದಲ್ಲಿ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಲಾಗಿದೆ ಎಂದು ಆರೋಪಿಸಿ ಕಾರ್ಯಕ್ರಮದ ಆಯೋಜನೆ ಮಾಡಿದ್ದ ಶಾಸಕ ಅಭಯ್ ಪಾಟೀಲ್‌ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣ ಬಿಎನ್ ಎಸ್‌ ಎಸ್ ಕಾಯ್ದೇ ಪ್ರಕಾರ 15 ದಿನಗಳ ಪ್ರಕಾರ ಕಾಲಾವಕಾಶ ಇದ್ದು ವಿಚಾರಣೆಯ ನಂತರ ಪ್ರಕರಣ ದಾಖಲಾಗುವ ಸಾಧ್ಯತೆ ಇರುತ್ತದೆ.

ಕಿತ್ತೂರು ಕರ್ನಾಟಕ ಸೇನೆಯ ವತಿಯಿಂದ ಬೆಳಗಾವಿ ನಗರದ ಟಿಳಕವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಿಜೆಪಿಶಾಸಕ ಅಭಯ್ ಪಾಟೀಲ್, ಬೆಳಗಾವಿ ಮೇಯ‌ರ್ ಸವಿತಾ ಕಾಂಬಳೆ,ಉಪಮೇಯ‌ರ್ ಆನಂದ ಚವ್ಹಾಣ್ ವಿರುದದೂರು ನೀಡಲಾಗಿದೆ.

ದೂರು ಸ್ವೀಕೃತ ಪ್ರತಿ ನೀಡಿ ಕಳುಹಿಸಿರುವ ಟಿಳಕವಾಡಿ ಪೊಲೀಸರು, ಜನಪ್ರತಿನಿಧಿಗಳ ವಿರುದ್ಧ ದೂರು ನೀಡಿರುವ ಹಿನ್ನೆಲೆ ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರ ಭರವಸೆ ನೀಡಿದ್ದಾರೆ

RELATED ARTICLES
- Advertisment -spot_img

Most Popular

error: Content is protected !!