ಬೀದರ್ : ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಬೆಳಿಗ್ಗೆ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ ಎ.ಸಿ.ತಿಪ್ಪೇಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಮತ್ತು ಹಿರಿಯ ಪತ್ರಿಕೆ ಸಂಪಾದಕರಾದ ಶಿವಶರಣಪ್ಪ ವಾಲಿ ಅವರ ನೇತೃತ್ವದಲ್ಲಿ ಬೀದರ್ ಜಿಲ್ಲಾ ಪತ್ರಿಕೆಗಳ ಸಂಪಾದಕರ ಸಭೆ ಜರುಗಿತು.
ಈ ಸಭೆಯಲ್ಲಿ ರಾಜ್ಯ ಸಂಘದ ಬೀದರ್ ಜಿಲ್ಲಾ ಘಟಕದ ರಚನೆ ಮಾಡುವ ಸಂಬಂಧ ಮುಕ್ತ ಚರ್ಚೆಗಳು ನಡೆದವು.
ಈ ಸಂದರಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಹಾಲೀ ಜಾಹೀರಾತು ದರಕ್ಕೆ ಶೇ.12 ರಷ್ಟು ಜಾಹೀರಾತು ದರವನ್ನು ಏಪ್ರಿಲ್ 1,2023 ರಿಂದ ಹೆಚ್ಚಳ ಮಾಡದ ಇಲಾಖೆಯ ಕ್ರಮವನ್ನು ಖಂಡಿಸಿದರು.
ಸಂಘದ ವತಿಯಿಂದ ಇಲಾಖೆಯ ಆಯುಕ್ತರಿಗೆ ಜನವರಿ 18 ರಂದು ಕೆಲವು ಬೇಡಿಕೆಗಳ ಈಡೇರಿಕೆಗೆ ಮನವಿ ಪತ್ರ ಸಲ್ಲಿಸಿ ,
ಆಯುಕ್ತರೊಂದಿಗೆ ಸಭೆ ಕೂಡ ಮಾಡಿ ವಿನಂತಿಸಲಾಯಿತು.ಮನವಿ ಪತ್ರ ಸಲ್ಲಿಸಿ ಎರಡುವರೆ ತಿಂಗಳು ಗತಿಸಿದರೂ ಯಾವುದೇ ಕ್ರಮ ತೆಗೆದುಕೊಳ್ಳದ ಇಲಾಖೆ, ಸಂಘದ ಬೇಡಿಕೆಗಳ ಇಡೇರಿಕೆಗೆ ಮೀನಮೇಷ ಎಣಿಸಿ ಕಡತ ಚಾಲನೆ ಮಾಡದ ಅಧಿಕಾರಿ ಸಿಬ್ಬಂದಿಗಳ ವಿರುದ್ದ ಸರ್ಕಾರ ಕೂಡಲೇ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಆಗ್ರಹಿಸಿದರು.
ಪತ್ರಿಕೆಗಳ ಸಂಪಾದಕರು ಇಲಾಖೆಯಿಂದ ಸಹಾಯ ಸಹಕಾರ ಕೋರುತ್ತಾರೆ. ಪತ್ರಿಕೆಗಳ ದರ ಹೆಚ್ಚಳ, ಮಾಧ್ಯಮ ಪಟ್ಟಿಗೆ ಸೇರ್ಪಡೆ, ಪ್ರಾದೇಶಿಕ ಪತ್ರಿಕೆಗಳ ಪರಿಗಣನೆ, ಹಿಂದುಳಿದ ವರ್ಗಗಳಿಗೆ ಎಸ್ ಸಿ, ಎಸ್.ಟಿ ಪತ್ರಿಕೆಗಳಿಗೆ ಹೊಸದಾಗಿ ಮಾಸಿಕ ಜಾಹೀರಾತು ಬಿಡುಗಡೆ ಇನ್ನೂ ಮುಂತಾದ ಕಡತಗಳು 6-8 ತಿಂಗಳಾದರೂ ಬಾಕಿ ಉಳಿದಿವೆ ಎಂದು ಕಚೇರಿಗೆ ಅಲೆದಾಡಿ ಅಲೆದಾಡಿ ಪತ್ರಿಕೆ ಸಂಪಾದಕರು ಬೇಸತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಇಲಾಖೆ ತಕ್ಷಣ ಕ್ರಮಕೈಗೊಳ್ಳಬೇಕೆಂದು ಆಯುಕ್ತರಿಗೆ ರಾಜ್ಯಾಧ್ಯಕ್ಷರು ಮನವಿ ಮಾಡಿದರು.
ಹಿರಿಯ ಪತ್ರಿಕಾ ಸಂಪಾದಕರಾದ ಶಿವಶರಣಪ್ಪ ಮಾತನಾಡಿ ವಾರ್ತಾ ಇಲಾಖೆಯಿಂದ ಪತ್ರಿಕೆ ಸಂಪಾದಕರ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಕಚೇರಿಗೆ ಎಡೆತಾಕಬೇಕಾಗಿದೆ. ಇಲಾಖೆ ಇರುವುದು ಪತ್ರಿಕೆಗಳ ಸಹಕಾರಕ್ಕಾಗಿ.ಇದನ್ನ ಸಂಘಟಿತರಾಗಿ ಸಂಪಾದಕರು ನೆನಪಿಸಿಕೊಡಬೇಕಾಗಿದೆ. ಪತ್ರಿಕೆ ವರದಿಗಾರರೇ ಬೇರೆ, ಪತ್ರಿಕೆಗಳ ಸಂಪಾದಕರು, ಮಾಲೀಕರೆ ಬೇರೆ. ಪತ್ರಿಕೆಗಳ ಉಳುವಿಗಾಗಿ ಸಂಪಾದಕರೆಲ್ಲ ಸಂಘಕ್ಕೆ ಸದಸ್ಯರಾಗಿ ಸಂಘವನ್ನ ಸಂಘದ ಅಧ್ಯಕ್ಷರ ಕೈ ಬಲಪಡಿಸೋಣವೆಂದು ಹೇಳಿದರು.
ರಾಜ್ಯ ಮಟ್ಟದ ಪತ್ರಿಕೆಗಳಿಗಿಂತ ರಾಜ್ಯದಲ್ಲಿನ ಜಿಲ್ಲಾ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳು ಹೆಚ್ಚಿನ ಪ್ರಚಾರದ ಕಾರ್ಯವನ್ನ ಮಾಡುತ್ತವೆ ಎಂಬುವುದನ್ನ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಹೆಚ್ಚಿನ ಜಾಹೀರಾತು ನೀಡಿ ಉಳಿಸಿ ಬೆಳಸಬೇಕೆಂದು ಸರ್ಕಾರಕ್ಕೆ ಆಗ್ರಹ ಮಾಡಿದರು.
ಈ ಸಂದರ್ಭದಲ್ಲಿ ಬೀದರ್ ಜಿಲ್ಲಾ, ಪ್ರಾದೇಶಿಕ ಪತ್ರಿಕೆಗಳ ಆನೇಕ ಸಂಪಾದಕರು ಸೇರಿದಂತೆ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಚನ್ನಬಸವ, ಖಜಾಂಚಿ ಖಾನ್ ಸಾಬ್ ಮೊಮಿನ್, ರಾಜ್ಯ ಪರಿಷತ್ತಿನ ಸದಸ್ಯ ರಮೇಶ್ ರೆಡ್ಡಿ ಇದ್ದರು.
ಇದೇ ಸಂದರ್ಭದಲ್ಲಿ ಬೀದರ್ ಜಿಲ್ಲಾ ಘಟಕದ ರಚನೆ ಕೂಡ ಮಾಡಲಾಯಿತು. ಪದಾಧಿಕಾರಿಗಳು ವಿವರ ಇಂತಿದೆ.
ಜಿಲ್ಲಾಧ್ಯಕ್ಷರಾಗಿ – ವಿರುಪಾಕ್ಷ
ಗಾದಗಿ, ಉಪಾಧ್ಯಕ್ಷರಾಗಿ – ಜಗನ್ನಾಥ್ ಜೀರ್ಗಾ, ಅಬ್ದುಲ್ ಖದೀರ್, ಅಜಯ್ ಭೋಸ್ಲೆ
ಪ್ರಧಾನ ಕಾರ್ಯದರ್ಶಿಯಾಗಿ – ಶಶಿಕುಮಾರ ಪಾಟೀಲ
ಖಜಾಂಚಿಯಾಗಿ- ಖಾಜಿ
ಅಲಿಯೋದ್ದೀನ್ (ಅಲಿಬಾಬಾ),
ಕಾರ್ಯದರ್ಶಿಯಾಗಿ –
ವಿಜಯಕುಮಾರ ಪಾಟೀಲ,
ಶ್ರೀನಿವಾಸ ಚೌಧರಿ
ಸಹ ಕಾರ್ಯದರ್ಶಿಯಾಗಿ –
ಸುನೀಲ ಕುಲಕರ್ಣಿ, ರಾಮಚಂದ್ರ
ಭೋಸ್ಲೆ ಜಂಟಿ ಕಾರ್ಯದರ್ಶಿ ಚಂದ್ರಕಾಂತ ಪಾಟೀಲ, ಜಾರ್ಜ್ ಫರ್ನಾಂಡೀಸ್
ಸಂಘಟನಾ ಕಾರ್ಯದರ್ಶಿಯಾಗಿ – ಪ್ರಥ್ವಿರಾಜ್,ಪ್ರದೀಪ್ ಬಿರಾದಾರ
ರಾಜ್ಯ ಸಂಘದ ಗೌರವ ಸಲಹೆಗಾರರಾಗಿ
ಶಿವಶರಣಪ್ಪ ವಾಲಿ, ಗಂಧರ್ವ
ಸೇನಾ, ರಾಜ್ಯ ಪರಿಷತ್ತಿನ ಸದಸ್ಯರಾಗಿ ಮಾಳಪ್ಪ ಅಡಸಾರೆ, ಸಿದ್ರಾಮಯ್ಯ ಸ್ವಾಮಿ, ಮಲ್ಲಿಕಾರ್ಜುನ ಬಿರಾದಾರ, ಅಶೋಕ ಕರಂಜಿ , ಬಸವರಾಜ ಪವಾರ.