Wednesday, June 18, 2025
Google search engine
Homeರಾಜ್ಯನಡೆದ ತಪ್ಪಿನ‌ ಬಗ್ಗೆ ಎನೂ ಕ್ರಮ ಕೈಗೊಳ್ಳಬೇಕು ಆ ನಿರ್ಣಯ ತೆಗೆದುಕೊಂಡಿದ್ದೇವೆ: ಸಚಿವ ಎಚ್.ಕೆ ಪಾಟೀಲ್
spot_img

ನಡೆದ ತಪ್ಪಿನ‌ ಬಗ್ಗೆ ಎನೂ ಕ್ರಮ ಕೈಗೊಳ್ಳಬೇಕು ಆ ನಿರ್ಣಯ ತೆಗೆದುಕೊಂಡಿದ್ದೇವೆ: ಸಚಿವ ಎಚ್.ಕೆ ಪಾಟೀಲ್

ಬೆಳಗಾವಿ: ಬರೀ ಪೊಲೀಸರ ಅಧಿಕಾರಿಗಳ  ಮೇಲೆ  ಅಷ್ಟೇ ಕ್ರಮ ಕೈಗೊಂಡಿಲ್ಲ ನಾವು ಆರ್‌ಸಿಬಿ , ಕ್ರಿಕೆಟ್ ಅಸೋಶಿಯೇಷನ್   ಸೇರಿ ಲೋಪ ಆದವರ ಮೇಲೆ ಕ್ರಮ ಕೈಗೊಂಡಿದ್ದೇವೆ.  ನಡೆದ ತಪ್ಪಿನ‌ ಬಗ್ಗೆ ಎನೂ ಕ್ರಮಗಳನ್ನ ಕೈಗೊಳ್ಳಬೇಕು ಆ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ಸಚಿವ ಎಚ್.ಕೆ ಪಾಟೀಲ್ ಹೇಳಿದರು.

ಇಂದು ಮಾಧ್ಯಮ ಜೊತೆ ಮಾತನಾಡಿದ ಅವರು ರಾಜ್ಯ ಸರ್ಕಾರ ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ ಅವರನ್ನು   ಅಮಾನತ್ತು ಮಾಡಿದ ವಿಚಾರಕ್ಕೆ ಸಂಬಂದಿಸಿದಂತೆ  ಬೆಳಗಾವಿ ಕೆಕೆ ಕೊಪ್ಪ ಅಲ್ಲಿ ಮಾದ್ಯಮ ಜೊತೆ ಮಾತನಾಡಿದ ಅವರು  ನ್ಯಾ.ಮೈಕಲ್ ಕುನ್ನಾ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಿದ್ದೇವೆ ಇದರಲ್ಲಿ ಬರೀ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡ ಹಾಗೆಯೇ ಇದಕ್ಕಿಂತ ಹೆಚ್ಚಿನದ್ದು ಎನೂ ಮಾಡಲು ಸಾಧ್ಯ  ಎಂದರು.

ವಿಜಯೋತ್ಸವಕ್ಕೆ ತರಾತುರಿಯಲ್ಲಿ ಅವಕಾಶ ಕೊಟ್ಟಿದ್ದೇವಾ ಏನೂ ಅಂತಾ ತನಿಖೆಯಲ್ಲಿ ಗೊತ್ತಾಗುತ್ತೆ. ಯಾಕಾಗಿದೆ ಅನ್ನೋದು ನಮಗೂ ಅಚ್ಚರಿಯಾಗಿದೆ ಆಗಿದೆ ನ್ಯಾಯಮೂರ್ತಿ ವಿಚಾರಣೆ ಶುರು ಮಾಡಿದ್ದಾರೆ ಎಂದರು.

ಹೀಗಾಗಿ ಜನಪ್ರತಿನಿಧಿಗಳಾಗಿ ನಾವು ಅದರ ಬಗ್ಗೆ  ಈಗ ವಿಶ್ಲೇಷಣೆ ಮಾಡುವುದಿಲ್ಲ ಎಂದ ಅವರು  ಸಿಎಂ, ಡಿಸಿಎಂ ರಾಜೀನಾಮೆಗೆ ಬಿಜೆಪಿ ಒತ್ತಾಯ ವಿಚಾರರಕ್ಕೆ ತೀಕ್ಷಣವಾಗಿ ಉತ್ತರಿಸಿ, ಸಿಎಂ ಅವರು ತಕ್ಷಣ ಮಾಹಿತಿ ಬಂದ ಕೂಡಲೇ ಆಸ್ಪತ್ರೆಗೆ ಹೋದ್ರು.ಮೃತಪಟ್ಟಿದ್ದಾರೆ ಅಂದ ಕೂಡಲೇ ಡಿಸಿಎಂ ಅವರು ಸಾವು ಕಂಡ ಯುವಕರ ಮಧ್ಯೆ ಹೋಗಿ ನಿಂತ್ರು. ಮಾತಿನಲ್ಲಿ ಭಾವನಾತ್ಮಕವಾಗಿ ತೊಡಗಿಸಿಕೊಂಡಿದ್ದು ತಪ್ಪಾ.? ಸತ್ತಾಗ ಅಳುವುದರ ಮೇಲೆ ವ್ಯಾಖ್ಯಾನ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.

ಡಿಸಿಎಂ ಅವರನ್ನ ಖಂಡಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಇದನ್ನ ರಾಜಕೀಯವಾಗಿ ಬಳಸಿಕೊಳ್ಳಬಾರದು, ತಪ್ಪು ಮಾಡಿದವರಿಗೆ ಶಿಕ್ಷೆ ಅಗುತ್ತೆ ಎಂದು ಎಚ್.ಕೆ ಪಾಟೀಲ್ ಹೇಳಿದರು.

RELATED ARTICLES
- Advertisment -spot_img

Most Popular

error: Content is protected !!