Wednesday, June 18, 2025
Google search engine
Homeರಾಜ್ಯಫೈನಲ್ ಪಂದ್ಯದಲ್ಲಿ ಆರ್ ಸಿ ಬಿ ತಂಡ ಗೆದ್ದು ಬರಲಿ: ಕರವೇಯಿಂದ ವಿಶೇಷ ಪೂಜೆ
spot_img

ಫೈನಲ್ ಪಂದ್ಯದಲ್ಲಿ ಆರ್ ಸಿ ಬಿ ತಂಡ ಗೆದ್ದು ಬರಲಿ: ಕರವೇಯಿಂದ ವಿಶೇಷ ಪೂಜೆ

ಬೆಳಗಾವಿ: ಐಪಿಎಲ್  ಫೈನಲ್ ಪಂದ್ಯವು  ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ತಂಡಗಳ ನಡುವೆ ನಡೆಯಲಿರುವ, ಫೈನಲ್ ಪಂದ್ಯದಲ್ಲಿ ನಮ್ಮ ಹೆಮ್ಮೆಯ ಆರ್ ಸಿ ಬಿ ತಂಡ  ಗೆದ್ದು ಬರಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಬಣದ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಮಂಗಳವಾರ  ಬೆಳಗಾವಿ ಚನ್ನಮ್ಮ ವೃತ್ತದಲ್ಲಿರುವ ಗಣೇಶ್ ಮಂದಿರದಲ್ಲಿ ವಿಶೇಷ ಪೂಜೆ  ಸಲ್ಲಿಸಲಾಯಿತ್ತು.

ಇದೆ ಸಂದರ್ಭದಲ್ಲಿ ವಿರಾಟ್ ಕೊಹ್ಲಿ, ಕನ್ನಡಿಗ ಮಯಾಂಕ್ ಅಗರವಾಲ್ ಸೇರಿ ತಂಡದ ಆಟಗಾರರ ಭಾವಚಿತ್ರ ಹಿಡಿದು ಪೂಜೆ ಸಲ್ಲಿಸಿ ಆರ್ ಸಿಬಿ ತಂಡಕ್ಕೆ ಜಯವಾಗಲೇಂದು ಘೋಷಣೆ ಕರ್ನಾಟಕದ ಮೇಲೆ ಇರುವ ಅಭಿಮಾನ ಹೊರಹಾಕಿದರು.

ಈ ಸಲಾ ಕಪ್ ನಮ್ದೆ ಎಂದು ಘೋಷಣೆ ಹಾಕಿದ ಕರವೇ ಕಾರ್ಯಕರ್ತರು ಗೆದ್ದು ಬಾ ಆರ್ಸಿಬಿ, ಗೆದ್ದು ಬಾ ಆರ್ಸಿಬಿ ಅಂತಾ ಜಯಘೋಷ ಹಾಕಿ ಶುಭಕೋರಿದ ಅಭಿಮಾನಿಗಳು.

ಕಿಂಗ್ ಕೊಹ್ಲಿ  ,ಮಯಾಂಕ್ ಮಹಿಮೆ ಅಂತಾ ಘೋಷಣೆ ವಾಕ್ಯ ಬರೆದು ಶುಭಕೋರಿದ ಕರವೇ ಕಾರ್ಯಕರ್ತರು ಹಾಗೂ ಚಿಕ್ಕ ಮಕ್ಕಳಿಂದಲೂ ಆರಸಿಬಿಗೆ ಶುಭಕೋರಿದರು.

 

RELATED ARTICLES
- Advertisment -spot_img

Most Popular

error: Content is protected !!