ಬೆಳಗಾವಿ: ಹನಿಟ್ರ್ಯಾಪ ಪ್ರಕರಣದ ತನಿಖೆಯನ್ನ ಸಿಬಿಐಗೆ ಕೊಡಬೇಕು.ಅಂದಾಗ ಪ್ರಕರಣದ ಹಿಂದಿರುವ ನಿರ್ಮಾಪಕರು, ನಿರ್ದೇಶಕರು ಯಾರೋ ಇದ್ದಾರೆ ಅನೋದು ಗೊತ್ತಾಗುತ್ತೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಜೊತೆ ಮಾತನಾಡಿದ ಅವರು ಹನಿಟ್ರ್ಯಾಪ ವಿಚಾರದ ಬಗ್ಗೆ ಸದನದಲ್ಲಿ ಸಚಿವರೇ ಹೇಳಿದ್ದಾರೆ ಪ್ರಕರಣ ದಾಖಲಿಸುತ್ತೇವೆ ಅಂತಾ ಸಚಿವರಿಗೆ ಗೆ ಪ್ರಕರಣ ದಾಖಲಿಸಿದ್ದಾರೆ ಮಂತ್ರಿ ಇರೋರು, ಜವಾಬ್ದಾರಿ ಸ್ಥಾನದಲ್ಲಿ ಹೋಮ್ ಮಿನಿಸ್ಟರ್ ಗೆ ದೂರು ಕೊಡೊದು ಎಷ್ಟು ಸರಿ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠಾನದಿಂದ ಅಭಿವೃದ್ಧಿ ಕೆಲಸ ಕುಂಟಿತಗೊಂಡಿದ್ದು ಹಣಕಾಸಿನ ಪರಿಸ್ಥಿತಿ ಚಿಂತಾಜನಕ ವಾಗಿದೆ ನೌಕರರ ಪೇಮೆಂಟ್ ಕೊಡುತ್ತಿಲ್ಲ, ಗುತ್ತಿಗೆದಾರ ಬಿಲ್ ಸರಿಸುಮಾರು ಅಂದಾಜು 60ಸಾವಿರ ಕೋಟಿ ಗುತ್ತಿಗೆದಾರರ ಬಿಲ್ ಬಾಕಿ ಇದೆ ಎಂದರು.
ರಾಜ್ಯದಲ್ಲಿ ಹಾಲಿನ ದರ ಹೆಚ್ಚಳವನ್ನ ನೇರವಾಗಿ ರೈತರಿಗೆ ಕೊಡ್ತೇವಿ ಅಂತಾ ಸಿದ್ದರಾಮಯ್ಯ ಸಬೂಬ್ ಹೇಳ್ತಿದ್ದಾರೆ ಆದರೆ, ರೈತರಿಗೂ ವಿಶೇಷವಾಗಿ ನಾಲ್ಕು ರೂಪಾಯಿ ಹಣವನ್ನು ನಿಮ್ಮ ಖಜಾನೆಯ ಕೊಡಿಜನಸಾಮಾನ್ಯರ ಮೇಲೆ ಯಾಕೆ ಹೊರೆ ಹಾಕುತ್ತೀರಾ ನೀವೆ ನಿಮ್ಮ ಖಜಾನೆಯಿಂದ ಕೊಡಿ ಜನರ ಮೇಲೆ ಯಾಕೆ ಭಾರ ಹಾಕುವಿರಿ ಎಂದು ಸಿದ್ದರಾಮಯ್ಯ ವಿರುದ್ಧ ಜಗದೀಶ್ ಶೆಟ್ಟರ್ ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಆಡಳಿತ ವೈಫಲ್ಯದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದೇವೆ, ಬಿಜೆಪಿ ಪಕ್ಷದ ನೇತೃತ್ವದಲ್ಲಿ ಅಹೋರಾತ್ರಿ ಹೋರಾಟಕ್ಕೆ ಮುಂದಾಗಿದೆ. ಸಿದ್ದರಾಮಯ್ಯ ಆಡಳಿತ ಹಿಡಿತ ಕಳೆದುಕೊಂಡಿದ್ದಾರೆ,ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ,ಅಭಿವೃದ್ಧಿ ಕೆಲಸ ಆಗೊತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳ್ತಿದ್ದಾರೆ.
ಸಿಎಂ ಐದು ವರ್ಷ ಪೂರಕೆ ಮಾಡಬೇಕು ಅಂತಾ ಹೊರಟಿದ್ದಾರೆ.ನಾನೇ ಡಿಕೆಶಿ ಮಂತ್ರಿ ಆಗಬೇಕು ಫೈಟಿಂಗ್ ನಡೆಸ್ತಿದ್ದಾರೆ.ರಾಜ್ಯ ಕಾಂಗ್ರೆಸ್ ಸರ್ಕಾರ ಅಂತಿಮ ಹಂತಕ್ಕೆ ಬಂದಿದ್ದು,ಕಾಂಗ್ರೆಸ್ ಗ್ಯಾರೆಂಟಿ ಯೋಜನೆ ಮೂಲಕ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿದೆ.ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ.ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮಿರಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯದ ವಿರುದ್ಧ ಬಿಜೆಪಿ ಹೋರಾಟ ಶುರುಮಾಡಿದೆ ಎಂದು ಶೆಟ್ಟರ್ ಹೇಳಿದರು.
ಯತ್ನಾಳ ಉಚ್ಚಾಟನೆ ನಾನು ಚರ್ಚೆ ಮಾಡೊದಿಲ್ಲ.ಬಿಜೆಪಿ ವರಿಷ್ಠರು ನಿರ್ಧಾರ ಕೈಗೊಂಡಿದ್ದಾರೆ, ಅದರ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡೊದಿಲ್ಲ. ನನ್ನ ಅಭಿಪ್ರಾಯ ಮುಖ್ಯವಲ್ಲ, ಪಕ್ಷದ ನಿರ್ಧಾರ ಕೈಗೊಂಡಿದೆ ಅದನ್ನ ಒಪ್ಪಬೇಕು. ವೈಯಕ್ತಿಕವಾಗಿ ನಾನು ಅಭಿಪ್ರಾಯ ಕೊಡೊದಿಲ್ಲ .ವರಿಷ್ಠರು ಎಲ್ಲವನ್ನೂ ವಿಚಾರ ಮಾಡಿಕೊಂಡಿದ್ದಾರೆ ಸರಿಯಾದ ನಿರ್ಧಾರ ಕೈಗೊಂಡಿದ್ದಾರೆ ಎಂದರು.