Thursday, June 19, 2025
Google search engine
Homeರಾಜಕೀಯಯತ್ನಾಳ ಬಿಜೆಪಿಗೆ ವಾಪಸ್ಸ ಬರ್ತಾರೆ ಅಂತಾ ವಿಶ್ವಾಸ ನನಗೆ ಇದೆ: ರಮೇಶ ಜಾರಕಿಹೊಳಿ
spot_img

ಯತ್ನಾಳ ಬಿಜೆಪಿಗೆ ವಾಪಸ್ಸ ಬರ್ತಾರೆ ಅಂತಾ ವಿಶ್ವಾಸ ನನಗೆ ಇದೆ: ರಮೇಶ ಜಾರಕಿಹೊಳಿ

ಬೆಳಗಾವಿ : ಯತ್ನಾಳ ಅವರು ಬಿಜೆಪಿಗೆ ವಾಪಸ್ಸ ಬರ್ತಾರೆ ಅಂತಾ  ವಿಶ್ವಾಸ ನನಗೆ ಇದೆ. ಯತ್ನಾಳ ಹೊಸ ಪಕ್ಷದ ಬಗ್ಗೆ ಹೇಳಿದ್ದ ಉದ್ದೇಶವೇ ಬೇರೆ, ಮಾಧ್ಯಮದಲ್ಲಿ ಬಂದಿರೋದೆ ಬೇರೆ ಎಂದು ರಮೇಶ ಜಾರಕಿಹೊಳಿ ಹೇಳಿದರು

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಜೋತೆ ಮಾತನಾಡಿದ ಅವರು ಬೆಂಗಳೂರು ಸಭೆ ಬಳಿಕ ಮತ್ತೆ ನಾವು ಭೇಟಿ ಆಗಿಲ್ಲಾ. ಯತ್ನಾಳ ಹೊಸ ಪಕ್ಷ ಕಟ್ಟಲ್ಲ ನಮಗೆ ವಿಶ್ವಾಸ ಇದೆ ಬಿಜೆಪಿಯಲ್ಲೇ ಮುಂದುವರೆಯುತ್ತಾರೆ ಬಿಜೆಪಿಯಲ್ಲಿ ಯತ್ನಾಳ ಮುಂದುವರೆಯವ ವಿಶ್ವಾಸವಿದೆ, ಎಲ್ಲಿಯೂ ಹೋಗಲ್ಲ  ಎಂದರು.

 ಹಿಂದುತ್ವಕ್ಕಾಗಿ ಆರ್ ಎಸ್ ಎಸ್ ಇದೆಯಲ್ಲ, ಅಷ್ಟೇಸಾಕು.ಮೊನ್ನೆ ಶಾಸಕರ ಕಮಿಟಿ ಮಿಟಿಂಗ್ ನಲ್ಲಿ ಚರ್ಚೆ ಆಗಿದೆ. ಪಕ್ಷಕ್ಕೆ ಮುಜಗುರ ಆಗೋತರಾ ಹೇಳಿಕೆ ಕೊಡಬೇಡ ಅಂತಾ ಹೇಳಿದ್ದೇವೆ. ಉಚ್ಛಾಟಣೆ ಮಾಡಿದ್ದಾರೆ ಪಕ್ಷದ ಹಿರಿಯರನ್ನ ಭೇಟಿ ಮಾಡಿ ವಾಪಸ್ಸ ಪಡೆದುಕ್ಕೊಳ್ಳುವಂತೆ ಮನವಿ ಮಾಡುತ್ತೇವೆ ಎಂದು ರಮೇಶ ಜಾರಕಿಹೊಳಿ.

ಯತ್ನಾಳ ನಮ್ಮ ಪಕ್ಷದ ದೊಡ್ಡ ನಾಯಕರಿದ್ದರು ಉಚ್ಛಟಣೆ ಆಗಿದ್ದು ದುರ್ದೈವ್. ವಿಜಯೇಂದ್ರ ಹಾಗೂ ಯತ್ನಾಳ ಮಾತಿನ ಸಮರ ಮತ್ತೆ ಮುಂದುವರೆದಿದೆ  ಎನ್ನುವ ವಿಚಾರಕ್ಕೆ ಯತ್ನಾಳ ಅವರನ್ನೆ ಕೇಳಬೇಕು ಈ ವಿಷಯ ಎಂದು ರಮೇಶ ಜಾರಕಿಹೊಳಿ ಹೇಳಿದರು.

RELATED ARTICLES
- Advertisment -spot_img

Most Popular

error: Content is protected !!