ಬೆಳಗಾವಿ: ಬೆಳಗಾವಿ ತಾಲೂಕಿನ ಮಾರೀಹಾಳ ಗ್ರಾಮದ ಶ್ರೀ ದೇವಾಂಗಮಠದ ಅವರಣದಲ್ಲಿ 1.50 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಸನ್ಮಾನ್ಯ ಶ್ರೀಮತಿ ಲಕ್ಷ್ಮಿ ಆರ್. ಹೆಬ್ಬಾಳ್ಕರ ಅವರು ನೆರವೇರಿಸಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಸಚಿವರು ತಮ್ಮ ಅಧಿಕಾರಾವಧಿಯಲ್ಲಿ ತಾವು ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುತ್ತೇನೆ. ಮತ್ತು ಈಗ ಮಾರೀಹಾಳ ಗ್ರಾಮದ ಹಿಂದುಳಿದ ಜನರಿಗೆ ಅನುಕೂಲವಾಗಲೆಂದು ಈ ನೂತನ ಕಟ್ಟಡವನ್ನು ಮಂಜೂರು ಮಾಡಿಸಿದ್ದೇನೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಅದೇ ರೀತಿ ಬೆಳಗಾವಿ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಚನ್ನರಾಜ ಹಟ್ಟಿಹೊಳಿ ಇವರು ಮಾತನಾಡಿ ಸಚಿವರು ಪ್ರಾಮಾಣಿಕವಾಗಿ ಮಾಡಿದಂತಹ ಕೆಲಸಗಳನ್ನು ಒಂದೊಂದಾಗಿ ಬಿಡಿಸಿ ಹೇಳಿದರು.ಅಕ್ಕನವರು ಕೇವಲ ಆಶ್ವಾಸನೆ ಕೊಡುವುದಿಲ್ಲ, ಬದಲಾಗಿ ಕೆಲಸಗಳನ್ನು ಮಾಡಿ ತೋರಿಸುತ್ತಾರೆ ಎಂದು ಹೇಳಿದರು.
ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಗಿರಿಜಾ ಪಾಟೀಲ ಮಾತನಾಡಿ ಸಚಿವರ ಕೆಲಸಗಳ ಬಗ್ಗೆ ಹೆಮ್ಮೆ ಪಟ್ಟು, ಮಾರೀಹಾಳ ಗ್ರಾಮದ ಸಂಪೂರ್ಣ ಅಭಿವೃದ್ಧಿಗೆ ವಿನಂತಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಧ್ಯಕ್ಷರಾದ ಶ್ರೀ ಆಸಿಫ್ ಮುಲ್ಲಾ, ಶ್ರೀ ಶಂಕರಗೌಡ ಪಾಟೀಲ ಶ್ರೀ ರಾಮಚಂದ್ರ ಚವ್ಹಾನ, ಶ್ರೀ ಮಹಮ್ಮದ್ ಗೌಸ್ ಬಾಗವಾನ,ಶ್ರೀ ಕಲ್ಲಪ್ಪ ಸೀತಿಮನಿ,ಶ್ರೀ ಬಸವರಾಜ ಹಿತ್ತಲಮನಿ, ದೇವಾಂಗ ಸಮಾಜದ ಮುಖಂಡರಾದ ಶ್ರೀ ನಾರಾಯಣ ಸೊಗಲಿ, ಶ್ರೀ ಸಂಜಯ ಚಾಟೆ, ಶ್ರೀ ಲಕ್ಷ್ಮೀನಾರಾಯಣ ಕಲ್ಲೂರ, ಶ್ರೀ ಗಜಾನನ ಕಣಬರಕರ, ಶ್ರೀ ರಾಣವ್ವ ಮಾದರ (ಪಿ.ಡಿ. ಓ) ಅತಿಥಿಗಳಾಗಿ ಆಗಮಿಸಿದ್ದರು. ಬೆಳಗಾವಿ ಜಿಲ್ಲಾ ಕೆ.ಡಿ.ಪಿ. ಸಮಿತಿ ಸದಸ್ಯರಾದ ಶ್ರೀ ಬಸವರಾಜ ಮ್ಯಾಗೋಟಿ ಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಶ್ರೀ ಶಂಕರ ಸೊಗಲಿ,ಶ್ರೀ ರಮೇಶ ಅಕ್ಕತಂಗೇರಹಾಳ ಶ್ರೀ ಶ್ಯಾಮಸುಂದರ ಸೊಗಲಿ , ಶ್ರೀ ವಿನೋದ ಚವ್ಹಾನ, ಶ್ರೀ ಕಲಗೌಡ ಪಾಟೀಲ, ಶ್ರೀ ವಿನೋದ್ ಪಾಶ್ಚಾಪುರ, ಶ್ರೀ ಪ್ರಶಾಂತ ಸೊಗಲಿ, ಶ್ರೀಮತಿ ಸವಿತಾ ಮುತ್ನಾಳಿ,ಶ್ರೀ ದಿಲಾವರ್ ಪೆಂಡಾರಿ, ಶ್ರೀ ಕುಮಾರ್ ಅಕ್ಕತಂಗೇರಹಾಳ,ಶ್ರೀ ಸಮೀರ್ ಮುಲ್ಲಾ, ಶ್ರೀ ಸಿದ್ದಪ್ಪ ಸಾಳಂಕೆ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾರೀಹಾಳ, ಸುಳೇಭಾವಿ, ಕರಡಿಗುದ್ಧಿ,ಮೋದಗಾ, ಮುತಗಾ,ತುಮ್ಮರಗುದ್ದಿ ಮುಂತಾದ ಗ್ರಾಮಗಳಿಂದ ಅನೇಕ ಜನರು ಆಗಮಿಸಿದ್ದರು.
ಶ್ರೀ ರಾಜೇಶ ಸೊಗಲಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಅನಂತ ಸಾಳಂಕೆ ವಂದನಾರ್ಪಣೆ ಮಾಡಿದರು.