Thursday, October 16, 2025
Google search engine
Homeಜಿಲ್ಲಾಬೆಳಗಾವಿಯಲ್ಲಿ ಠೇವಣಿದಾರರ ಪ್ರತಿಭಟನೆ
spot_img

ಬೆಳಗಾವಿಯಲ್ಲಿ ಠೇವಣಿದಾರರ ಪ್ರತಿಭಟನೆ

ಬೆಳಗಾವಿ: ಕಿತ್ತೂರು ರಾಣಿ ಚೆನ್ನಮ್ಮ ಅರ್ಬನ್ ಸಹಕಾರ ಬ್ಯಾಂಕ್  ಠೇವಣಿದಾರ ಹಣ ವಾಪಸ ನೀಡುತಿಲ್ಲ ಎಂದು ಠೇವಣಿದಾರು ರೋಪಿಸಿ ಸೋಮವಾರ ಜಿಲ್ಲಾ ಆಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾ ಅಧಿಕಾರಿಗಳ ಕಚೇರಿ ಆವರಣ ಮುಂಭಾಗದಲ್ಲಿ ಸೀರೆ, ಬಳೆ, ಕಿವಿ ಒಲೆ, ಕುಂಕುಮ, ಅರಿಶಿನ ತಂದು ಪ್ರತಿಭಟನಾಕಾರರು ವಿಭಿನ್ನವಾಗಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು.

ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಸಹಕಾರಿ ಬ್ಯಾಂಕ್. ಠೇವಣಿ ಇಟ್ಟ ಹಣ ಹಾಗೂ ಬಡ್ಡಿ ನೀಡದ ಆರೋಪ. ಪ್ರಕರಣ ದಾಖಲಾಗಿ 11 ತಿಂಗಳು‌ ಕಳೆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮಕ್ಕೆ ಮಾಹಿತಿ ‌ಕೇಳಿದ್ದ ಠೇವಣಿದಾರರುಉತ್ತರ ಸಿಗದೆ ಕಂಗಾಲಾಗಿರುವ ಠೇವಣಿದಾರರು ನಿಗದಮ ಅಧಿಕಾರಿಗಳು ಕೈಗೆ ಬಳೆ ತೊಟ್ಟುಕೊಳ್ಳಿ ಎಂದರು.

ಸಾಧುನವರ ಒಬ್ಬ ಒಳ್ಳೆ ವ್ಯಕ್ತಿ ಅಂದುಕ್ಕೊಂಡು ಕಿತ್ತೂರು ರಾಣಿ ಚೆನ್ನಮ್ಮ ಅರ್ಬನ್ ಕ್ರೇಡಿಟ್ ಸೊಸೈಟಿಯಲ್ಲಿ ಇಟ್ಟಿದ್ವಿ ಆದರೆ ಸಾವಿರಾರು ಜನ ಇಟ್ಟಿದ್ದ ಠೇವಣಿ ಹಣ ವಾಪಸ್ ನೀಡುತ್ತಿಲ್ಲ.   ಹಣ ವಾಪಸ ನೀಡಡಿದರೆ ನಾವು ಬೀದಿಗೆ ಬರುತ್ತೇವೆ. ನಮ್ಮ ಹಣ ವಾಪಸ ನೀಡುವಂತೆ ಠೇವಣಿದಾರರು ಆಗ್ರಹಿಸಿದರು.

RELATED ARTICLES
- Advertisment -spot_img

Most Popular

error: Content is protected !!