Wednesday, June 25, 2025
Google search engine
Homeಜಿಲ್ಲಾಎಲ್ಲ ಗ್ರಾಪಂಗಳಲ್ಲಿ ಕಾಳಜಿ ಕೇಂದ್ರ ತೆರೆಯಿರು : ಇಒ ಯಶಂತಕುಮಾರ
spot_img

ಎಲ್ಲ ಗ್ರಾಪಂಗಳಲ್ಲಿ ಕಾಳಜಿ ಕೇಂದ್ರ ತೆರೆಯಿರು : ಇಒ ಯಶಂತಕುಮಾರ

ಬೆಳಗಾವಿ : ತಾಲ್ಲೂಕಿನಲ್ಲಿ ನಿರತರವಾಗಿ ಮಳೆಯಾಗುತಿದ್ದು, ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳು, ಅಂಗನವಾಡಿ ಕಟ್ಟಡಗಳಿಗೆ ಪಿಡಿಒ ಅವರು ಭೇಟಿ ನೀಡಿ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿಗಳಾದ ಯಶಂತಕುಮಾರ ಸೂಚಿಸಿದರು.

ತಾಲ್ಲೂಕಿನ ಕಂಗ್ರಾಳಿ ಬಿ.ಕೆ ಹಾಗೂ ಹೋನಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳಿಗೆ ಬುಧವಾರ ಜೂನ್ 25 ರಂದು  ಭೇಟಿ ನೀಡಿ ಶಾಲೆಯ ಆವರಣ, ಗೋಡೆ ಹಾಗೂ ಕಟ್ಟಡಗಳನ್ನು ಪರಿಶೀಲನೆ ಮಾಡಿ ಮಾತನಾಡಿದ ಅವರು, ಶಾಲೆಯ ಆವರಣದಲ್ಲಿ ಮಳೆಯ ನೀರು ನಿಲ್ಲುತಿದ್ದು, ನೀರು ಹರಿದು ಹೋಗುವಂತೆ ಚರಂಡಿ ಮಾಡುಂತೆ ಪಿಡಿಒ ಅವರಿಗೆ ಸೂಚಿಸಿದರು.

ಪಿಡಿಒ ಅವರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ತಮ್ಮ ಪಂಚಾಯತಿ ವ್ಯಾಪಿಯಲ್ಲಿ ಬರುವ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಹಳೆ ಕಟ್ಟಗಳಲ್ಲಿ ವಾಸವಾಗಿರು ಮನೆಗಳನ್ನು ಗುರುತಿಸಿ ಪಟ್ಟಿ ಮಾಡಿ ಇಟ್ಟಿಕೊಳ್ಳಿ, ಬಹಳ ಹಳೆ ಕಟ್ಟಡಗಳು ತೊಂದರೆಯಾಗುಂತೆ ಕಂಡುಬಂದರೆ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಸಭಭನಗಳಿಗೆ ಸ್ಥಳಾಂತರಿಸಿಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಕನಕ ಗ್ರಾಮ ಪಂಚಾಯಿತಿಯಲ್ಲಿ ನದಿ ಪಾತ್ರವನ್ನು ಗಮನಿಸಿದಾಗ ಮಾರ್ಕಂಡಯ್ಯ ನದಿ ನದಿಯ ಒಳಹರಿವು ಹೆಚ್ಚಾಗಿದ್ದು, ನದಿ ಪಾತ್ರದಲ್ಲಿ ಬರುವಂತಹ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುಬೇಕು. ವಿಶೇಷವಾಗಿ ಮಕ್ಕಳು, ಸಾರ್ವಜನಿಕರು ಹಾಗೂ ದನ ಕರುಗಳು ನದಿ ಪಾತ್ರಕ್ಕೆ ಹೋಗದ ಹಾಗೆ ಗಮನವನ್ನು ಹರಿಸುವುದು ಹಾಗೂ ಪ್ರಚಾರ ಪಡಿಸುವುದು ಡಂಗೂರ ಹಾಕಿಸುವುದು ಜೊತೆಗೆ ಕಡ್ಡಾಯವಾಗಿ ಎಲ್ಲ ಗ್ರಾಮ ಪಂಚಾಯತಗಳಲ್ಲಿ  ಕಾಳಜಿ ಕೇಂದ್ರಗಳನ್ನು ತೆರೆಯಬೇಕು. ಕಾಳಜಿ ಕೇಂದ್ರದ ಮೂಲಭೂತ ಸೌಕರ್ಯಗಳನ್ನು ಇಂದೇ ಪರಿಶೀಲಿಸಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಪಿಡಿಒ ಅವರಿಗೆ ಸೂಚಿಸಿದರು.

ಈ ವೇಳೆ ಪಿಡಿಒ ಆರ್.ಬಿ.ರಂಗಪ್ಪಗೋಳ, ಗಂಗಾಧರ ನಾಯಕ, ಶಾಲಾ ಮುಖ್ಯೋಪಾಧ್ಯ  ಆರ್.ಜೆ ಭಜಂತ್ರಿ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಇದ್ದರು.

RELATED ARTICLES
- Advertisment -spot_img

Most Popular

error: Content is protected !!