ಬೆಳಗಾವಿ: ಇದೇ ದಿನಾಂಕ 21ರಂದು ಜರುಗಲಿರುವ ಅಂತರ ರಾಷ್ಟ್ರೀಯ ಯೋಗಾಸನ ದಿನಾಚರಣೆ”ಯ ಸಿದ್ಧತೆಯ ಚರ್ಚೆಗಾಗಿ ಬೆಳಗಾವಿ ಜಿಲ್ಲಾ ಪತಂಜಲಿ ಯೋಗ ಸಮಿತಿಯ ಸಭೆಯು ದಿನಾಂಕ 14ರಂದು ದೂರದರ್ಶನ ನಗರದ ಯೋಗ ಕೇಂದ್ರದಲ್ಲಿ ಜರುಗಿತು.
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆ ದಿನ ಕೇಂದ್ರ ಸಮಿತಿಯು ನೀಡಿರುವ ಆದೇಶದಂತೆ “ಯೋಗಾಸನ ಶಿಷ್ಟಾಚಾರ”ದ ಪ್ರಕಾರ ಯೋಗ ಮಾಡುವದು, ನುರಿತ ವೈದ್ಯರ ಉಪನ್ಯಾಸ ಏರ್ಪಡಿಸಿ ಯೋಗದ ಲಾಭ ಬಗ್ಗೆ ಪ್ರಚುರಪಡಿಸುವುದು,ಹೆಚ್ಚಿನ ಜನರಿಗೆ ಯೋಗದ ಬಗ್ಗೆ ಅರಿವು ನೀಡುವದು, ‘ಯೋಗಾಸನ ಮಾಡಿ ನಿರೋಗಿ ಆಗಿ’ ಎಂದು ಸಾರುವುದು ಮುಂತಾದ ಕಾಯ೯ಕ್ರಮಗಳೊಂದಿಗೆ ದಿನಾಚರಣೆ”ಯನ್ನು ನಗರದ ವಿವಿಧ ಭಾಗಗಳಲ್ಲಿರುವ ಪತಂಜಲಿಯ ಕೇಂದ್ರ ಗಳಲ್ಲಿ ಆಚರಿಸುವಂತೆ ಕರೆ ನೀಡಲಾಯಿತು.
ಸಭೆಯಲ್ಲಿ ಪತಂಜಲಿಯ ಪ್ರಾಂತ ಮುಖ್ಯಸ್ಥ ಕಿರಣ ಮನ್ನೋಳಕರ, ಜಿಲ್ಲಾ ಮುಖ್ಯಸ್ಥ ಮೋಹನ ಬಾಗೇವಾಡಿ, ಚಂದ್ರಕಾಂತ ಖಂಡಗಾವೆ,ಪುರುಷೋತ್ತಮ ಪಟೇಲ, ದೂರದರ್ಶನ ನಗರ ಯೋಗ ಕೇಂದ್ರದ ಮುಖ್ಯಸ್ಥ ಬಿ ಎಂ ಕಳ್ಳಿಗುಡ್ಡ, ರಂಗ ಸೃಷ್ಟಿ”ಅಧ್ಯಕ್ಷರಾದ ರಮೇಶ ಜಂಗಲ ಹಿರಿಯ ನಾಗರಿಕರಾದ ಎಸ್ ಎಂ ಕಲೂತಿ ಮುಂ.ಉಪಸ್ಥಿತರಿದ್ದು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.ಕೊನೆಯಲ್ಲಿ ಶ್ರೀ ಉಲ್ಲಾಸ ಕುಲಕರ್ಣಿ ವಂದಿಸಿದರು. ನಂತರ ಸವ೯ರಿಗೂ ಉಪಹಾರ ನೀಡಲಾಯಿತು.