Wednesday, June 18, 2025
Google search engine
Homeಜಿಲ್ಲಾಬೆಳಗಾವಿ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು: ಅಲರ್ಟ್‌ ಆಗಿರೋ ಆರೋಗ್ಯ ಇಲಾಖೆಯ ಅಧಿಕಾರಿಗಳು
spot_img

ಬೆಳಗಾವಿ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು: ಅಲರ್ಟ್‌ ಆಗಿರೋ ಆರೋಗ್ಯ ಇಲಾಖೆಯ ಅಧಿಕಾರಿಗಳು

ಬೆಳಗಾವಿ : ಕಳೆದ ಐದು ವರ್ಷಗಳ ಹಿಂದೆ ಇಡೀ ಜಗತ್ತಿನ ಜೀವ ಹಿಂಡಿದ್ದ ಮಾರಕ ಕೊರೊನಾ ಮತ್ತೆ ವಕ್ಕರಿಸಿದೆ. ಸಿಂಗಾಪುರದಿಂದ ಆರಂಭವಾಗಿರೋ ಸೋಂಕು ಹರಡುವಿಕೆ ಮತ್ತೆ ರಾಜ್ಯದಲ್ಲಿ 30ಕ್ಕೂ ಹೆಚ್ಚು ಜನರಿಗೆ ಕಾಣಿಸಿಕೊಂಡಿದೆ. ಇನ್ನೂ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲ ಚಿಕಿತ್ಸೆ ಪಡೆಯುತ್ತಿರೋ ಮಹಿಳೆಯೊಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅಲರ್ಟ್‌ ಆಗಿರೋ ಬೆಳಗಾವಿಯ ಆರೋಗ್ಯ ಇಲಾಖೆಯ ಅಧಿಕಾರಿಗಳು, ಬಿಮ್ಸ್‌ ನಲ್ಲಿ ಪ್ರತ್ಯೇಕ ವಾರ್ಡ್‌ ಸಹ ಮಾಡಿದ್ದಾರೆ.

ಆಸ್ಪತ್ರೆಯಲ್ಲಿ ಸಿದ್ದಗೊಂಡಿರೋ ಬೆಡ್‌ ಗಳು, ಮತ್ತೊಂದು ಕಡೆಯಲ್ಲಿ ಗಡಿಭಾಗದಲ್ಲಿ ಇಲ್ಲ ಯಾವುದೇ ಚೆಕ್‌ ಪೋಸ್ಟ್.‌ ಇದು ಬೆಳಗಾವಿ ಜಿಲ್ಲೆಯ ಗಡಿ ಹಾಗೂ ಬಿಮ್ಸ್‌ ಆಸ್ಪತ್ರೆಯ ದೃಶ್ಯಗಳು. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಗರ್ಭಿಣಿಯೊಬ್ಬರಿಗೆ ಮತ್ತೆ ಕೋವಿಡ್‌ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆತಂಕ ಸೃಷ್ಠಿಯಾಗಿದೆ. ಇನ್ನೂ ಪಕ್ಕದ ಮಹಾರಾಷ್ಟ್ರದಲ್ಲಿ ಸೋಂಕು ವ್ಯಾಪಕವಾಗಿ ಹರಡಿದ್ದು, 45 ಜನರಿಗೆ ಸೋಂಕು ದೃಢವಾಗಿದ್ದು, ಇನ್ನೂ ಮೃತಪಟ್ಟಿದ್ದಾರೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರೋ ಬೆಳಗಾವಿಯಲ್ಲಿ ಆತಂಕ ಸೃಷ್ಠಿಸಿದೆ. ಇನ್ನೂ ರಾಜ್ಯದಲ್ಲಿ ಈವರೆಗೆ 30ಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬಿಮ್ಸ್‌ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ. ಇಲ್ಲಿನ ಪ್ರತ್ಯೇಕ ವಾರ್ಡ್‌ ಮಾಡಲಾಗಿದ್ದು, ಸೋಮವಾರಿಂದ ಟೆಸ್ಟಿಂಗ್‌ ಆರಂಭಿಸುವ ಬಗ್ಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಇನ್ನೂ ಕೋವಿಡ್‌ ಸೋಂಕು ಗರ್ಭಣಿಯರು, ವೃದ್ಧರು ಹಾಗೂ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇರೋ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಇನ್ನೂ ಬೆಳಗಾವಿಯಲ್ಲಿ ಕೋವಿಡ್‌ ಕೇಸ್‌ ಪತ್ತೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಎಚ್‌ ಓ ಈಶ್ವರ ಗಡಾದ್‌, ಕೆಮ್ಮು, ನೆಗಡಿ, ಜ್ವರ ದಂತಹ ಲಕ್ಷಣಗಳು ಕಂಡು ಬಂದ್ರೆ ಎಚ್ಚರಿಕೆ ವಹಿಸಬೇಕು. ಬೆಳಗಾವಿಯಲ್ಲಿ ಗರ್ಭಣಿಯೊಬ್ಬರಲ್ಲಿ ಸೋಂಕು ದೃಢವಾಗಿದ್ದು, ಅವರ ಸಂಬಂಧಿಸಿದ 8 ಜನರಿಗೆ ಟೆಸ್ಟ್‌ ಮಾಡಲಾಗಿದ್ದು, ಎಲ್ಲರೂ ರಿಪೋಟ್‌ ನೆಗೆಟಿವ್‌ ಇದೆ ಎಂದು ಡಿಎಚ್‌ಓ ಈಶ್ವರ ಗಡಾದ್‌, ಹೇಳಿದರು.

ಇನ್ನೂ ಬೆಳಗಾವಿ- ಮಹಾರಾಷ್ಟ್ರ ಗಡಿ ಭಾಗದಲ್ಲಿ ಯಾವುದೇ ಚೆಕ್‌ ಪೋಸ್ಟ್‌ ಹಾಗೂ ಪರಿಶೀಲನೆ ನಡೆಸಲು ಸರ್ಕಾರ ಇನ್ನೂ ಮುಂದಾಗಿಲ್ಲ. ಜನ ಸೇರುವ ಕಡೆಗಳಲ್ಲಿ ಮಾಸ್ಕ್‌ ಬಳಸುವಂತೆ ಸೂಚನೆ ನೀಡುವ ಸಾದ್ಯತೆ ಇನ್ನೂ, ಬಿಮ್ಸ್‌ ನಲ್ಲಿ ಸದ್ಯ 10 ಬೆಡ್‌ ಗಳ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ. ಇನ್ನೂ ತಾಲೂಕು ಆಸ್ಪತ್ರೆಗಳಲ್ಲಿಯೂ ಬೆಡ್‌ ಮೀಸಲು ಈಡಲು ಸೂಚನೆ ನೀಡಲಾಗಿದೆ. ಸೋಮವಾರದಿಂದ ಕೋವಿಡ್‌ ಟೆಸ್ಟಿಂಗ್‌ ಆರಂಭವಾಗಲಿದೆ. ಅಗತ್ಯ ಮುನ್ನೆಚರಿಕೆ ಕ್ರಮಗಳನ್ನು ಬಿಮ್ಸ್‌ ಆಸ್ಪತ್ರೆಯ ವೈದ್ಯರು ಸದ್ಯ ಕೈಗೊಂಡಿದ್ದಾರೆ ಎಂದರು.

ಈ ಬಗ್ಗೆ‌ ಮಾತನಾಡಿದ ಬಿಮ್ಸ್‌ ಸರ್ಜನ್‌ ವಿಠ್ಠಲ್‌ ಶಿಂಧೆ, ಸರ್ಕಾರದ ಸೂಚನೆಯಂತೆ ಎಲ್ಲಾ ಕ್ರಮಗಳನ್ನು ವಹಿಸಲಾಗಿದೆ. ಆತಂಕ ಪಡುವ ಅವಶ್ಯಕತೆ ಇಲ್ಲ. ಆದರೇ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಮತ್ತೆ ಕಾರಣಿಸಿಕೊಂಡಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಇನ್ನೂ ರಾಜ್ಯ ಸರ್ಕಾರ ಸಹ ಸೋಮವಾರ ಮತ್ತಷ್ಟು ಕಠಿಣ ನಿಮಯಗಳನ್ನು ಜಾರಿ ಮಾಡೋ ಸಾಧ್ಯೆಗಳು ಇವೆ. ಕೋವಿಡ್‌ ಸೊಂಕು ಹೆಚ್ಚಾಗದಂತೆ ತಡೆಯಲು ಕ್ರಮ ವಹಿಸಲು ಸರ್ಕಾರ ಕ್ರಮ ವಹಿಸಲಿದೆ. ಇನ್ನೂ ಕೋವಿಡ್‌ ಬಗ್ಗೆ ಆತಂಕ ಪಡೆದೆ, ನಿಮಯಗಳ ಪಾಲನೆ ಮಾಡಬೇಕು ಎಂದು ಅನೇಕ ಸಲಹೆಗಳನ್ನು ನೀಡಲಾಗುತ್ತಿದೆ ಎಂದು ಬಿಮ್ಸ್‌ ಸರ್ಜನ್‌ ವಿಠ್ಠಲ್‌ ಶಿಂಧೆ ತಿಳಿಸಿದರು .

RELATED ARTICLES
- Advertisment -spot_img

Most Popular

error: Content is protected !!