ಬೆಂಗಳೂರು:- ಪಕ್ಷಿ ಒಂದು ಗಾಯ ಮಾಡಿಕೊಂಡು ತಮ್ಮ ಬೆಂಗಳೂರಿನ ಮನೆಯ ಆವರಣದಲ್ಲಿ ಜೀವನ್ಮರಣದೊಂದಿಗೆ ಒದ್ದಾಡುತ್ತಿದ್ದನ್ನು ಕಂಡ ಸಭಾಪತಿ ಬಸವರಾಜ ಹೊರಟ್ಟಿ ಅವರು ಪಶು ತಜ್ಞರನ್ನು ಕರೆಸಿ ಔಷದೋಪಚಾರವನ್ನು ನೀಡಿ ಎಂದಿನಂತೆ ಸ್ವಚ್ಛಂದವಾಗಿ ಹಾರುವಂತೆ ಮಾಡಿದ್ದಾರೆ.
ಸತ್ತು ಹೋಗುವಂತ ಸ್ಥಿತಿಯಲ್ಲಿದ್ದ ಪಕ್ಷಿಗೆ ಚಿಕಿತ್ಸೆ ಕೊಡಿಸಿ ಇಂದು ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಪಕ್ಷಿಯನ್ನು ಆಕಾಶಕ್ಕೆ ಸಭಾಪತಿ ಅವರು ಹಾರಿಬಿಟ್ಟು ಸಂತಸ ವ್ಯಕ್ತಪಡಿಸಿದರು. ಜೊತೆಗೆ ಚಿಕಿತ್ಸೆ ನೀಡಿದವರ ಸೇವೆಯನ್ನು ಪ್ರಶಂಶಿಸಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.
ಸಭಾಪತಿ ಹೊರಟ್ಟಿ ಅವರಿಗೆ ಪ್ರಾಣಿ ಪಕ್ಷಿ ಎಂದರೆ ಎಲ್ಲಿಲ್ಲದ ಪ್ರೀತಿ. ತಮ್ಮ ಸರ್ವಜನಿಕ ಬದುಕಿನಲ್ಲಿ ಎಷ್ಟೇ ಬಿಜಿಯಾಗಿದ್ದರು ತಮ್ಮ ಹುಬ್ಬಳ್ಳಿಯ ತೋಟದಲ್ಲಿ ದನ ಕರುಗಳನ್ನು ಪ್ರಾಣಿ ಪಕ್ಷಿಗಳನ್ನು ಪ್ರೀತಿಸಿ ಪೋಷಿಸಿ ಅವುಗಳ ಜೊತೆ ಕೆಲ ಸಮಯ ಕಳೆಯುವುದೆಂದರೆ ಅವರಿಗೆ ಎಲ್ಲಿಲ್ಲದ ಖುಷಿ. ಸ್ವತಹ ಕೃಷಿಕರಾಗಿ ಹೊಲ ಉಳುವುದು ದನ ಕರುಗಳ ಮೈತಿಕ್ಕುವುದು ಹಿಂಡಿ ಹೊಟ್ಟಣ್ಣ ಹಾಕುವುದು ಕಸ ಕಳೆ ತೆಗೆಯುವುದು ಹೀಗೆ ಅವರು ತಮ್ಮ ತೋಟದಲ್ಲಿ ನಿರಂತರವಾಗಿ ಕೆಲಸದಲ್ಲಿ ತೊಡಗಿರುತ್ತಾರೆ ಹೇಳಿ ಮಾಡಿಸುವುದಕ್ಕಿಂತ ಸ್ವತಃ ತಾವೇ ಮಾಡುವಲ್ಲಿ ಸಾಕಷ್ಟು ಖುಷಿಯನ್ನು ಅನುಭವಿಸುತ್ತಾರೆ. ಮಾಲೀಕರಾಗದೆ ಕೃಷಿ ಕರ್ಮಿಕರೊಂದಿಗೆ ಕೃಷಿಕರಾಗಿ ರೈತರಾಗಿ ಕೆಲಸ ಮಾಡುವುದೆಂದರೆ ಅವರಿಗೆ ಖುಷಿಯ ಸಂಗತಿ. ಇವರು ತೋಟಕ್ಕೆ ಬಂದರೆ ದನ ಕರುಗಳಿಗೆ ಪ್ರಾಣಿ ಪಕ್ಷಿಗಳಿಗೆ ನಾಯಿಗಳಿಗೆ ಎಲ್ಲಿಲ್ಲದ ಖುಷಿ. ಇವರು ಬಂದ ತಕ್ಷಣ ಎಲ್ಲವೂ ಜೋರಾಗಿ ಕೂಗಲಿಕ್ಕೆ ಆರಂಭಿಸುತ್ತವೆ .ಸ್ವತಃ ಹೊರಟ್ಟಿ ಅವರೇ ದನ ಕರುಗಳಿಗೆ ಬೆಲ್ಲ ತಿನಿಸಿ ಪ್ರಾಣಿ ಪಕ್ಷಿಗಳಿಗೆ ಬ್ರೆಡ್ಡು ಬನ್ನುಗಳನ್ನು ಹಣ್ಣು ಹಂಪಲ ಇತ್ಯಾದಿ ಆಹಾರ ನೀಡಿ ಖುಷಿ ಪಡುತ್ತಾರೆ. ತಮ್ಮ ಕೃಷಿ ಕರ್ಮಿಕರೊಂದಿಗೆ ದನ ಕರುಗಳ ಪ್ರಾಣಿ ಪಕ್ಷಿಗಳ ಆರೋಗ್ಯ ವಿಚಾರಿಸಿ ನಿಯಮಿತವಾಗಿ ನೀರು ಆಹಾರವನ್ನು ನೀಡುತ್ತಿರಬೇಕು. ಬಾಯಿ ಇಲ್ಲದ ಪ್ರಾಣಿ ಪಕ್ಷಿಗಳಿಗೆ ದನ ಕರುಗಳಿಗೆ ನರ್ಲಕ್ಷ ಮಾಡದೆ ಸಮಯನುಸಾರವಾಗಿ ಆಹಾರ ನೀರನ್ನು ನೀಡುವುದನ್ನು ತಪ್ಪಿಸಬಾರದೆಂದು ಖಡಕ್ಕಾಗಿ ಹೇಳುತ್ತಾರೆ. ಸ್ವತಃ ದನ ಕುರುಗಳ ಪಕ್ಕಡಿ ಮುಟ್ಟಿ ಮೈದಡವಿ ಆರೋಗ್ಯವನ್ನ ತಪಾಸಿಸಿ ಸ್ವರಗಿದೆ ಸ್ವರಗಿಲ್ಲ ಎಂಬ ಸಂಗತಿ ಬಗ್ಗೆ ಕೃಷಿ ಕರ್ಮಿಕರಿಗೆ ಎಚ್ಚರಿಸುತ್ತಾರೆ.
ತಮ್ಮ ಮನೆಯ ಆವರಣದಲ್ಲಿ ಬಿದ್ದು ಒದ್ದಾಡುತ್ತಿದ್ದ ಪಕ್ಷಿ ಜೀವ ಉಳಿಸುವ ಮೂಲಕ ಜೀವ ವೈವಿಧ್ಯತೆಯ ಸಂಕುಲದ ಸಂರಕ್ಷಣೆಯ ಇವರ ಕಳಕಳಿ ಇತರರಿಗೂ ಮಾದರಿ. ಸಾಮಾನ್ಯರ ಸರಳ ಸಭಾಪತಿಯಾಗಿ ಪ್ರಾಣಿ ಪಕ್ಷಿಗಳ ಇವರ ಕಾಳಜಿ ಪ್ರೀತಿ ಮೆಚ್ಚುವಂಥದ್ದು. ಬನ್ನಿ ಇವರ ಆರ್ಶಗಳನ್ನು ನಾವು ನೀವು ಪಾಲಿಸೋಣ .