ಬೆಳಗಾವಿ: ಪಾಕಿಸ್ತಾನಿ ಉಗ್ರರು ಕಾಶ್ಮೀರದ ಪೆಹೆಲ್ಗಾಮ್ ನಲ್ಲಿ ನಡೆಸಿದ ದಾಳಿಯ ಪ್ರತಿಕಾರ ತೀರಿಸಲು ಭಾರತೀಯ ಸೇನೆ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದೆ. ಇದರಿಂದ ಉಭಯ ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಸುರಕ್ಷತೆಯ ದೃಷ್ಠಿಯಿಂದ ವೀರ ಯೋಧರ ಪತ್ನಿಯರು ಮರಳಿ ತವರಿಗೆ ಆಗಮಿಸಿದ್ದಾರೆ.
ಗಡಿಯಲ್ಲಿ ಕಳೆದು ಮೂರ್ನಾಲ್ಕು ದಿನ ಯುದ್ಧ ನಡೆದು ನಿನ್ನೆಯಿಂದ ಕದನ ವಿರಾಮ ಘೋಷಣೆ ಮಾಡಲಾಗಿದೆ. ಗಡಿಯಲ್ಲಿ ಜನಜೀವನ ಸಹ ಸ್ಥಿತಿಯಲ್ಲಿ ಮರುಳುತ್ತಿದೆ. ಆದರೆ ಯುದ್ಧ ಸಂದರ್ಭದಲ್ಲಿ ಜಮ್ಮುವಿನಲ್ಲಿ ಯೋಧರು ಗಡಿ ರಕ್ಷಣೆಗೆ ಹೊದರೆ, ಅವರ ಪತ್ನಿಯರು ಏಕಾಂಗಿಯಾಗಿ ಮನೆಯಲ್ಲಿ ಇರಬೇಕಾಗಿತ್ತು. ಹಾಗಾಗಿ ಯೋಧರ ಕುಟುಂಬಸ್ಥರ ರಕ್ಷಣೆಗಾಗಿ ಅವರನ್ನು ಅವರವರ ಊರುಗಳಿಗೆ ಕಳುಹಿಸಲಾಗಿದ್ದು, ಜಮ್ಮುವಿನಿಂದ ಧಾರವಾಡ ಮೂಲದ ಇಬ್ಬರು ಯೋಧರ ಪತ್ನಿಯರು ಬೆಳಗಾವಿಯ ಬಸ್ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಯೋಧರು ಯಾವುದೇ ಕಾರಣಕ್ಕೂ ಗಡಿಯಲ್ಲಿನ ಮಾಹಿತಿ ಹಂಚಿಕೊಳ್ಳಲ್ಲ. ಫೋನ್ ನಲ್ಲಿ ಯಾವುದೇ ಮಾಹಿತಿ ನಮ್ಮ ಗಂಡಂದಿರುವ ಹಂಚಿಕೊಂಡಿಲ್ಲ. ಅದನ್ನು ನಾವು ಹಂಚಿಕೊಳ್ಳಲ್ಲ, ಸೈಬರ್ ಅಟ್ಯಾಕ್ ನಡೆಯುವ ಸಾಧ್ಯತೆ ಇದೆ ಎಂದು ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿ ದೇಶ ಕಾಯುವ ಯೋಧರ ಪತ್ನಿಯರಾಗಿ ದೇಶದ ಕುರಿತು ಬದ್ದತೆ ಪ್ರದರ್ಶಿಸಿದರು. ನಾವು ಜಮ್ಮುವಿಗೆ ಹೋಗಿ ಒಂದು ತಿಂಗಳಾಗಿದೆ ಸದ್ಯ ಅಲ್ಲಿ ರೆಡ್ ಅಲರ್ಟ್ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಿಂದ ಯಾರು ಹೊರಗಡೆ ಹೋಗದ ಪರಿಸ್ಥಿತಿ ಇದೆ. ಸುರಕ್ಷತೆ ದೃಷ್ಟಿಯಿಂದ ವಾಪಸ್ ಬಂದಿದ್ದೇವೆ ಎಂದು ಸೀಮಾ ನಿಕ್ಕಂಎಂದಿದ್ದಾರೆ.
ಒಟ್ಟಿನಲ್ಲಿ ಜಮ್ಮುವಿನಿಂದ ಬೆಳಗಾವಿ ಮೂಲಕ ಧಾರವಾಡಕ್ಕೆ ತೆರಳಿದ ಯೋಧರ ಪತ್ನಿಯರು ತಮ್ಮ ಪತಿ ಸುರಕ್ಷಿತರಾಗಿ ಮರಳಿ ಬರಲಿ ಎಂದು ಕಣ್ಣಿರು ಹಾಕಿದ್ದಾರೆ. ಯುದ್ಧ ಸಂದರ್ಭದಲ್ಲಿ ತಮ್ಮ ಪ್ರಾಣ, ಕುಟುಂಬವನ್ನೇ ಲೆಕ್ಕಿಸದೇ ಹೋರಾಡುತ್ತಿರುವ ಯೋಧರು ಸುರಿಕ್ಷಿತವಾಗಿ ಬರಲಿ ಎಂಬುಬುವುದು ನಮ್ಮ ಆಶಯವಾಗಿದೆ ಅಶ್ವಿನಿ ಹಳ್ಳಿಗೇರಿ ಹೇಳಿದರು.