ಖಾನಾಪೂರ: ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಸುರಪುರ ಕೇರವಾಡ ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ನಿಸ್ವಾರ್ಥ ಸೇವೆ ಮಾಡುತ್ತಾ ಬಂದು ಹಾಗೂ ತಾಲೂಕಿನಾದ್ಯಂತ ನೂರಾರು ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿ ಕಲಿಯುಗದ ಕರ್ಣನೆಂದು ಬಿರುದು ಪಡೆದ ನಾಸೀರ್ ಭಾಗವಾನ ಅವರಿಂದ ಇಂದು ಶ್ರೀ ಲಗಮವ್ವಾದೇವಿ ಸೇವಾ ಅಭಿವೃದ್ಧಿ ಸಂಘವನ್ನ ಸುರಪುರ ಕೇರವಾಡದಲ್ಲಿ ಉದ್ಘಾಟನೆ ಸಮಾರಂಭ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಾಸಿರ್ ಬಾಗವಾನ ಅವರು ನನಗೆ ಒಂದು ಅವಕಾಶ ಕೊಟ್ಟಿದ್ದರೆ ನಾನು ನನ್ನ ಕ್ಷೆತ್ರವನ್ನು ನೀರಾವರಿ ಮಾಡತಿದ್ದೆ. ಸ್ವಂತ ಶುಗರ್ ಫ್ಯಾಕ್ಟರಿ ಕುಡಾ ಅಗತ್ತಿತು ಈಗಾಲಾದರು ಫ್ಯಾಕ್ಟರಿ ಆಗುವವರೆಗೂ ಬಿಡುವುದಿಲ್ಲ ಶುಗರ್ ಫ್ಯಾಕ್ಟರಿ ಮಾಡಿಯೆ ಮಾಡುತ್ತೇನೆ ಅದು ಅಲ್ಲದೆ ಗಾರ್ಮೆಂಟ್ ಫ್ಯಾಕ್ಟರಿ ಕೂಡ ಹಾಕಿ ಯುವಕರಿಗೆ ನಿರುದ್ಯೋಗಿಗಳಿಗೆ ಕೆಲಸವನ್ನು ಕೊಡುತ್ತೇನೆ ಅಂತ ಹೇಳಿದರು
ಅದೇ ಗ್ರಾಮದ ಹಿರಿಯ ಮುಖಂಡರು ಮಾತನಾಡುವಾಗ ನಾಸಿರ್ ಬಾಗವಾನ ನಮ್ಮ ಗ್ರಾಮಕ್ಕೆ 35ಲಕ್ಷ ಕಿಂತ ಹೆಚ್ಚು ಹಣವನ್ನು ಕೊಟ್ಟು ನಮ್ಮೂರಿನ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿದ್ದಾರೆ ರಾಜಕೀಯದಿಂದ ಸೋಲು ಅನುಭವಿಸಿದರು ಕೂಡ ಬೇಸರ ಪಡದೆ ತಮ್ಮ ನಿಸ್ವಾರ್ಥ ಸೇವೆ ಮಾಡುತ್ತಾ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯವನ್ನು ಮುಂದುವರೆಸಿ ತಾಲೂಕಿನಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ
ಅದರಂತೆ ಇಂದು ಗ್ರಾಮದಲ್ಲಿ ತಾವು ಜೀರ್ಣೋದ್ಧಾರ ಮಾಡಿದ ದೇವಸ್ಥಾನವಾದ ಶ್ರೀ ಲಗಮವ್ವಾದೇವಿ ಸೇವಾ ಅಭಿವೃದ್ಧಿ ಸಂಘವನ್ನು ರಿಬ್ಬನ ಕತ್ತರಿಸುವ ಮುಖಾಂತರ ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಗ್ರಾಮದ ಹಿರಿಯರು ,ಯುವಕರು ಮತ್ತು ಶ್ರೀ ಲಗಮವ್ವಾದೇವಿ ಸೇವಾ ಅಭಿವೃದ್ಧಿ ಸಂಘ ಸುರಪುರ ಕೇರವಾಡ ಇದರ ಪದಾಧಿಕಾರಿಗಳು ಭಕ್ತರು ಉಪಸ್ಥಿತರಿದ್ದರು