ಬೆಳಗಾವಿ : ರಾಜ್ಯದಲ್ಲಿ ಜಾತಿ ಗಣತಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಆಗಿದೆ. ಸಂಪುಟದಲ್ಲಿ ಯಾರು ವಿರೋಧ ಮಾಡಿಲ್ಲ ಅದರಿಂದ ಚರ್ಚೆಯ ಅಪೂರ್ಣವಾಗಿದೆ.ನಾನು ಸಂಪುಟದಲ್ಲಿ ಪೂರ್ಣ ಪ್ರಮಾಣ ಚರ್ಚೆ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಂಪುಟದಲ್ಲಿ ಅನೇಕರು ವಿರೋಧ ವಿಚಾರ ನಾನೇ ಕ್ಯಾಬಿನೆಟ್ ಸಭೆಯ ಚರ್ಚೆಯಲ್ಲಿ ಎಲ್ಲರೂ ಭಾಗಿಯಾಗಿದ್ದೇವೆ.ಅವೈಜ್ಞಾನಿಕ ಎನ್ನುವ ಆರೋಪಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಶಿವಾನಂದ ಪಾಟೀಲ್ ಹಾಗೂ ಎಂ ಬಿಪಿ ನಡುವೆ ವಾದ ವಿವಾದ ನಡೆದಿಲ್ಲ ಎಂದರು.
ಉಪಹಾಪೋಗಳಿಗೆ ಎಡೆಮಾಡಿಕೊಡುದು ಬೇಡ.ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಯಾವುದೇ ಸಮಾಜಕ್ಕೆ ಹಾನಿಯಾಗಬಾರದು ಎಂಬ ರೀತಿಯಲ್ಲಿ ತೀರ್ಮಾನ ಮಾಡುತ್ತೇವೆ.ಎಲ್ಲರಿಗೂ ನ್ಯಾಯ ಕೊಡಿಸಬೇಕು ಕೊಡಿಸುತ್ತೇವೆ ಎಂದರು .
ಮುಂದುವರಿದ ಹಾಗೂ ಹಿಂದುಳಿದ ಸಮುದಾಯಕ್ಕೆ ತೊಂದರೆಯಾಗಬಾರದು ಎಂಬ ರೀತಿಯಲ್ಲಿ ತೀರ್ಮಾನ.ಆಯೋಗದ ಅಧ್ಯಕ್ಷ, ಸದಸ್ಯ ನೇಮಕ ಮಾಡಿದ್ದ ಕುಮಾರಸ್ವಾಮಿ, ಬೊಮ್ಮಾಯಿ.ಸದಸ್ಯರನ್ನು ನೇಮಕ ಮಾಡಿದ್ದು ಬಿಜೆಪಿ ಸರ್ಕಾರ, ಬಿಜೆಪಿ ಅವಧಿಯಲ್ಲಿ ಜಾತಿ ಗಣತಿ ಆಗಿದೆ. ಜಾತಿ ಗಣತಿಯನ್ನು ಅಧ್ಯಯನ ಮಾಡಿದ್ದು ಬಿಜೆಪಿ. ಬೊಮ್ಮಾಯಿ, ಯಡಿಯೂರಪ್ಪ ವರದಿ ತಿರಸ್ಕಾರ ಮಾಡಬಹುದು ಇತ್ತು. ಆದರೆ ಬರೀ ಅವೈಜ್ಞಾನಿಕ ಅವೈಜ್ಞಾನಿಕ ಎನ್ನುತ್ತಾರೆ.ಲೋಪದೋಷ ಇದ್ರೆ ಒಪ್ಪಿಕೊಳ್ಳೊಣ. ಎಲ್ಲಿ ಲೋಪವಾಗಿದೆ ಎಂದು ಸ್ಪಷ್ಟವಾಗಿಲ್ಲ ಎಂದರು.