ಬೆಳಗಾವಿ: ಜಾತಿ ಗಣತಿ ವರದಿ ಅಂಕಿ ಅಂಶ ವರದಿ ಬಿಡುಗಡೆ ಆಗಿದ್ದು ಆ ಒಂದು ಕಾಪಿಯನ್ನು ನನಗೆ ಕಳುಹಿಸಿದ್ದಾರೆ ಅದನು ನಾವೇಲ್ಲ ನೋಡಿ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳುತ್ತೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜಾತಿ ಗಣತಿಯಲ್ಲಿ ಏನಾದರೂ ಲೋಪದೋಷ ಇದರೆ ಅದನ್ನು ಸರಿ ಪಡೆಸುತ್ತೇವೆ ನಮ್ಮ ಪಕ್ಷದ ಮೂಲ ಸಿದ್ಧಾಂತ ಎಲ್ಲರಿಗೂ ಸಮಪಾಲು, ಸಮಬಾಳು ನಮ್ಮದು ನಾವು ಬಸವಣ್ಣನ ತತ್ವನ ಮೇಲೆ ಕೆಲಸಮಾಡುತ್ತೇವೆ ಎಂದರು.
ಆರ್ ಅಶೋಕ ಆರೋಪಕ್ಕೆ ನಾನು ಉತ್ತರ ಕೊಡಲ್ಲ. ಅವರಿಗೆ ವಕ್ತಾರ ನಾನು ಆಗೋಕೆ ಇಷ್ಟ ಇಲ್ಲ. ನಮ್ಮ ಸರ್ಕಾರ ವಕ್ತಾರ ನಾನು ಆಗುತ್ತೇನೆ. ಜಾತಿ ಗಣತಿಯನ್ನು ನಾನು ಓದೇ ಇಲ್ಲ. ಚುನಾವಣೆ ಪ್ರಣಾಳಿಕೆಯಲ್ಲಿ ಸಾಮಾಜಿಕ, ಆರ್ಥಿಕ ಅಧ್ಯಯನ ವರದಿ ಜಾರಿ ಎಂದು ಹೇಳಿದ್ದೇನೆ.
ಜಾತಿ ಗಣತಿ ಮಾಡೋ ಅಧಿಕಾರ ಇರೋದು ಕೇಂದ್ರಕ್ಕೆ ಮಾತ್ರ. ಯಾರಿಗೆ ಅನ್ಯಾಯ ಆಗಿದೆ ಅವರಿಗೆ ನ್ಯಾಯ ಕೊಡಿಸುತ್ತೇವೆ. ಏನಾದರು ಆತಂಕ ಇದಲ್ಲಿ ಅದನ್ನು ಸರಿ ಪಡಿಸುತ್ತೇವೆ.
ವಿರೋಧ ಪಕ್ಷದ ನಾಯಕರು ಏನ್ ಹೇಳಬಹುದು ಅದನ್ನು ನಾರಾಯಣಸ್ವಾಮಿ ಹೇಳಿದ್ದಾರೆ ಎಂದು ಹೇಳಿದರು. ಬಿಜೆಪಿ ಜನಾಕ್ರೋಶ ಯಾತ್ರೆ ಹೆಸರು ಪರಿವರ್ತನೆ ಮಾಡಬೇಕು. ತಾವು ಯಾವ ಯಾವ ಬೆಲೆ ಏರಿಕೆ ಮಾಡಿದೀರಿ ಒಮ್ಮೆ ನೀವು ನೋಡಿ ಸಿಮೆಂಟ್, ಪೆಟ್ರೋಲ್ ಸೇರಿ ಎಲ್ಲಾ ಬೆಲೆ ಏರಿಕೆ ಮಾಡಿದೆ. ಚಿನ್ನ ಈಗ ಕೊಂಡುಕೊಳ್ಳಲು ಆಗದ ಪರಿಸ್ಥಿತಿ ಬಂದಿದೆ. ಎಲ್ಲಾ ಬೆಲೆ ಏರಿಕೆಗೆ ಬಿಜೆಪಿ ಕಾರಣ. ಏಪ್ರಿಲ್ 17 ರಂದು ಜನಾಕ್ರೋಶ ಯಾತ್ರೆ ಮಾಡುತ್ತೇವೆ ಎಂದರು.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ. ಯಾವುದಕ್ಕೂ ಆಧಾರ ಇಲ್ಲ, ಸತ್ಯನು ಅಲ್ಲ ಎಂದು ಹೇಳಿದರು .