ಬೆಳಗಾವಿ : ಜಾತಿ ಗಣತಿಯ ಬಗ್ಗೆ ಸಚಿವ ಸಂಪುಟದಲ್ಲಿ ಆ ಒಂದು ವರದಿಗೆ ಒಪ್ಪಿಗೆ ಕೊಡುವಂತ ಕೆಲಸ ಮಾಡಿದ್ದಾರೆ. ಏ. 17 ರಂದು ಜಾತಿ ಗಣತಿ ಬಗ್ಗೆ ಸಂಪೂರ್ಣವಾಗಿ ಚರ್ಚೆ ಮಾಡುತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿರೋದು ನೋಡಿದರೆ ಸರ್ಕಾರದಲ್ಲಿ ಗೊಂದಲ್ಲ ಇರುವುದು ಸ್ಪಷ್ಟವಾಗಿ ಅರ್ಥ ವಾಗುತ್ತದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು .
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಜೊತೆ ಮಾತನಾಡಿದ ಅವರು ಈ ಹಿಂದೆ ಮುಖ್ಯಂತ್ರಿ ಇದಾಗಲ್ಲೆ ಆ ವರದಿ ರೆಡ್ಡಿ ಆಗಿದ್ದರು ಕೂಡಾ ಅದನ ಅವರು ಸ್ವೀಕರಿಸಲಿಲ್ಲ . ಆದರೆ ಎರಡನೇ ಬಾರಿ ಮುಖ್ಯಂತ್ರಿ ಆದಾಗ ವರದಿ ಮಂಡನೆ ಆದರು ಸಹ ಇಲ್ಲಿವರೆಗೂ ಬಹಿರಂಗ ಪಡಿಸಲಿಲ್ಲ. ಆದರೆ ಬಹಳಷ್ಟು ಗೊಂದಲ ಇದೆ ಆದರೆ ಬೇರೆ ಬೇರೆ ಒತ್ತಡದಲ್ಲಿ ಈ ವರದಿ ತೆಗೆದುಕೊಳ್ಳುವಂತದ್ದು, ಸಚಿವ ಸಂಪುಟದಲ್ಲಿ ಮಂಡನೆ ಮಾಡುವಂತದು, ಅದರ ಬಗ್ಗೆ ಅಧ್ಯಯನ ಮಾಡಿ ಚರ್ಚೆ ಮಾಡುವಂತದು.ಮುಖ್ಯಮಂತ್ರಿಗಳೇ ಗೊಂದಲದಲ್ಲಿ ಇದ್ದು ಬೇರೆ ಬೇರೆ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಇದರಲ್ಲಿ ತಿಳಿಯುತ್ತೆ ಎಂದರು .
ಜಾತಿಗಣತಿ ಒಂದು ವರದಿ ಗೊಂದಲದಲ್ಲಿ ಇರುವಂತ ವರದಿ. ಇದರಲ್ಲಿ ಸ್ಪಷ್ಟತೆ ಇಲ್ಲ. ಇವತ್ತು ಯಾವ ಆಧಾರದ ಮೇಲೆ ವರದಿ ಮಾಡಿದರೋ ಅದು ಎಲ್ಲಿವರೆಗೆ ಗೊಂದಲ ಇದೆ ಎಂದರೆ ಪ್ರತಿ ಒಂದು ಮನೆಗೆ ಹೋಗಿ ಸರ್ವೆ ಮಾಡಿ ಮಾಹಿತಿ ತೆಗೆದುಕೊಳ್ಳಬೇಕು. ಇದರ ಬಗ್ಗೆ ಎಷ್ಟೊ ಜನರಿಗೆ ಮಾಹಿತಿ ಇಲ್ಲ ನಮ್ಮ ಮನೆಗೆ ಯಾರು ಬಂದೆ ಇಲ್ಲ ಅನುತಾರೆ ಅವರು ಯಾವ ಆಧಾರದ ಮೇಲೆ ವರದಿ ಮಾಡಿದಾರೆ ಇಲ್ಲವೋ ಎಂಬುದು ಇವತ್ತಿಗೂ ಪ್ರಶ್ನೆ ಆಗಿ ಉಳಿದಿದೆ.
ನೂರಾರು ಕೋಟಿ ಖರ್ಚು ಮಾಡಿದ್ದರೂ .ಧರ್ಮಗಳ ಅಂಕಿ ಅಂಶಗಳ ಗೊಂದಲ ಇದೆ. ಅದರಲ್ಲಿ ಒಂದು ವೀರ ಶೈವ ಲಿಂಗಾಯತ, ಒಕ್ಕಲಿಗ ಸಮುದಾಯ ಅಥವಾ ಬೇರೆ ಬೇರೆ ಹಿಂದೂ ವರ್ಗಗಳ ಅಂಕಿ ಸಂಖ್ಯೆ ಇರಬಹುದು ಅಥವಾ ಮುಸಲ್ಮಾನರು ಸಂಖ್ಯೆ 76 ಲಕ್ಷ ತೋರಿಸುತಿದ್ದಾರೆ ಹೀಗೆ
ಗೊಂದಲದಲ್ಲಿ ಇರುವಂತ ವರದಿಯನ್ನು ನೀವು ಸ್ವೀಕಾರ ಮಾಡಿ ಒಪ್ಪಿಗೆ ತೆಗೆದುಕೊಳ್ಳುವಂತಹ ಪ್ರಯತ್ನ ಯಾಕೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರಿಗೆ ಪ್ರಶ್ನಸಿದರು.
ಜಾತಿ ಗಣತಿ ವರದಿ ವೈಜ್ಞಾನಿಕವಾಗಿಲ್ಲ. ಸರ್ಕಾರದ ಮಟ್ಟದಲ್ಲಿಯೇ ಈ ಬಗ್ಗೆ ಗೊಂದಲ ಇದೆ. ಡಿಸಿಎಂ ಡಿ ಕೆ ಶಿವಕುಮಾರ, ಹಾಗೂ ಮಂತ್ರಿಗಳ ನಿಲುವು ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ, ಈ ವರದಿಯನ್ನು ತಿರಸ್ಕರಿಸಬೇಕು ಎಂಬುದು ನಮ್ಮ ಬೇಡಿಕೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.