Wednesday, June 18, 2025
Google search engine
Homeಸುದ್ದಿದೊಡವಾಡ ಗ್ರಾಮದಲ್ಲಿ 20ಕ್ಕೂ ಹೆಚ್ಚು ಬಣವೆಗಳು ಬೆಂಕಿಗಾಹುತಿ
spot_img

ದೊಡವಾಡ ಗ್ರಾಮದಲ್ಲಿ 20ಕ್ಕೂ ಹೆಚ್ಚು ಬಣವೆಗಳು ಬೆಂಕಿಗಾಹುತಿ

ದೊಡವಾಡ: ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ದೊಡ್ಡ ಕೆರೆಯ ಮೈದಾನದಲ್ಲಿ ರೈತರು ಒಟ್ಟಿದ್ದ ಸುಮಾರು 20ಕ್ಕೂ ಹೆಚ್ಚು ಹೊಟ್ಟಿನ ಮತ್ತು ಕಣಕಿ ಬಣವೆಗಳಿಗೆ  ಗುರುವಾರ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿವೆ

ಗ್ರಾಮ ಬೇರೆ ಬೇರೆ ರೈತರಿಗೆ ಸೇರಿದ್ದ ಬಣವೆಗಳಿವಾಗಿದ್ದು ತಮ್ಮ ಮನೆಯ ದನಕರುಗಳಿಗೆ ಆಹಾರದ ದಾಸ್ತಾನಾಗಿದ್ದ ಹೊಟ್ಟು ಕಣಕಿ ಬಣವೆಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ.  ಇದರಿಂದ ಮನೆಯಲ್ಲಿ ಸಾಕಿರುವ ದನಕರುಗಳಿಗೆ ಎಲ್ಲಿಂದ ಹೊಟ್ಟು ಕಣಕಿ ತಂದು ಹಾಕುವುದು ಎಂದು ಬಣವೆ ಒಟ್ಟಿದ್ದ ರೈತರು ಕಂಗಾಲಾಗಿದ್ದಾರೆ ಸರಕಾರ ಸೂಕ್ತ ಪರಿಹಾರ ನೀಡಿ ರೈತರ ನೆರವಿಗೆ ಬರಬೇಕು ಎಂದು ಅವರು ವಿನಂತಿಸಿದ್ದಾರೆ

ಬೈಲಹೊಂಗಲ ಹಾಗೂ ಚನ್ನಮ್ಮನ ಕಿತ್ತೂರು ಅಗ್ನಿಶಾಮಕ ದಳ ಸಿಬ್ಬಂದಿ  ರಾಹುಲ್ ಸಿ ಎಚ್ ,ಬಾಲಕೃಷ್ಣ ಬೋವಿ,ಎಸ್ ವೈ ತೇಲಗಾರ ,ರಾಹುಲ್ ಗಸ್ತಿ  ಗ್ರಾಮಸ್ಥರ ಸಹಾಯದೊಂದಿಗೆ  ಬೆಂಕಿ ನಂದಿಸಲು ಹರ ಸಾಹಸ ಪಡುತ್ತಿದ್ದಾರೆ . ದೊಡವಾಡ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES
- Advertisment -spot_img

Most Popular

error: Content is protected !!