Thursday, June 19, 2025
Google search engine
Homeಜಿಲ್ಲಾಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಾರ್ಡ ನಂ: 12 ರಲ್ಲಿ ಬರುವ ಮನೆಗಳಿಗೆ ಹಕ್ಕು ಪತ್ರ...
spot_img

ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಾರ್ಡ ನಂ: 12 ರಲ್ಲಿ ಬರುವ ಮನೆಗಳಿಗೆ ಹಕ್ಕು ಪತ್ರ ನೀಡುವಂತೆ ಒತ್ತಾಯ

ಬೆಳಗಾವಿ: ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಾರ್ಡ ನಂ: 12 ರಲ್ಲಿ ಬರುವ  ಮನೆಗಳಿಗೆ ಹಕ್ಕು ಪತ್ರ ಸರ್ಕಾರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ವತಿಯಿಂದ ಇಂದು ಬೆಳಗಾವಿ ನಗರದಲ್ಲಿ ಪ್ರತಿಭಟಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು  ಸದರಿ 30/35 ವರ್ಷದಿಂದ ಇಲ್ಲಿಯ ಸಾರ್ವಜನಿಕರು ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಜನಪರ ಸಂಘಟನೆಗಳು, ಎಸ್.ಸಿ/ಎಸ್.ಟಿ, ಹಿಂದುಳಿದ ವರ್ಗದ ಜನಾಂಗ ವಾಸವಾಗಿದ್ದು, ತಕ್ಷಣ ಸರ್ಕಾರ ತಾವು ಹಕ್ಕು ಪತ್ರ ಕೊಟ್ಟು ನಮ್ಮನ್ನು ಕಾಪಾಡಬೇಕೆಂದು ಆಗ್ರಹಿಸಿದರು.

ಜನರಿಗೆ  ನೀರಿಗಾಗಿ ನಳಗಳನ್ನು ಮತ್ತು ರಸ್ತೆ, ಗಟಾರು, ಕರೆಂಟ್,ವ್ಯವಸ್ಥೆ ಪಂಚಾಯತಿ ವತಿಯಿಂದ ಅನುಕೂಲ ಮಾಡಿಕೊಟ್ಟಿರುತ್ತಾರೆ.ಮತ್ತು ನಮ್ಮ ಮಕ್ಕಳ ಶಿಕ್ಷಣಕ್ಕಾಗಿ, ಬದುಕಿನ ರಕ್ಷಣೆಗಾಗಿ, ನಮ್ಮ ಆರ್ಥಿಕತೆಗಾಗಿ, ಮನೆ ಬಿಟ್ಟರೆ ಬೇರೆ ಆಸ್ತಿ ಇರುವುದಿಲ್ಲ ಅದಕ್ಕಾಗಿ ನಮ್ಮಗೆ ಮನೆ ಹಕ್ಕು ಪತ್ರ  ಮಾಡಬೇಕೆಂದು ಮನವಿ ಮಾಡಿದರು.

 ರಾಜ್ಯಾಧ್ಯಕ್ಷ ಚುನಪ್ಪಾ ಪೂಜೇರಿ,ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ ನಾಯಕ, ಜಿಲ್ಲಾಧ್ಯಕ್ಷೆ  ಆಶಾ ಜೂಟದಾರ,ಜಿಲ್ಲಾ ಗೌರವಾಧ್ಯಕ್ಷ ಅಬ್ದುಷಾ ಪಿರಜಾದ ,ತಾಲೂಕಾಧ್ಯಕ್ಷರ ರಾಜು ಮಾದರ ಸೇರಿದಂತೆ ಇತರರು ಇದರು.

 

RELATED ARTICLES
- Advertisment -spot_img

Most Popular

error: Content is protected !!