Wednesday, June 18, 2025
Google search engine
Homeಜಿಲ್ಲಾಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗುವ ಪ್ರಶ್ನೆ ಇಲ್ಲ : ಸಚಿವ ಕೆ.ಎಚ್ ಮುನಿಯಪ್ಪ
spot_img

ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗುವ ಪ್ರಶ್ನೆ ಇಲ್ಲ : ಸಚಿವ ಕೆ.ಎಚ್ ಮುನಿಯಪ್ಪ

ಬೆಳಗಾವಿ : ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗುವುದಿಲ್ಲ.ಸಿಎಂ‌ ಬದಲಾವಣೆ ಕೇವಲ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. ಇದಕ್ಕೆ ಹೈಕಮಾಂಡ್ ಇದೇ ವಿನಾಕಾರಣ ಸಿಎಂ ಬದಲಾವಣೆ ಪ್ರಶ್ನೆ ಇಲ್ಲ ಎಂದು ಆಹಾರ ಮತ್ತು ನಾಗರಿಕ ಇಲಾಖೆ ಸಚಿವರಾದ ಕೆ.ಎಚ್ ಮುನಿಯಪ್ಪ ಹೇಳಿದರು.

ಇಂದು ಬೆಳಗಾವಿ ಸರ್ಕಿಟ್ ಹೌಸ್ ನಲ್ಲಿ‌ ಮಾಧ್ಯಮದವರು ಜೊತೆ ಮಾತನಾಡಿ ಅವರು ಡಿಸಿಎಂ ಬೆಂಬಲಗರು ಡಿಸಿಎಂ ಡಿಕೆಶಿ ಸಿಎಂ ಘೋಷಣೆಯ ಕುರಿತು ನನ್ನ ಗಮನಕ್ಕೆ ಬಂದಿಲ್ಲ ಸಿಎಂ ಸಿದ್ದರಾಮಯ್ಯ ಬಜೆಟ್ ಸಿದ್ಧತೆ ಮಾಡುತ್ತಿದ್ದಾರೆ. ರಾಜ್ಯಕ್ಕೆ ಒಳ್ಳೆಯ ಬಜೆಟ್ ಸಹ ಮಾಡ್ತಾರೆ‌ ಎಂದರು.

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ, ಡಿಸಿಎಂ ಆಗಿ ಕೆಲಸ ಮಾಡ್ತಿದ್ದಾರೆ ಆ ವಿಷಯ ಈಗ ನಮ್ಮ‌ ಮುಂದೆ ಇಲ್ಲ ಅದೆಲ್ಲಾ ಹೈಕಮಾಂಡ್ ಬಿಟ್ಟ ವಿಷಯ.

ಗ್ರಾಹಕರ‌ ನ್ಯಾಯಾಲಯವನ್ನು ಪ್ರಾರಂಭ ಮಾಡಲಾಗುತ್ತಿದೆ ಇದರಿಂದಾಗಿ ಏಳು ಜಿಲ್ಲೆಗಳಿಗೆ ಪರಿಹಾರ ಸಿಗುತ್ತದೆ. ಗ್ರಾಹಕರಿಗೆ ತೊಂದರೆಗಳು ಏನಾದರೂ ಇದ್ದರೆ ನ್ಯಾಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸಿದರೆ ಅರ್ಜಿಯನ್ನು ಪರಿಶೀಲನೆ ಮಾಡಿ ಅದಕ್ಕೆ ಸರಿಯಾದ ರೀತಿಯಲ್ಲಿ ನ್ಯಾಯ ಒದಗಿಸುವ ಕೆಲಸ‌ ಮಾಡುತ್ತವೆ ಎಂದರು.

ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನ ತೂಕ ಮೋಸ ಮಾಡುವ ವಿಷಯ ಗಂಭೀರವಾಗಿ ಪರಿಗಣಿಸಲಾಗಿದೆ. ತೂಕದಲ್ಲಿ ಮೋಸ ಮಾಡಿದ್ರೆ ಕಠಿಣ ಕ್ರಮ‌ ಜರುಗಿಸುತ್ತೇವೆ ರೈತರಿಗೆ ಯಾವುದೇ ರೀತಿಯ ಮೋಸ‌ವಾಗುವುದಕ್ಕೆ‌ ಬಿಡುವುದಿಲ್ಲ ಎಂದು ತಿಳಿಸಿದರು.

ಕೊನೆಯ ಬಾರಿಯೂ ಸಕ್ಕರೆ ಕಾರ್ಖಾನೆ ತೂಕದಲ್ಲಿ‌ ಮೋಸ ಮಾಡುವ ಕುರಿತು ದೂರು ಬಂದಿತ್ತು. ಕಬ್ಬು ಕಟಾವು ಮಾಡುವ ರೈತ ಕಾರ್ಮಿಕ, ಕಬ್ಬು ಬೆಳೆದ ರೈತನಿಗೆ ಮೋಸ ಮಾಡುವುದನ್ನು ತಡೆಯಲು ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ವೇಯಿಂಗ್ ಮಷಿನ್
ಅಳವಡಿಸಲು ಸಿಎಂ ವಿಶೇಷ ಅನುದಾನ ನೀಡಿದ್ದಾರೆ. ಈಗಾಗಲೇ ಎಲ್ಲ ಕಾರ್ಖಾನೆಗಳಲ್ಲಿ ವೇಯಿಂಗ್ ಮಷಿನ್ ಅಳವಡಿಸಲಾಗಿದೆ ಎಂದರು.

RELATED ARTICLES
- Advertisment -spot_img

Most Popular

error: Content is protected !!