Wednesday, October 15, 2025
Google search engine
Homeಕ್ರೈಂATMಗೆ ಹಣ ಹಾಕುವ ಸಿಬ್ಬಂದಿ ಮೇಲೆ ಫೈರಿಂಗ್‌ : ಸಿನಿಮೀಯ ರೀತಿಯ ದರೋಡೆಯಲ್ಲಿ ಓರ್ವ ಸಾವು!
spot_img

ATMಗೆ ಹಣ ಹಾಕುವ ಸಿಬ್ಬಂದಿ ಮೇಲೆ ಫೈರಿಂಗ್‌ : ಸಿನಿಮೀಯ ರೀತಿಯ ದರೋಡೆಯಲ್ಲಿ ಓರ್ವ ಸಾವು!

ಬೀದರ್ : ಜಿಲ್ಲೆಯಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿದ್ದು. ಎಸ್ಬಿಐ ಬ್ಯಾಂಕ್ನಿಂದ ಎಟಿಎಂಗೆ ಹಣ ಸಾಗಿಸುತ್ತಿದ್ದ CMS ವಾಹನ ಸಿಬ್ಬಂದಿಗಳ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು, ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ.

ಬೀದರ್ನ ಎಸ್‌ಬಿಐ ಮುಖ್ಯ ಕಚೇರಿ‌ ಮುಂದೆಯೆ ಗುಂಡಿನ ದಾಳಿ ನಡೆದಿದ್ದು. ಡಿಸಿ ಕಛೇರಿಯ ಮುಂಭಾಗದಲ್ಲಿಯೇ ಈ ದುಷ್ಕೃತ್ಯ ನಡೆದಿದೆ. ಬ್ಯಾಂಕ್ ಮತ್ತು ಎಟಿಎಂಗೆ ಹಣ ಸಾಗಾಟ ಮಾಡುವ ಸಿಎಂಸಿ ವಾಹನ ಸಿಬ್ಬಂದಿಗಳು ಹಣವನ್ನು ಕೊಂಡೊಯ್ಯುವಾಗ ಸ್ಥಳಕ್ಕೆ ಬಂದ ದರೋಡೆಕೋರರು ವಾಹನದ ಸಿಬ್ಬಂದಿಗಳ ಮೇಲೆ ಕಾರದ ಪುಡಿಯನ್ನು ಎರಚಿ, ಗುಂಡಿನ ದಾಳಿ ನಡೆಸಿದ್ದಾರೆ. ಸುಮಾರು 93 ಲಕ್ಷ ಹಣವನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಮಾಹಿತಿ ದೊರೆತಿದೆ.

ಸುಮಾರು 5 ಸುತ್ತಿನ ಗುಂಡಿನ ದಾಳಿ ನಡೆಸಿರುವ ದುಷ್ಕರ್ಮಿಗಳು, ಹಣವನ್ನು ತಮ್ಮ ಬೈಕ್ ಮೇಲೆ ಕೊಂಡೊಯ್ದಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಸಿಬ್ಬಂದಿಗಳು ಸಾವನ್ನಪ್ಪಿದ್ದು, ಮೃತರನ್ನು ಹಣ ವ್ಯವಸ್ಥಾಪಕ ವೆಂಕಟೇಶ ಮತ್ತು ಶಿವಕುಮಾರ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES
- Advertisment -spot_img

Most Popular

error: Content is protected !!