Thursday, June 19, 2025
Google search engine
Homeಸಂಪಾದಕೀಯಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳ ಅಂತ್ಯಕ್ಕೆ ಮುಹೂರ್ತ ಇಟ್ಟ ಅಧಿಕಾರಿ..
spot_img

ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳ ಅಂತ್ಯಕ್ಕೆ ಮುಹೂರ್ತ ಇಟ್ಟ ಅಧಿಕಾರಿ..

ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳ ಅಂತ್ಯಕ್ಕೆ ಮುಹೂರ್ತ ಇಟ್ಟ ಅಧಿಕಾರಿ..

ಸಮಸ್ಯೆಯ ಕಾರಣಕ್ಕೆ ಸಭೆಯಲ್ಲೇ ಸಿಬ್ಬಂದಿಗೆ ಖಡಕ್ ಸೂಚನೆ..

ವ್ಯಾಪಾರಿಗಳ ಸಮಸ್ಯೆಗಳಿಗೆ ಸ್ಪಷ್ಟೀಕರಣ ನೀಡಲು ಜುಲೈ 30ರ ಗಡುವು..

ಉದಯಕುಮಾರ ತಳವಾರ, ಪಾಲಿಕೆಯ ಉಪ ಆಯುಕ್ತರು ಆಡಳಿತ..

ಬೆಳಗಾವಿ : ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸುಮಾರು 11 ಸಾವಿರ ಬೀದಿ ಬದಿ ವ್ಯಾಪಾರಿಗಳು ಪ್ರತಿನಿತ್ಯ ವ್ಯಾಪಾರ ಮಾಡುತ್ತಿದ್ದು, ಪ್ರತಿ ವ್ಯಾಪಾರಿಗಳಿಂದ 10, 30, ಹಾಗೂ 50 ರೂಪಾಯಿಯಂತೆ ಪ್ರತಿದಿನ ಬೂ ಬಾಡುಗೆ ವಸೂಲಿ ಮಾಡಲಾಗುತ್ತದೆ, ಅದರಂತೆ ಚುನಾವಣೆಯ ಮೂಲಕ ವ್ಯಾಪಾರಿ ಸಂಘಗಳ ಪ್ರತಿನಿಧಿಗಳನ್ನು ಕೂಡಾ ಆಯ್ಕೆ ಮಾಡಲಾಗಿದ್ದು, ವ್ಯಾಪಾರಿಗಳ ಸಮಸ್ಯೆಗಳಿಗೆ ಮಾತ್ರ ಕೊನೆಯಿಲ್ಲದಾಗಿದೆ..

ಬಹುದಿನಗಳಿಂದ ವ್ಯಾಪಾರಿಗಳು ಹಾಗೂ ಸಂಘಟನೆಯ ಪ್ರತಿನಿಧಿಗಳು ಪಾಲಿಕೆಯ  ಅಧಿಕಾರಿಗಳ ಮುಂದೆ ತಮ್ಮ ಸಮಸ್ಯೆ ಹೇಳಿಕೊಂಡರೂ ಯಾವುದೇ ಸ್ಪಂದನೆ ಹಾಗೂ ಸಮಸ್ಯೆಗೆ ಪರಿಹಾರ ದೊರಕಿರಲಿಲ್ಲ, ಆದರೆ ಇಂದು ಶುಕ್ರವಾರ  ಮಹಾನಗರ ಪಾಲಿಕೆಯ ಆಡಳಿತ ಉಪ ಆಯುಕ್ತರಾದ ಹಾಗೂ ಪಟ್ಟಣ ಬೀದಿ ಬದಿ ವ್ಯಾಪಾರಿ ಸಮಿತಿಯ ಅಧ್ಯಕ್ಷರಾದ ಉದಯಕುಮಾರ ತಳವಾರ ಅವರು, ಸಮಸ್ಯೆಗೆ ಒಳಾಗದ ವ್ಯಾಪಾರಿಗಳನ್ನು ಹಾಗೂ ವ್ಯಾಪಾರಿ ಪ್ರತಿನಿಧಿಗಳನ್ನು ಕರೆಸಿ ಸಭೆ ನಡೆಸಿ, ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲಿ ಕೆಲ ಸಮಸ್ಯೆಗಳಿಗೆ ಪರಿಹಾರ ಒದಗಿಸಿ, ಸಂಬಂದಿಸಿದ ಪಾಲಿಕೆ ಸಿಬ್ಬಂದಿಗಳಿಗೆ ಕೆಲ ಸೂಚನೆಗಳನ್ನು ನೀಡಿದ್ದಾರೆ..

ಪಿಎಂ ಸ್ವನಿಧಿ ಯೋಜನೆಯಲ್ಲಿ ವ್ಯಾಪಾರಿಗಳಿಗೆ ಮೋಸವಾದ ವಿಷಯ, ಅವೈಜ್ಞಾನಿಕ ಭೂಬಾಡಿಗೆ ಸಂಗ್ರಹ, ವ್ಯಾಪಾರಿ ವಲಯಗಳ ನಿರ್ಮಾಣ ಬಗ್ಗೆ, ಬೀದಿ ಬದಿ ವ್ಯಾಪಾರಿಗಳ ತರಬೇತಿಯ ಬಗ್ಗೆ, ಅವರಿಗೆ ಮಂಜೂರಾದ ಪ್ರಶಸ್ತಿ ಹಣದ ಬಗ್ಗೆ, ಶೇರ್ ರೂಪದಲ್ಲಿ ಮಧ್ಯವರ್ತಿಗಳು ಸಂಗ್ರಹಿಸಿದ ಹಣದ ಬಗ್ಗೆ, ಹೀಗೆ ಹಲವಾರು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.

ಈ ಎಲ್ಲಾ ವಿಷಯ ಆಲಿಸಿದ, ಪಟ್ಟಣ ಬೀದಿ ಬದಿ ವ್ಯಾಪಾರಿ ಸಮಿತಿಯ ಅಧ್ಯಕ್ಷರು ಹಾಗೂ ಪಾಲಿಕೆಯ ಆಡಳಿತದ ಉಪ ಆಯುಕ್ತರು, ಕೂಡಲೇ ಸಂಬಂದಿಸಿದ ವಿಭಾಗದ ಅಧಿಕಾರಿಗಳಿಗೆ ಪತ್ರ ಬರೆಯಲು ತಿಳಿಸಿ, ಜುಲೈ 30 ರಂದು ಸಭೆ ನಿಗದಿ ಮಾಡಿ, ಆವತ್ತು ಸಂಬಂಧಪಟ್ಟ ಅಧಿಕಾರಿಗಳು ಸಭೆಗೆ ಹಾಜರಿದ್ದು, ಈ ಎಲ್ಲಾ ಸಮಸ್ಯೆಗಳಿಗೆ ಸ್ಪಷ್ಟ ಮಾಹಿತಿಯ ಜೊತೆಗೆ, ಉತ್ತರ ನೀಡಬೇಕೆಂದು ಪತ್ರದ ಮೂಲಕ ಸೂಚಿಸಿದ್ದಾರೆ..

ಉಪ ಆಯುಕ್ತರು ಆಡಳಿತ, ಇವರ ನಡೆ ಹಾಗೂ ಸ್ಪಂದನೆಯಿಂದ ಸಮಾಧಾನಗೂಂಡ ವ್ಯಾಪಾರಿಗಳು ಹಾಗೂ ವ್ಯಾಪಾರಿ ಪ್ರತಿನಿಧಿಗಳು ಆದಷ್ಟು ಬೇಗ ಸಮಸ್ಯೆಗಳ ನಿವಾರಣೆ ಮಾಡಲು ಮತ್ತೂಮ್ಮೆ ಮನವಿ ಮಾಡಿಕೊಂಡು, ನಗರದಲ್ಲಿ ಬರುವ ನಾಲ್ಕು ವ್ಯಾಪಾರಿ ವಲಯಗಳಲ್ಲಿ (ವೆಂಡಿಂಗ್ ಜೋನ್)  ಬೂ ಬಾಡಿಗೆಯನ್ನು ಪಟ್ಟಣ ಬೀದಿ ಬದಿ ವ್ಯಾಪಾರಿ ಸಮಿತಿಯ ಪ್ರತಿನಿಧಿಗಳೇ ಸಂಗ್ರಹಿಸಿ ಪಾಲಿಕೆಗೆ ನೀಡುತ್ತೇವೆ ಎಂದಿದ್ದಾರೆ..

ಈ ಸಭೆಯಲ್ಲಿ ಪಾಲಿಕೆಯ ಆಡಳಿತ ಅಧಿಕಾರಿ, ಕಾನೂನು ಸಲಹೆಗಾರರು, ಸಂಬಂದಿಸಿದ ಸಿಬ್ಬಂದಿ, ಇಮಾಮ ಹುಸೇನ ಅಮಿನಸಾಹೇಬ್ ನದಾಫ್, ಬೆಳಗಾವಿ ಜಿಲ್ಲಾಧ್ಯಕ್ಷರು ಹಾಗೂ ಪಟ್ಟಣ ವ್ಯಾಪಾರಿ ಸಮಿತಿ ಸದಸ್ಯರು ಮಹಾನಗರ ಪಾಲಿಕೆ ಬೆಳಗಾವಿ, ಪ್ರಸಾದ ರಾಮಚಂದ್ರ ಕವಳೇಕರ ತಾಲೂಕು ಅಧ್ಯಕ್ಷರು, ಪಟ್ಟಣ ವ್ಯಾಪಾರಿ ಸಮಿತಿ ಸದಸ್ಯರು ಮಹಾನಗರ ಪಾಲಿಕೆ ಬೆಳಗಾವಿ ಹಾಗೂ ವ್ಯಾಪಾರಿಗಳು ಉಪಸ್ಥಿತರಿದ್ದರು..

ವರದಿ ಪ್ರಕಾಶ ಬಸಪ್ಪ ಕುರಗುಂದ..

 

RELATED ARTICLES
- Advertisment -spot_img

Most Popular

error: Content is protected !!