Thursday, June 19, 2025
Google search engine
Homeಸಂಪಾದಕೀಯಬಡ ರೋಗಿಗಳ ಸೇವೆಯಲ್ಲಿಯೇ ಮಹತ್ತರ ಸಾಧನೆ ಮಾಡಿದ ಬಿಮ್ಸನ ಜಿಲ್ಲಾಸ್ಪತ್ರೆ..
spot_img

ಬಡ ರೋಗಿಗಳ ಸೇವೆಯಲ್ಲಿಯೇ ಮಹತ್ತರ ಸಾಧನೆ ಮಾಡಿದ ಬಿಮ್ಸನ ಜಿಲ್ಲಾಸ್ಪತ್ರೆ..

ಬಡ ರೋಗಿಗಳ ಸೇವೆಯಲ್ಲಿಯೇ ಮಹತ್ತರ ಸಾಧನೆ ಮಾಡಿದ ಬಿಮ್ಸನ ಜಿಲ್ಲಾಸ್ಪತ್ರೆ..

ವೈದ್ಯಕೀಯ ಚಿಕಿತ್ಸಾ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ಮೆರೆದ ಜಿಲ್ಲಾಸ್ಪತ್ರೆ..

ಬೆಳಗಾವಿ : ಬಡವರ ಸೇವೆಗೆಂದೆಯೇ ಪ್ರತಿದಿನ ಕಾರ್ಯಪ್ರವರ್ತವಾಗಿರುವ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜಿಲ್ಲಾಸ್ಪತ್ರೆಯು ಖಾಸಗಿ ಆಸ್ಪತ್ರೆಗಳು ತಿರುಗಿ ನೋಡುವಂತಹ ಸಾಧನೆ ಮಾಡಿದ್ದು, ಬೀಮ್ಸ್ ಹಾಗೂ ಜಿಲ್ಲಾಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಹೆಮ್ಮೆಯಿಂದ ಬಿಗುವಂತಾಗಿದೆ..

ಹೌದು, ಇಂದು ಗುರುವಾರ ದಿನಾಂಕ 18/07/2024ರಂದು ಬಿಮ್ಸ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ 50 ವರ್ಷದ ಮಹಿಳೆಯ ಎಡ ಮೂತ್ರಪಿಂಡದಿಂದ 6.5 ಕೆಜಿಯ ಗಡ್ಡೆಯನ್ನು ಯಶಸ್ವಿಯಾಗಿ ತೆಗೆಯಲಾಗಿದೆ, ಈ ಮಹಿಳೆ ತೀವ್ರ ಹೊಟ್ಟೆನೋವಿನಿಂದ ಮೊದಲಿಗೆ ಖಾಸಗಿ ಆಸ್ಪತ್ರೆಗಳಲ್ಲಿ ತೋರಿಸಿದ್ದು, ನಂತರ ಹಣಕಾಸಿನ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಳು..

ಬಿಮ್ಸ್ ಜಿಲ್ಲಾಸ್ಪತ್ರೆಯ (ಬೋಧಕ) ಚಿಕಿತ್ಸಾ ವಿಭಾಗದಲ್ಲಿ ತಪಾಸಣೆ ಮಾಡಿದಾಗ ಎಡ ಮೂತ್ರಪಿಂಡದಲ್ಲಿ ಗಡ್ಡೆ ಇರುವದು ಮತ್ತು ರಕ್ತಸ್ರಾವ ಹಾಗೂ ರಕ್ತಹೀನತೆ ಕಂಡುಬಂದಾಗ, ತುರ್ತು ಶಸ್ತ್ರ ಚಿಕಿತ್ಸೆ ನೀಡುವಂತ ಗಂಭೀರ ಸನ್ನಿವೇಶ ಸೃಷ್ಟಿಯಾಗಿದೆ.

ಈ ಬಗ್ಗೆ ರೋಗಿಯ ಸಂಬಂಧಿಕರ ಬಳಿ ಚರ್ಚಿಸಿ, ಕೂಡಲೇ ಮೂತ್ರ ಪಿಂಡ ಶಸ್ತ್ರ ಚಿಕಿತ್ಸಾ ತಜ್ನರಾದ ಡಾ ಮಹಾಂತೇಶ ತೊಡಕರ, ಡಾ ಸಂದೀಪ ರೆಡ್ಡಿ, ಅರವಳಿಕೆ ತಜ್ಞರಾದ ಡಾ ಪ್ರಶಾಂತ ಹಾಗೂ ಶುಶ್ರೂಷಾ ತಂಡದವರಿಂದ ಸತತ ನಾಲ್ಕು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ, ರೋಗಿಯ ಎಡ ಮೂತ್ರ ಪಿಂಡದಿಂದ 6.5 ಕೆಜಿಯ ಗಡ್ಡೆಯನ್ನು  ಯಶಸ್ವಿಯಾಗಿ ತಗೆದು, ರೋಗಿಗೆ ಜೀವದಾನ ನೀಡಿದ್ದಾರೆ.

ರೋಗಿಗೆ ಸರ್ಕಾರದ ಆರೋಗ್ಯ ವಿಮೆಯ ಅಡಿಯಲ್ಲಿ ಚಿಕಿತ್ಸೆ ನೀಡಿದ್ದು, ಈ ಮಹತ್ತರ ಯಶಸ್ವಿ ಚಿಕಿತ್ಸೆಯಲ್ಲಿ ಭಾಗಿಯಾಗಿ ವೈದ್ಯಕೀಯ ತಂಡಕ್ಕೆ ಬಿಮ್ಸ್ ನಿರ್ದೇಶಕರಾದ ಡಾ  ಅಶೋಕ ಶೆಟ್ಟಿ, ವೈದ್ಯಕೀಯ ಅಧೀಕ್ಷಕ ಡಾ ಈರಣ್ಣ ಪಲ್ಲೇದ, ಜಿಲ್ಲಾ ಶಸ್ತ್ರ ಚಿತ್ಸಕರು ಡಾ ವಿಠ್ಠಲ್ ಶಿಂದೆ ಹಾಗೂ ಸ್ಥಳೀಯ ವೈದ್ಯಾಧಿಕಾರಿ ಡಾ ಸರೋಜ ತಿಗಡಿಯವರು ಶ್ಲಾಘಿಸಿದ್ದಾರೆ ಜೊತೆಗೆ ಈ ಶಸ್ತ್ರ ಚಿಕಿತ್ಸೆ ನೆರವೇರಲು ಆಡಳಿತಾತ್ಮಕವಾಗಿ ಸಹಕರಿಸಿದ ಎಲ್ಲಾ ಆಡಳಿತ ಮಂಡಳಿಗೆ ಕೂಡಾ ಧನ್ಯವಾದ ತಿಳಿಸಿದ್ದಾರೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..

RELATED ARTICLES
- Advertisment -spot_img

Most Popular

error: Content is protected !!