Thursday, June 19, 2025
Google search engine
Homeಸಂಪಾದಕೀಯವಿತಾವಿಯ ಹಣಕಾಸು ಅಧಿಕಾರಿಯಾಗಿ ಪ್ರಶಾಂತ ನಾಯ್ಕ ಅಧಿಕಾರ ಸ್ವೀಕಾರ..
spot_img

ವಿತಾವಿಯ ಹಣಕಾಸು ಅಧಿಕಾರಿಯಾಗಿ ಪ್ರಶಾಂತ ನಾಯ್ಕ ಅಧಿಕಾರ ಸ್ವೀಕಾರ..

ವಿತಾವಿಯ  ಹಣಕಾಸು ಅಧಿಕಾರಿಯಾಗಿ ಪ್ರಶಾಂತ ನಾಯ್ಕ ಅಧಿಕಾರ ಸ್ವೀಕಾರ..

ಬೆಳಗಾವಿ ಸ್ನೇಹಬಳಗದಿಂದ ಅಭಿಮಾನದ ಸತ್ಕಾರ..

ಬೆಳಗಾವಿ : ರಾಜ್ಯದ ಸುಪ್ರಸಿದ್ಧ ತಾಂತ್ರಿಕ ವಿಶ್ವವಿದ್ಯಾಲಯವಾದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಕುಲಪತಿ ಪ್ರೊ, ಎಸ್, ವಿದ್ಯಾಶಂಕರ ಅವರ ನೇತೃತ್ವದಲ್ಲಿ ತನ್ನ ಗುಣಮಟ್ಟದ ಶಿಕ್ಷಣ ಹಾಗೂ ವಿಧ್ಯಾರ್ಥಿ ಕೇಂದ್ರಿತ ಕಾರ್ಯಯೋಜನೆಗಳಿಂದ ಜನಮನ್ನಣೆ ಪಡೆದಿದ್ದು, ತಾಂತ್ರಿಕ ಶಿಕ್ಷಣದಲ್ಲಿ ಹೊಸ ದಾಖಲೆಗಳೊಂದಿಗೆ, ಅಭಿವೃದ್ಧಿಪರ ಸಮಾಜದ ನಿರ್ಮಾಣಕ್ಕೆ ಅಡಿಪಾಯ ಹಾಕುತ್ತಿದೆ..

ಇಂತಹ ಹೆಸರುವಾಸಿಯಾದ ವಿಶ್ವವಿದ್ಯಾಲಯದ ಆಡಳಿತ ವಿಭಾಗಕ್ಕೆ ಮತ್ತೊಬ್ಬ ದಕ್ಷ ಹಾಗೂ ಶಿಸ್ತುಬದ್ಧ ಅಧಿಕಾರಿಯಾದ ಪ್ರಶಾಂತ ನಾಯ್ಕ ಅವರ ಆಗಮನವಾಗಿದ್ದು, ಭವಿಷ್ಯದಲ್ಲಿ ಮತ್ತಷ್ಟು ಸಮಾಜಮುಖಿ ಕೊಡುಗೆಗಳನ್ನು ಅಪೇಕ್ಷಿಸಬಹುದಾಗಿದೆ, ಪ್ರಶಾಂತ ನಾಯ್ಕ ಅವರು ವೀತಾವಿಯ ಹಣಕಾಸು ಅಧಿಕಾರಿಯಾಗಿ, ವಿಶ್ವವಿದ್ಯಾಲಯದ 24ನೇ ಘಟಿಕೋತ್ಸವದ ದಿನವಾದ ನಿನ್ನೆ ತಮ್ಮ ಅಧಿಕಾರವನ್ನು ವಹಿಸಿಕೊಂಡಿದ್ದಾರೆ..

ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆಯವರಾದ ಪ್ರಶಾಂತ್ ನಾಯ್ಕ ಅವರು ಕೆಎಎಸ್ ಅಧಿಕಾರಿಯಾಗಿದ್ದು, ಇದಕ್ಕಿಂತ ಮೊದಲು ಶಿವಮೊಗ್ಗ ಜಿಲ್ಲಾ ಪಂಚಾಯತಿ ಕಚೇರಿಯ ಮುಖ್ಯ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ತಮ್ಮ ಕಾರ್ಯದಕ್ಷತೆಯಿಂದ ಇಲಾಖೆಗೆ ಉತ್ತಮ ಹೆಸರು ಹಾಗೂ ಜನಸಾಮಾನ್ಯರಿಗೆ ಉತ್ತಮ ಸೇವೆ ಒದಗಿಸಿರುವ ಮಾಹಿತಿಯಿದ್ದು, ಅವರ ಕಾರ್ಯಕ್ಷಮತೆ ಹೀಗೆ ಮುಂದುವರೆದು ಉತ್ತಮ ಸಮಾಜದ ಬೆಳವಣಿಗೆಗೆ ದಾರಿಯಾಗಲಿ ಎಂಬುದು ನಮ್ಮ ಪತ್ರಿಕೆಯ ಆಶಯ..

ಇದೇ ಸಂದರ್ಭದಲ್ಲಿ ಪ್ರಶಾಂತ ನಾಯ್ಕ ಅವರ ಬೆಳಗಾವಿಯ ಸ್ನೇಹ ಬಳಗ ಹಾಗೂ ಅಖಿಲ ಕರ್ನಾಟಕ ಡಾ ರಾಜಕುಮಾರ, ಡಾ ಶಿವರಾಜಕುಮಾರ, ರಾಜರತ್ನ ಡಾ, ಪುನೀತ್ ರಾಜಕುಮಾರ ಅಭಿಮಾನಿಗಳ ಸಂಘ ಬೆಳಗಾವಿ, ಇವರ ಕಡೆಯಿಂದ ಗೌರವದ ಅಭಿನಂದನಾ ಸತ್ಕಾರ ನೆರವೇರಿದ್ದು, ಬೆಳಗಾವಿಗೆ ಆತ್ಮೀಯವಾಗಿ ಸ್ವಾಗತ ಮಾಡಿಕೊಂಡಿದ್ದಾರೆ..

ಈ ವೇಳೆ ಸಂಘಟನೆಯ ಸದಸ್ಯರುಗಳಾದ ಶೇಖರ ಕಾಲೇರಿ, ಶಿವಕುಮಾರ ತಳವಾರ, ಸಚಿನ ಬಡಿಗೇರ, ರಮೇಶ ಬಸರಿಮರದ, ವಿಠ್ಠಲ್ ಅಂಕಲಗಿ, ದಿಲಾವರ (ರಾಬರ್ಟ್) ಮುಂತಾದವರು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..

 

RELATED ARTICLES
- Advertisment -spot_img

Most Popular

error: Content is protected !!