Thursday, June 19, 2025
Google search engine
Homeಸಂಪಾದಕೀಯಬೆಳಗಾವಿ:ಕಚ್ಚಿದ ಹಾವನ್ನೇ ಜೀವಂತವಾಗಿ ಹಿಡಿದುಕೊಂಡು ಆಸ್ಪತ್ರೆಗೆ ಬಂದ ಭೂಪ.!
spot_img

ಬೆಳಗಾವಿ:ಕಚ್ಚಿದ ಹಾವನ್ನೇ ಜೀವಂತವಾಗಿ ಹಿಡಿದುಕೊಂಡು ಆಸ್ಪತ್ರೆಗೆ ಬಂದ ಭೂಪ.!

ಬೆಳಗಾವಿ: ಇಲ್ಲೊಬ್ಬ ಭೂಪ ತನ್ನನ್ನು ಕಚ್ಚಿದ ಹಾವನ್ನೇ ಹಿಡಿದುಕೊಂಡು ಆಸ್ಪತ್ರೆಗೆ ಬಂದ ಘಟನೆ ಬೆಳಗಾವಿಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಡೆದಿದೆ.

ಬೆಳಗಾವಿ ಪಕ್ಕದ ಹುಂಚ್ಯಾನಟ್ಟಿ ಗ್ರಾಮದ ಶಾಹೀದ್ ಮನೆಯ ಹತ್ತಿರ ಬಂದ ಹಾವನ್ನು ಹಿಡಿದುಕೊಂಡು ಊರ ಹೊರಗೆ ಬಿಡಲು  ಹೋದ ವೇಳೆ ಹಾವು ಕಚ್ಚಿದೆ.

ಚಿಕಿತ್ಸೆ ಪಡೆಯಲು ಅನುಕೂಲವಾಗಲೆಂದು ಹಾಗೂ ತನಗೆ ಕಚ್ಚಿದ ಹಾವು ಯಾವುದೆಂದು ವೈದ್ಯರಿಗೆ ಗೊತ್ತಾಗಲೆಂದು ಆ ಹಾವನ್ನೇ ಕೈಯಲ್ಲಿ ಹಿಡಿದುಕೊಂದು ನೇರವಾಗಿ ಆಸ್ಪತ್ರೆಗೆ ತೆರಳಿದ್ದಾನೆ.
ಶಾಹೀದ್ ಕೈಯಲ್ಲಿದ್ದ ಜೀವಂತ ಹಾವನ್ನ ಕಂಡು ಆಸ್ಪತ್ರೆ ಸಿಬ್ಬಂದಿ ಅರೆಕ್ಷಣ ಭಯಗೊಂಡಿದ್ದಾರೆ. ಹಾವು ಕಚ್ಚಿದ್ದಕ್ಕೆ ಚಿಕಿತ್ಸೆ ಪಡೆಯಲು ಬಂದಿದ್ದಾನೆ ಎಂಬ ಸುದ್ದಿ ಎಲ್ಲಡೆ ಹರಿದಾಡುತ್ತಿದಂತೆ  ಶಾಹಿದ್‌ ಡಾಕ್ಟರ್ ಗೆ ತೋರಿಸದೇ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ.”

RELATED ARTICLES
- Advertisment -spot_img

Most Popular

error: Content is protected !!