ವರದಿ ಪ್ರಶಾಂತ ಹಿರೇಮನಿ
ಅಥಣಿ: ಕರ್ನಾಟಕ ರಾಜ್ಯಾದ್ಯಂತ ಶೇಕಡಾ 60 ರಷ್ಟು ಕನ್ನಡ ಬಳಸುವಂತೆ ಸರ್ಕಾರದ ಆದೇಶ ಇದ್ದರು ಸಹ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳ ನಾಮಫಲಕದಲ್ಲಿ ಕನ್ನಡ ಅಳವಡಿಸಿಕೊಳ್ಳದಿರುವುದನ್ನ ಖಂಡಿಸಿ ಅಥಣಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಪದಾಧಿಕಾರಿಗಳು ಅನ್ಯ ಭಾಷೆಯ ನಾಮಫಲಕಗಳನ್ನ ತೇರವು ಗೊಳಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕರವೇ ಉಪಾಧ್ಯಕ್ಷ ಮಂಜುನಾಥ ಹೋಳಿಕಟ್ಟಿ ಮಾತನಾಡಿ ಕರ್ನಾಟಕದಲ್ಲಿ ಕನ್ನಡಿಗರೆ ಸಾರ್ವಭೌಮ ಕನ್ನಡವೆ ಸತ್ಯ ಕನ್ನಡವೇ ನಿತ್ಯ ಎಂಬ ಘೋಷ ವಾಕ್ಯ ಹೇಳುತ್ತಲೆ ಎಲ್ಲರು ಸರ್ಕಾರದ ಆದೇಶವನ್ನ ಪಾಲಿಸಿ ಶೇಕಡಾ 60 ರಷ್ಟು ಕನ್ನಡ ಬಳಸುವಂತೆ ಸಾರ್ವಜನಿಕರಿಗೆ ಕರೆ ನೀಡಿದರು
ಇದೆ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಶಬ್ಬಿರ ಸಾಥಬಚ್ಚೆ, ಉಪಾಧ್ಯಕ್ಷ ಸಿದ್ದಗೊಂಡಾ ಹಿಪ್ಪರಗಿ, ಶ್ರೀಶೈಲ ಪುಜಾರಿ, ಸಚಿನ್ ಪಾಟೀಲ,ಜಾಫರ್ ಪಟೇಲ್,ವಿನೋದ ಕಾಂಬಳೆ,ಸುಂದರ ಸೌದಾಗರ,