Wednesday, June 18, 2025
Google search engine
Homeರಾಜ್ಯಅಹ್ಮದಾಬಾದ್ ವಿಮಾನ ದುರಂತದಲ್ಲಿ ಸಾವೀಗಿಡಾದ ದಂಪತಿಗೂ ಬೆಳಗಾವಿಗೆ ಏನು ಸಂಬಂಧ.
spot_img

ಅಹ್ಮದಾಬಾದ್ ವಿಮಾನ ದುರಂತದಲ್ಲಿ ಸಾವೀಗಿಡಾದ ದಂಪತಿಗೂ ಬೆಳಗಾವಿಗೆ ಏನು ಸಂಬಂಧ.

ಬೆಳಗಾವಿ : ಅಹ್ಮದಾಬಾದ್ ವಿಮಾನ ದುರಂತದಲ್ಲಿ ಮೂವರು ಮಕ್ಕಳ ಸಮೇತ ವೈದ್ಯ ದಂಪತಿ ದಾರುಣ ಅಂತ್ಯ ದುರ್ಘಟನೆಯಲ್ಲಿ ಸಾವೀಗಿಡಾದ ಡಾ. ಪ್ರತೀಕ ಜೋಶಿ ಬೆಳಗಾವಿ ಕೆಎಲ್ಇ ವೈದ್ಯಕೀಯ ವಿದ್ಯಾರ್ಥಿಯಾಗಿ 2000 ದಿಂದ 2005 ನೇ ಬ್ಯಾಚ್‌ನಲ್ಲಿ ಎಂಬಿಬಿಎಸ್ ವ್ಯಾಸಾಂಂಗ ಮಾಡುತಿದನ್ನು ದಾರುಣ ಅಂತ್ಯ ಬಗ್ಗೆ ಕೆಎಲ್ಇ ಪ್ರಾಚಾರ್ಯೆ ಡಾ. ನಿರಂಜನಾ ಮಹಾಂತಶೆಟ್ಟಿ ಪ್ರತಿಕ್ರಿಯೆ.

ಇಂದು ಮಾದ್ಯಮ ಜೋತೆ ಮಾತನಾಡಿದ  ಅವರು ಪ್ರತೀಕ ಜೋಶಿ ಒಳ್ಳೆಯ ವಿದ್ಯಾರ್ಥಿ ಆಗಿದ್ದ ಎಲ್ಲರ ಜೊತೆಗೂ ಬೆರೆಯುವ ಗುಣವನ್ನು ಪ್ರತೀಕ ಜೋಶಿ ಹೊಂದಿದ್ದ ರಾಜಸ್ಥಾನ ‌ಮೂಲದ ಡಾ. ಪ್ರತೀಕ ಬೆಳಗಾವಿಯ ಕೆಎಲ್ಇಯಲ್ಲಿ ಎಂಬಿಬಿಎಸ್ ಮಾಡಿದ್ದ.ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡುತ್ತಿದ್ದ ಜೀವನ ಕಟ್ಟಿಕೊಳ್ಳಲು ಕುಟುಂಬ ‌ಸಮೇತ ಲಂಡನ್‌ಗೆ ಹೋಗುತಿದ್ದ ನನ್ನ ವಿದ್ಯಾರ್ಥಿ ದಾರುಣ ಅಂತ್ಯ ಕಂಡಿದ್ದು ನಿಜಕ್ಕೂ ‌ಬೇಸರ ತರಿಸಿದೆ ಅವರ ಕುಟುಂಬಕ್ಕೆ ದೇವರು ಧೈರ್ಯ ನೀಡಲಿ ಎಂದು ಆಶಿಸುವೆ.

ರಾಜಸ್ಥಾನ ಮೂಲದ‌ ಡಾ. ಪ್ರತೀಕ ಜೋಶಿ,‌ ಪತ್ನಿ ಹಾಗೂ ಮೂವರು ಮಕ್ಕಳು ದಾರುಣ ಅಂತ್ಯ ಬಗ್ಗೆ ಸ್ನೇಹಿತನ ಕುಟುಂಬ ಸಾವಿಗಿಡಾಗಿದಕ್ಕೆ ಪ್ರತಿಕ ಸ್ನೇಹಿತರಾದ ಡಾ. ಜ್ಯೋತಿ ಬೆಣ್ಣಿ, ಡಾ. ಮಾನ್ಸಿ ಗೋಸಾವಿ ಬೇಸರ ವ್ಯತಪಡಿಸಿದ ನನ್ನ ಬೆಂಚ್ ಪಕ್ಕವೇ ಕುಳಿತುಕೊಳ್ಳುತ್ತಿದ್ದ ಎಂದು ನೆನಪು ಮಾಡಿಕೊಂಡ ಸ್ನೇಹಿತೆಯರು,ಇದೆ ಸೆಪ್ಟೆಂಬರ್‌‌ನಲ್ಲಿ ನಮ್ಮ ಬ್ಯಾಚ್‌ನ ಬೆಳ್ಳಿ ಮಹೋತ್ಸವ ಕೂಡ ನಿಗದಿ ಆಗಿತ್ತು.

ಆ ಕಾರ್ಯಕ್ರಮಕ್ಕೆ ಬರುವುದಾಗಿ ಕೂಡ ಡಾ. ಪ್ರತೀಕ ಜೋಶಿ ಹೇಳಿದ್ದ. ವಾಟ್ಸಪ್ ಗ್ರೂಪಿನಲ್ಲಿ ಪ್ರತೀಕ ಜೋಶಿ ನಿರಂತರ ಸಂಪರ್ಕದಲ್ಲಿದ್ದ ಎಂದರು.

ಉತ್ತರ ‌ಭಾರತದ ಪ್ರತೀಕ ನಮ್ಮ ಜೊತೆಗೆ ಬರೆಯುವ ಗುಣ ಹೊಂದಿದ್ದ, ಪ್ರತೀಕ ಇಲ್ಲದೇ ನಾವು ಬೆಳ್ಳಿ ಮಹೋತ್ಸವ ಮಾಡಬೇಕಿರುವುದು ಬೇಸರದ ಸಂಗತಿ ಎಂದು ಸಹಪಾಠಿಗಳು ಹೇಳಿದರು.

RELATED ARTICLES
- Advertisment -spot_img

Most Popular

error: Content is protected !!