ಬೆಳಗಾವಿ : ಬೆಳಗಾವಿಯ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ಇರುವ ಗಣೇಶ ಮಂದಿರಕ್ಕೆ ವಟ ಸಾವಿತ್ರಿ ಪೂಜೆ ನೆರವೇರಿಸಿ ಸುಮಂಗಲರಿಗೆ ಉಡಿ ತುಂಬೋ ಕಾರ್ಯಕ್ರಮ ಜರುಗಿತು.
ಈ ದಿನ ವಿವಾಹಿತ ಮಹಿಳೆಯರು ಆಲದ ಮರವನ್ನು ಪೂಜಿಸುತ್ತಾರೆ. ವಟ ಸಾವಿತ್ರಿ ಉಪವಾಸವನ್ನು ಆಚರಿಸುವ ಮೂಲಕ, ಪತಿಯ ಜೀವನವು ದೀರ್ಘವಾಗಿರಲೆಂದು ಪ್ರಾರ್ಥಿಸುತ್ತಾರೆ. ಮತ್ತು ವ್ರತವನ್ನು ಆಚರಿಸುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ.
ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ವಿಷ್ಣು, ಬ್ರಹ್ಮ ಮತ್ತು ಶಿವ ಆಲದ ಮರದಲ್ಲಿ ವಾಸಿಸುತ್ತಾರೆ. ವಟ ಸಾವಿತ್ರಿ ಉಪವಾಸದ ದಿನದಂದು, ವಿವಾಹಿತ ಮಹಿಳೆಯರು ಆಲದ ಮರವನ್ನು ಪ್ರದಕ್ಷಿಣೆ ಹಾಕಿ ಅದರ ಸುತ್ತಲೂ ದಾರ ಕಟ್ಟುತ್ತಾರೆ. ಇದನ್ನು ಮಾಡುವುದರಿಂದ, ಪತಿಗೆ ಅದೃಷ್ಟ ಸಿಗುತ್ತದೆ ಮತ್ತು ಆತನು ಆಸೆಗಳನ್ನು ಪೂರೈಸುತ್ತಾನೆ ಎಂದು ನಂಬಲಾಗಿದೆ.
ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯ ಮತ್ತು ಯೋಗಕ್ಷೇಮಕ್ಕಾಗಿ ವಟ ಸಾವಿತ್ರಿ ಉಪವಾಸವನ್ನು ಆಚರಿಸುತ್ತಾರೆ. ಬೆಳಗಾವಿ ನಗರದ ವಿವಿಧಡೆ ಸುಮಂಗಲೆ ವಟಸಾವಿತ್ರಿ ಪೂಜೆ ನೆರವೇರಿಸಿದರು.