ಬೈಲಹೊಂಗಲ : ಶಿಕ್ಷಣ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನ ಅಳವಡಿಕೆ ಅತ್ಯವಶ್ಯಕ ಎಂದು ಬೈಲಹೊಂಗಲ ರೋಟರಿ ಕ್ಲಬ್ ಅಧ್ಯಕ್ಷ ಮಹಾಂತೇಶ ಜಿಗಜಿನ್ನಿ ಹಾಗೂ ಇನ್ದರ ವೀಲ್ ಅಧ್ಯಕ್ಷೆ ಸುಮಂಗಲಾ ಜಿಗಜಿನ್ನಿ ಹೇಳಿದರು.
ನಯಾನಗರ ಸರ್ಕಾರಿ ಪ್ರೌಢ ಶಾಲೆಯಲ್ಲಿ ರೋಟರಿ ಕ್ಲಬ್, ಹಾಗೂ ಇನ್ನರ್ ವೀಲ್ ವತಿಯಿಂದ ನಯಾನಗರ ಸರ್ಕಾರಿ ಪ್ರೌಢ ಶಾಲೆಗೆ ವಯಕ್ತಿಕವಾಗಿ ಅಂದಾಜು 60ಸಾವಿರಕ್ಕೂ ಹೆಚ್ಚಿನ ಮೌಲ್ಯದ 5 ಗ್ರೀನ್ ಬೋರ್ಡ ವಿತರಣಾ ಸಮಾರಂಭದ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ನೈಜ ಪ್ರತಿಭೆಗಳನ್ನು ತಯಾರು ಮಾಡುವ ಯಾವುದಾದರೂ ಶಾಲೆಗಳಿದ್ದರೆ ಅವು ಸರ್ಕಾರಿ ಶಾಲೆಗಳು ಆದ್ದರಿಂದ ನಾವು ಬಡ ಹಾಗೂ ಕೃಷಿಕರ ಮಕ್ಕಳು ಅದ್ಯಯನ ಮಾಡುವ ಶಾಲೆಗಳನ್ನು ಹುಡುಕಿ ಸಾದ್ಯವಾದಷ್ಟು ಅನುಕೂಲ ಮಾಡಿಕೊಡುತ್ತಿರುವುದಾಗಿ ತಿಳಿಸಿದರು. ಕಾರಣ ನಾವು ಗ್ರಾಮೀಣ ಮಕ್ಕಳು ಎಂಬ ಕೀಳರಿಮೆ ತೊರೆದು, ಸ್ಪರ್ದಾತ್ಮಕ ಜಗತ್ತಿನಲ್ಲಿ ಸತತ ಅದ್ಯಯನ ಹಾಗೂ ಪರಿಶ್ರಮದಿಮದಿಂದ ಸಾಧಕರಾಗಬೇಕು ಎಂದರು.
ಮುಖ್ಯ ಅತಿಥಿ ಆಮಿಸಿದ್ದ ಜೀವ ವಿಮಾ ಅಭಿವೃದ್ಧಿ ಅಧಿಕಾರಿ ಸಂಜಯ ಮಹಾಲೆ, ಪ್ರೌಢ ಶಾಲಾ ಮುಖ್ಯೋಪಾದ್ಯಾಯ ಎನ್.ಆರ್.ಮಾಳನ್ನವರ ದಾನಿಗಳಾದ ಮಹಾಂತೇಶ, ಸುಮಂಗಲಾ ಹಾಗೂ ಪ್ರೇರಣಾ ಜಿಗಜಿನ್ನಿ ಇವರನ್ನು ಸನ್ಮಾನಿಸಿ ಮಾತನಾಡುತ್ತಾ ಸರ್ಕಾರಿ ಶಾಲೆಗಳಿಗೆ ಎಲ್ಲಾ ಸೌಲಭ್ಯಗಳು ಸರ್ಕಾರದಿಂದಲೆ ಬಂದಾಗ ಮಾಡುವುದು ಬೇಗನೆ ಸಾದ್ಯವಿಲ್ಲಾ. ಇಂತಹ ಸಂಘ ಸಂಸ್ಥೆಗಳು, ಪಾಲಕರು ಪೋಷಕರು ಮುಂದೆ ಬಂದಾಗ ಮಾತ್ರ ಸರ್ಕಾರಿ ಶಾಲೆಗಳು ಆಧುನಿಕ ಸೌಲಭ್ಯ ಹೊಂದಲು ಸಾದ್ಯ ಎಂದರು. ಅವರ ಮಗಳು ಪ್ರೇರಣಾ ಜನ್ಮ ದಿನದ ಪ್ರಯುಕ್ತ ಗ್ರೀನ್ ಬೋರ್ಡ ವಿತರಿಸಿರುವುದು ಅತ್ಯಂತ ಸೂಕ್ತವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೌಢ ಶಾಲಾ ಎಸ್ಟಿಎಂಸಿ ಅಧ್ಯಕ್ಷ ನಾರಾಯಣ ನಲವಡೆ ಇವರು ಶಾಲೆಯ ಪರವಾಗಿ ಗ್ರೀನ್ ಬೋರ್ಡ ಸ್ವೀಕರಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ದಾನಿಗಳ ಶ್ರಮ ಸಮಯ ವ್ಯರ್ಥವಾಗದಂತ ಏಕಾಗ್ರತೆಯಿಂದ ಅದ್ಯಯನ ಮಾಡಿ ಉನ್ನತ ನಾಗರೀಕರು ಹಾಗೂ ಜೇಷ್ಟ ಅಧಿಕಾರಿಗಳಾಗಿ ನಾಡಿನ ಸೇವೆ ಮಾಡುವಂತವರಾಗಬೇಕೆಂದರು.
ವೇದಿಕೆಯಲ್ಲಿ ಎಸ್ಟಿಎಂಸಿ ಸದಸ್ಯ ಶ್ರೀಕಾಂತಗೌಡ ಪಾಟೀಲ, ಬಾಬು ಮಾಳಗಿ, ಸೋಮನಿಂಗ ಅಡಕಿ, ಪಮಚಾಯತ ಸದಸ್ಯ ರವಿ ಹುಡೇದ, ಪ್ರೇರಣಾ ಜಿಗಜಿನ್ನಿ, ಬ್ರಹ್ಮಾನಂದ ಕಡ್ಲಿಬುಡ್ಡಿ, ರವೀಂದ್ರಕುಮಾರ ಹಾದಿಮನಿ, ಪತ್ತಾರ ಮೆಡಮ್, ಶಿಕ್ಷಕ ಸಿದ್ದಯ್ಯಾ ಹಿರೇಲ್ಮಠ ಮುಂತಾದವರು ಉಪಸ್ಥಿತರಿದ್ದರು.
ಹಿರಿಯ ಶಿಕ್ಷಕ ಬಸವರಾಜ ಪತ್ತಾರ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕ ಎಸ್.ಎಂ.ಕೊಳ್ಳಿ ವಂದಿಸಿದರು.