Wednesday, June 18, 2025
Google search engine
Homeರಾಷ್ಟ್ರೀಯಯುದ್ದದ ಎದುರಿಸಲು ಕೇಂದ್ರ ಸರ್ಕಾರ ತಯಾರಾಗಿದೆ: ಸಂಸದ ಜಗದೀಶ್ ಶೆಟ್ಟರ್
spot_img

ಯುದ್ದದ ಎದುರಿಸಲು ಕೇಂದ್ರ ಸರ್ಕಾರ ತಯಾರಾಗಿದೆ: ಸಂಸದ ಜಗದೀಶ್ ಶೆಟ್ಟರ್

ಬೆಳಗಾವಿ: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ದದ ವಾತಾವರಣ ನಿರ್ಮಾಣ ಆಗಿದೆ. ಇದನ್ನು ಎದುರಿಸಲು ಕೇಂದ್ರ ಸರ್ಕಾರ ತಯಾರಾಗಿದೆ. ಅದಕ್ಕೆ ಬೇಕಾದ ಪೂರ್ವ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದೆ. ಯುದ್ಧ ಡಿಕ್ಲೇರ್ ಆದ ನಂತರ ನಾಗರೀಕರ‌ ರಕ್ಷಣೆ ಮಾಡಲು ದೇಶದ ವಿವಿಧ ಕಡೆ ಮಾಕ್ ಡ್ರಿಲ್ ಮಾಡಲಾಗುತ್ತಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಅವರು ತಿಳಿಸಿದರು.

ಇಂದು ಬೆಳಗಾವಿಯ ಡಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ಅಧಿಕಾರಿಗಳ ಸಭೆಯನ್ನು ಮಾಡಲಾಗಿದೆ. ಯುದ್ಧ ಡಿಕ್ಲೇರ್ ಆದ ನಂತರ ನಾಗರೀಕರ‌ ರಕ್ಷಣೆಗೆ ‌ಮುಂದಾಗಬೇಕಿದೆ. ಮೋದಿಯವರು ಪಾಕಿಸ್ತಾನಕ್ಕೆ ಪಾಠ ಕಲಿಸುತ್ತಾರೆ ಎನ್ನುವ ನಿರೀಕ್ಷೆ ಜನರಲ್ಲಿದೆ. 224 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಮಾಡುವ ತಯಾರಿ ಮಾಡಿಕೊಳ್ಳಲಾಗಿದೆ. ಯುದ್ಧವೆಂದರೆ ಕೇವಲ ನೇರಾನೇರ ಯುದ್ಧವಲ್ಲ. ಸಿಂಧೂ ನದಿ ಒಪ್ಪಂದ‌ ರದ್ದಾಯ್ತು. ನದಿಯ ಹರಿವು ಕಟ್ ಮಾಡಿದ್ದಾರೆ. ನೇರ ಹಾಗೂ ಪರೋಕ್ಷ ಯುದ್ಧ ಪ್ರಾರಂಭ ಮಾಡಿದೆ.  ಪಾಕಿಸ್ತಾನದ ಮೇಲೆ ಹಾರಿ ಬರುವ ವಿಮಾನಗಳನ್ನು ಬಂದ್ ಮಾಡಲಾಗಿದೆ ಎಂದರು.

ಪಾಕಿಸ್ತಾನಿ ಪ್ರಜೆಗಳನ್ನು ಹೊರಗೆ ಹಾಕ್ತಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕಿತ್ತು. ಕರ್ನಾಟಕದಲ್ಲಿ ಎಲ್ಲೆಲ್ಲೆ  ಪಾಕಿಸ್ತಾನಿಯರಿದ್ದಾರೋ ಅವರನ್ನು ಹೊರ ಹಾಕುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.

RELATED ARTICLES
- Advertisment -spot_img

Most Popular

error: Content is protected !!