ಕಾಗವಾಡ: ಇಂದಿನ ಯುವಕರು ದುಷ್ಚಟಗಳಿಗೆ ಬಲಿಯಾಗದೇ ನಮ್ಮ ಸಂಸ್ಕ್ರತಿ, ಪರಂಪರೆ ನೆಲೆಗಟ್ಟಿನಲ್ಲಿ ಗುರು ಹಿರಿಯರಿಗೆ ಗೌರವ ನೀಡುತ್ತಾ ಭಾರತೀಯ ಪರಂಪರೆ ಜಗತ್ತಿಗೆ ಮಾದರಿಯಾಗಿಸುವ ಅನಿವಾರ್ಯತೆ ಎದುರಾಗಿದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ರಾಜು ಕಾಗೆ ಹೇಳಿದರು.
ಅವರು ದಿ. 11 ರಂದು ಮತಕ್ಷೇತ್ರದ ಉಗಾರ, ಶಿರಗುಪ್ಪಿ ಶಹಾಪುರ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿ ಪೂಜೆ ನೇರವೇರಿಸಿ, ಮಾತನಾಡುತ್ತಿದ್ದರು. ರಾಜ್ಯ ಸರ್ಕಾರ ಕ್ಷೇತ್ರದ ಅಭಿವೃದ್ಧಿಗಾಗಿ ಹಂತ ಹಂತವಾಗಿ ಅನುದಾನ ನೀಡುತ್ತಿದ್ದು, ಆದ್ಯತೆ ಅನುಗುಣವಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ವಿಜಯ ಅಕಿವಾಟೆ, ಸುಭಾಷ ಪಾಟೀಲ, ಅಕ್ಕಾತಾಯಿ ಪೂಜಾರಿ, ಕಾಕಾಸಾಬ ಪಾಟೀಲ್, ಉಮೇಶ ಪಾಟೀಲ್, ವಸಂತ ಖೋತ, ರಾಘವೇಂದ್ರ ಶಹಾ, ಸಮಾಜ ಕಲ್ಯಾಣಧಿಕಾರಿ ಬಸವರಾಜ ಯಾದವಾಡ, ವಿಫುಲ ಪಾಟೀಲ್, ಮಹೇಶ್ ಕುಸನಾಳೆ, ಸಾಗರ ಪೂಜೇರಿ, ರಮೇಶ ಭೀರಢೆಕರ, ಆನಂದ ಕಾಂಬಳೆ, ಮಹೇಶ ಕಾಂಬಳೆ, ಚೇತನ ಕಾಂಬಳೆ, ಸುರೇಶ ಚೌಗಲಾ, ಲೋಕೊಪಯೋಗಿ ಇಂಜಿನಿಯರ ಮಲಿಕಾರ್ಜುನ ಮಗದುಮ್ಮ, ಗುತ್ತಿಗೆದಾರ ರಾಜು ಮುಲ್ಲಾ, ಉಪಸ್ಥಿತರಿದ್ದರು.